ಲೋಕಾಯುಕ್ತದಲ್ಲಿ ಭ್ರಷ್ಟಾಚಾರ: ಸಿಸಿಬಿ ಬದಲಿಗೆ ಸಿಬಿಐ ಸೂಕ್ತ: ನ್ಯಾ. ಹೆಗ್ಡೆ
ಮಂಡ್ಯ, ಜೂ.28: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಲಂಚ ಪ್ರಕರಣವನ್ನು ಸಿಸಿಬಿ ಬದಲಿಗೆ ಸಿಬಿಐಗೆ ವಹಿಸುವುದೇ ಸೂಕ್ತ. ಸಿಸಿಬಿ ಮುಖ್ಯಸ್ಥರ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು ಎಂಬುದನ್ನು ಮರೆಯುವಂತಿಲ್ಲ ಎಂದು ಜಸ್ಟೀಸ್ ಎನ್ . ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಲೋಕಾಯುಕ್ತರ
ಮೇಲೆ
ಜನರಿಗೆ
ನಂಬಿಕೆ
ಕಡಿಮೆಯಾಗುವಂಥ
ಪ್ರಕರಣಗಳು
ಬೆಳಕಿಗೆ
ಬಂದಿರುವುದು
ಬೇಸರದ
ಸಂಗತಿ.
ಅದರೆ,
ಲೋಕಾಯುಕ್ತ
ಸಂಸ್ಥೆ
ಮೇಲೆಯೇ
ಆರೋಪ
ಕೇಳಿ
ಬಂದಿರುವಾಗ
ಉನ್ನತ
ಮಟ್ಟದ
ತನಿಖಾ
ಸಂಸ್ಥೆಯಿಂದ
ತನಿಖೆ
ನಡೆಸುವುದು
ಸೂಕ್ತ.
ಪ್ರಕರಣವನ್ನು
ಸರ್ಕಾರಕ್ಕೆ
ಹಸ್ತಾಂತರಿಸಿ
ಸಿಬಿಐಗೆ
ವಹಿಸಿದರೆ
ಒಳ್ಳೆಯದು
ಎಂದು
ಸಂತೋಷ್
ಹೆಗ್ಡೆ
ಅವರು
ಅಭಿಪ್ರಾಯಪಟ್ಟಿದ್ದಾರೆ.
[ಲೋಕಾಯುಕ್ತದಲ್ಲಿ
ಕೋಟಿ
ಡೀಲ್,
ಸಿಸಿಬಿ
ತನಿಖೆ]
ಲೋಕಾಯುಕ್ತ ಭಾಸ್ಕರರಾವ್ ಪುತ್ರ ಅಶ್ವಿನ್ ಹೆಸರು ಕೇಳಿ ಬಂದಿರುವುದು ಬೇಸರ ತಂದಿದೆ. ತನಿಖೆ ವಹಿಸಿರುವ ಸಿಸಿಬಿಯ ಜಂಟಿ ಆಯುಕ್ತ ಚಂದ್ರಶೇಖರ್ ಮೇಲೂ ಆರೋಪಗಳಿವೆ, ಹಿಂದೊಮ್ಮೆ ಲೋಕಾಯುಕ್ತ ದಾಳಿಯೂ ನಡೆದಿತ್ತು. ನೈತಿಕ ಹೊಣೆ ಹೊತ್ತು ಈ ತನಿಖಾ ತಂಡದಿಂದ ಅವರು ಹೊರ ಬಂದರೆ ಒಳ್ಳೆಯದು ಎಂದಿದ್ದಾರೆ.
ಲೋಕಾಯುಕ್ತ ಸಂಸ್ಥೆಗೆ ಹೊಸ ಕಾನೂನಿನ ಅಗತ್ಯವಿಲ್ಲ. ಸಂಸ್ಥೆಗೆ ಇನ್ನಷ್ಟು ಬಲ ತುಂಬಿದರೆ ಸಾಕು. ಜನರು ಇಟ್ಟಿರುವ ನಂಬಿಕೆ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ನ್ಯಾ. ಸಂತೋಷ್ ಹೆಗ್ಡೆ ಹೇಳಿದರು. [ಲೋಕಾಯುಕ್ತದಲ್ಲೇ ಭ್ರಷ್ಟಾಚಾರ, ಮುಂದೇನು?]
'ಲೋಕಾಯುಕ್ತ ಕಚೇರಿಯಲ್ಲಿಯೇ ಸರ್ಕಾರಿ ಅಧಿಕಾರಿಯೊಬ್ಬರ ಬಳಿ 1 ಕೋಟಿ ರೂ.ಗೆ ಬೇಡಿಕೆಯಿಟ್ಟ ಪ್ರಕರಣದ ಬಗ್ಗೆ ಸಿಸಿಬಿ ತನಿಖೆ ನಡೆಸಲಾಗುತ್ತದೆ. ತಮ್ಮ ಮೇಲಿನ ಆರೋಪ ಸಾಬೀತಾದರೆ ರಾಜೀನಾಮೆ ನೀಡುತ್ತೇನೆ' ಎಂದು ಲೋಕಾಯುಕ್ತ ಭಾಸ್ಕರ್ ರಾವ್ ಅವರು ಶುಕ್ರವಾರ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.