ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಧ್ಯಮ ನಿಯಂತ್ರದ ಮೊದಲ ಹೆಜ್ಜೆ, ವಿಧಾನಸೌಧಕ್ಕೆ ವಾಹನ ಎಂಟ್ರಿ ಬಂದ್

By Manjunatha
|
Google Oneindia Kannada News

ಬೆಂಗಳೂರು, ಜುಲೈ 26: ಮಾಧ್ಯಮಗಳ ಮೇಲೆ ಪರೋಕ್ಷವಾಗಿ ನಿಯಂತ್ರಣ ಹೇರಲು ಮುಂದಾಗಿರುವ ಕುಮಾರಸ್ವಾಮಿ ಅದರ ಮೊದಲ ಹೆಜ್ಜೆಯಾಗಿ ಇಂದು ಮಾಧ್ಯಮದವರ ವಾಹನಗಳು ವಿಧಾನಸೌಧ ಗೇಟ್ ಪ್ರವೇಶಿಸಲು ನಿರ್ಬಂಧಿಸಿದ್ದಾರೆ.

ವಿಧಾನಸೌಧದ ಒಳಗೆ ಮಾಧ್ಯಮದವರ ನಿಯಂತ್ರಣದ ಬಗ್ಗೆ ಮೊನ್ನೆಯಷ್ಟೆ ಮಾತನಾಡಿದ್ದ ಕುಮಾರಸ್ವಾಮಿ, ನಿಗದಿತ ಸಮಯದಲ್ಲಿ ಮಾತ್ರವೇ ಮಾಧ್ಯಮದವರು ವಿಧಾನಸೌದದ ಒಳಗೆ ಪ್ರವೇಶಿಸುವಂತೆ ನಿಯಮ ರೂಪಿಸಲಾಗುವುದು ಎಂದಿದ್ದರು.

ಮಾಧ್ಯಮಗಳ ಮೇಲೆ ನಿಯಂತ್ರಣಕ್ಕೆ ಕುಮಾರಸ್ವಾಮಿ ಯತ್ನಮಾಧ್ಯಮಗಳ ಮೇಲೆ ನಿಯಂತ್ರಣಕ್ಕೆ ಕುಮಾರಸ್ವಾಮಿ ಯತ್ನ

ಅದರಂತೆ ಇಂದು ಮಾಧ್ಯಮದವರ ವಾಹನಗಳನ್ನು ವಿಧಾನಸೌಧದ ಗೇಟ್‌ ಒಳಗೆ ಬಿಡಲಿಲ್ಲ, ಗೇಟ್‌ನ ಹೊರಗಡೆಯೇ ವಾಹನಗಳನ್ನು ನಿಲ್ಲಿಸಿ ಒಳಕ್ಕೆ ನಡೆದುಕೊಂಡು ಹೋಗಬೇಕಾಯಿತು. ಸಾರ್ವಜನಿಕರ ವಾಹನಗಳಿಗೂ ಇದೇ ಪರಿಸ್ಥಿತಿ ಎದುರಾಯಿತು.

Journalists vehicles stopped front of Vidhan souda gate

ಸರ್ಕಾರಿ ವಾಹನಗಳು ಮತ್ತು ವಕೀಲರ ವಾಹನಗಳನ್ನು ಮಾತ್ರವೇ ವಿಧಾನಸೌಧದ ಗೇಟ್‌ನ ಒಳಕ್ಕೆ ಬಿಡಲಾಯಿತು. ಇದರಿಂದ ಕೆಲ ಕಾಲ ಮಾಧ್ಯಮದವರೂ ಹಾಗೂ ಅಲ್ಲಿನ ಪೊಲೀಸರ ನಡುವೆ ವಾಕ್ಸಮರ ಕೂಡಾ ನಡೆಯಿತು.

ಅನ್ನಭಾಗ್ಯದಡಿ 7 ಅಥವ 5 ಕೆಜಿ ಅಕ್ಕಿ?, ಇನ್ನೂ ಗೊಂದಲ ಅನ್ನಭಾಗ್ಯದಡಿ 7 ಅಥವ 5 ಕೆಜಿ ಅಕ್ಕಿ?, ಇನ್ನೂ ಗೊಂದಲ

ಇತ್ತೀಚೆಗೆ ಬಹಿರಂಗವಾಗಿ ಮಾಧ್ಯಮಗಳ ಮೇಲೆ ಅಸಮಾಧಾನ ಹೊರಹಾಕಿದ್ದ ಸಿಎಂ ಅವರು, ಮುಯ್ಯಿ ತೀರಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರಾ ಎಂಬ ಅನುಮಾನ ಇಂದಿನ ಘಟನೆಯಿಂದ ಎದ್ದಿದೆ. ಅಲ್ಲದೆ ಮೊನ್ನೆಯಷ್ಟೆ ವಿಧಾನಸೌಧದಲ್ಲಿ ಕಾರ್ಯದರ್ಶಿ ಎಸ್.ಮೂರ್ತಿ ಅವರ ಹುಟ್ಟುಹಬ್ಬ ಆಚರಣೆ ಮಾಡಿದ್ದ ಮಾಧ್ಯಮಗಳಲ್ಲಿ ಪ್ರಸಾರವಾದ ಕಾರಣ ವಿಧಾನಸೌಧದ ಅಧಿಕಾರಿಗಳೂ ಸಹ ಮಾಧ್ಯಮದವರನ್ನು ವಿಧಾನಸೌಧದಿಂದ ಹೊರಗಿಡಲು ಸಿಎಂ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

English summary
Government trying to control media. It restricted Journalists vehicles to enter Vidhan Soudha premise. recently CM Kumaraswamy shown his unhappiness about media and now he trying to control media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X