ಪಕ್ಷ ಸಂಘಟಿಸಲು ಜೆಡಿಎಸ್ನಿಂದ ರಾಜ್ಯದಾದ್ಯಂತ ಪಾದಯಾತ್ರೆ
Recommended Video
ಬೆಂಗಳೂರು, ಜೂನ್ 24: ಲೋಕಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಜೆಡಿಎಸ್ ಪಕ್ಷವನ್ನು ಪುನರ್ ಸಂಘಟಿಸಲು ದೊಡ್ಡ ಯೋಜನೆಯೊಂದನ್ನು ಜೆಡಿಎಸ್ ಹಾಕಿಕೊಂಡಿದೆ.
ಆಗಸ್ಟ್ ತಿಂಗಳಲ್ಲಿ ಜೆಡಿಎಸ್ ಪಕ್ಷವು ರಾಜ್ಯದಾದ್ಯಂತ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. 2000 ಕಿ.ಮೀ ದೂರದ ಪಾದಯಾತ್ರೆ ಇದಾಗಿರಲಿದ್ದು, ಎರಡು ಹಂತದಲ್ಲಿ ಪಾದಯಾತ್ರೆ ನಡೆಯಲಿದೆ.
ಯಡಿಯೂರಪ್ಪ 10 ಪ್ರಶ್ನೆಗೆ ಕುಮಾರಸ್ವಾಮಿ ಖಡಕ್ ಉತ್ತರಗಳು
ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ ಅವರು ಇತ್ತೀಚೆಗೆ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಭಾವಸ್ಪರ್ಷಿ, ತಲಸ್ಪರ್ಷಿ ಮತ್ತು ಬಹುಸ್ಪರ್ಷಿ ಎಂಬ ಮೂರು ಸೂತ್ರದ ಮೇಲೆ ಈ ಪಾದಯಾತ್ರೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಶಂಕರ್, ನಾಗೇಶ್ ಗೆ ಖಾತೆ ಹಂಚಿದ ಮುಖ್ಯಮಂತ್ರಿ ಕುಮಾರಸ್ವಾಮಿ
1989 ರಲ್ಲಿ ಸಹ ಪಕ್ಷ ಹೀಗೆಯೇ ನೆಲಕಚ್ಚಿತ್ತು, ಆದರೆ ಆಗಲೂ ದೇವೇಗೌಡ ಅವರು ಪಕ್ಷವನ್ನು ಪುನರ್ ಸಂಘಟಿಸಿದ್ದರು. ದೇವೇಗೌಡ ಅವರು ಯಾವಾಗ ಯಾವ ಪಾನ್ ಮುಂದೆ ಮಾಡುತ್ತಾರೋ ಗೊತ್ತಿಲ್ಲ, ಆದರೆ ಅದು ಎದುರಾಳಿಗಳನ್ನು ಗಲಿ-ಬಿಲಿ ಗೊಳಿಸುತ್ತದೆ ಎಂದು ಅವರು ಹೇಳಿದರು.