ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರಕಿಹೊಳಿ ಸಹೋದರರಿಂದ ಸರ್ಕಾರ ಉರುಳಿಸುವುದು ಅಸಾಧ್ಯ: ಮೊಯ್ಲಿ

|
Google Oneindia Kannada News

ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 15: ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಕೆಲ ಮಾಫಿಯಾಗಳು ಕೈ ಹಾಕಿವೆ ಎನ್ನುವ ಸಿಎಂ ಕುಮಾರಸ್ವಾಮಿ ಹೇಳಿಕೆಯಲ್ಲಿ ಸತ್ಯಾಂಶ ಇದ್ದೇ ಇರುತ್ತೆ ಎಂದು ಚಿಕ್ಕಬಳ್ಳಾಪುರದಲ್ಲಿ ಸಂಸದ ವೀರಪ್ಪ ಮೊಯ್ಲಿ ಹೇಳಿದರು.

ಸಮ್ಮಿಶ್ರ ಸರಕಾರದ ಅಸ್ಥಿರತೆ: ಗುಪ್ತಚರ ಇಲಾಖೆ ನೀಡಿದ ಸ್ಪೋಟಕ ವರದಿಯಲ್ಲಿ ಏನಿದೆ? ಸಮ್ಮಿಶ್ರ ಸರಕಾರದ ಅಸ್ಥಿರತೆ: ಗುಪ್ತಚರ ಇಲಾಖೆ ನೀಡಿದ ಸ್ಪೋಟಕ ವರದಿಯಲ್ಲಿ ಏನಿದೆ?

ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಅಂಗವಾಗಿ ಮುದ್ದೇನಹಳ್ಳಿ ಗ್ರಾಮದ ವಿಶ್ವೇಶ್ವರಯ್ಯ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪುಷ್ಮ ನಮನ ಸಲ್ಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ವೀರಪ್ಪ ಮೊಯ್ಲಿ ಯಡಿಯೂರಪ್ಪ ನವರು ವಾಮಮಾರ್ಗದಿಂದ ಆಧಿಕಾರ ಹಿಡಿಯಲು ಯತ್ನ ನಡೆಸುತ್ತಿದ್ದಾರೆ ಎಂದರು.

ಚಿಕ್ಕಬಳ್ಳಾಪುರದಿಂದ ಮೊಯ್ಲಿ ಕಣಕ್ಕಿಳಿದರೆ, ಜೆಡಿಎಸ್‌ ಅಪಸ್ವರ ಸಾಧ್ಯತೆ ಚಿಕ್ಕಬಳ್ಳಾಪುರದಿಂದ ಮೊಯ್ಲಿ ಕಣಕ್ಕಿಳಿದರೆ, ಜೆಡಿಎಸ್‌ ಅಪಸ್ವರ ಸಾಧ್ಯತೆ

ಅಪರೇಷನ್ ಕಮಲ ಮಾಡಿ ಈ ಹಿಂದೆ ಯಡಿಯೂರಪ್ಪ ಅವರೇ ಪಕ್ಷದಿಂದ ಹೊರಗೆ ಬಂದರು. ಕರ್ನಾಟಕದ ಜನ ಸುಸಂಸ್ಕೃತರು ಹಾಗೂ ನಮ್ಮ ಶಾಸಕರು ಹಣ ಅಮಿಷಗಳಿಗೆ ಶಾಸಕರು ಬಗ್ಗಲ್ಲ . ಬಿಜೆಪಿಯವರು ಭ್ರಮೆಯಿಂದ ಅಪರೇಷನ್ ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದರು.

Jarkiholi brother can not de stabelize the government: Veerappa Moily

ಕಳೆದ ಬಾರಿ 18 ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ರು. ಅದ್ರೆ ಈ ಬಾರಿ ಕೇವಲ 2-3 ಸ್ಥಾನ ಬರಬೇಕು ಎಂಬುದು ಅವರ ಆಸೆಯಾದರೆ ಸಮ್ಮಿಶ್ರ ಸರ್ಕಾರ ಉರುಳಿಸಲಿ ಎಂದರು.

ಬೆಳಗಾವಿ ಒಡೆದು ಜಾರಕಿಹೊಳಿ ಸಹೋದರರ ಕಟ್ಟಿ ಹಾಕ್ತಾರಾ ಸಿಎಂ?ಬೆಳಗಾವಿ ಒಡೆದು ಜಾರಕಿಹೊಳಿ ಸಹೋದರರ ಕಟ್ಟಿ ಹಾಕ್ತಾರಾ ಸಿಎಂ?

ಜಾರಕಿಹೊಳಿ ವಿಷಯ ಮಾತನಾಡಿದ ಅವರು, ದಿನ ಬೆಳಗಾದರೆ ಜಾರಕಿಹೊಳಿ ವಿಚಾರ ಮಾತನಾಡಿ ಮಾದ್ಯಮದವರು ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಆದರೆ ಒಬ್ಬ ಜಾರಕಿಹೊಳಿ ಅಥವಾ ಮತ್ತೊಬ್ಬರು ಈ ಪಕ್ಷ ಹಾಗೂ ಸರ್ಕಾರ ಉರುಳಿಸೋಕೆ ಆಗಲ್ಲ ಎಂದರು.

English summary
Jarkiholi brothers can not destabelize the government says congress MP Veerappa Moyli. He also said Yeddyurappa and team pick wrong way to break government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X