ಮೇ 13ರಂದು ಜಲಧಾರೆ ಸಮಾವೇಶ: 5 ಲಕ್ಷಕ್ಕೂ ಹೆಚ್ಚು ಜನ ಭಾಗಿ ನಿರೀಕ್ಷೆ
ಬೆಂಗಳೂರು,ಮೇ 6: ಜೆಡಿಎಸ್ನಿಂದ ಕಳೆದ ತಿಂಗಳು 16ರಂದು ಹನುಮ ಜಯಂತಿ ದಿನ ಆರಂಭವಾದ ಜನತಾ ಜಲಧಾರೆ ಕಾರ್ಯಕ್ರಮ ರಾಜ್ಯಾದ್ಯಂತ ಯಸ್ವಿಯಾಗಿ ನಡಿದಿದ್ದು ಮೇ 13ರಂದು ಸಮಾರೋಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದೇ ಮೇ ತಿಂಗಳ 13ರಂದು ನೆಲಮಂಗಲ ಟೋಲ್ ಪ್ಲಾಜಾ ಬಳಿ ಬೃಹತ್ ಜನತಾ ಜಲಧಾರೆ ಸಮಾವೇಶದ ಮೂಲಕ ಸಮಾಪ್ತಿಯಾಗಲಿದೆ. ಬೃಹತ್ ಸಮಾವೇಶದ ಸಿದ್ಧತೆ ಮತ್ತು ರೂಪುರೇಶೆಗಳ ಬಗ್ಗೆ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಪಕ್ಷದ ಪ್ರಮುಖರ ಸಭೆ (ಕೋರ್ ಕಮಿಟಿ) ಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.
ಸರ್ಟಿಫಿಕೇಟ್ ಕೊಡಿಸುವುದರಲ್ಲಿ ಅಶ್ವತ್ಥ ನಾರಾಯಣ ಎತ್ತಿದ ಕೈ ಎಂದ ಕುಮಾರಸ್ವಾಮಿ
ಮಾಜಿ ಪ್ರಧಾನಮಂತ್ರಿಗಳಾದ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮಕ್ಷಮದಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಷೆಂಪೂರ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು. ಸಭೆಯ ಬಳಿಕ ಮಾಜಿ ಸಚಿವ ಬಂಡೆಪ್ಪ ಖಾಷೆಂಪೂರ ಮಾಧ್ಯಮಗೋಷ್ಠಿ ನಡೆಸಿದರು.
ಸಮಾವೇಶದಲ್ಲಿ 5 ಲಕ್ಷಕ್ಕಿಂತ ಹೆಚ್ಚು ಜನ
"ರಾಜ್ಯದ 184 ವಿಧಾನಸಭೆ ಕ್ಷೇತ್ರಗಳಲ್ಲಿ ಜಲಧಾರೆಯ 15 ಗಂಗಾ ರಥಗಳು ಯಶಸ್ವಿಯಾಗಿ ಸಂಚರಿಸುತ್ತಿವೆ. ಇವುಗಳ ಮೂಲಕ ರಾಜ್ಯದ ಎಲ್ಲಾ ಜೀವ ನದಿಗಳಿಂದ ಸಂಗ್ರಹ ಮಾಡಲಾಗಿರುವ ಪುಣ್ಯಜಲವನ್ನು ಒಂದು ಬೃಹತ್ ಕಲಶಕ್ಕೆ ತುಂಬಿಸಿ ಸಮಾವೇಶದಲ್ಲಿ ಪೂಜೆ ನೆರವೇರಿಸಲಾಗುವುದು. ಈ ಸಮಾವೇಶದಲ್ಲಿ 5 ಲಕ್ಷಕ್ಕಿಂತ ಹೆಚ್ಚು ಜನ ಸೇರಲಿದ್ದಾರೆ,'' ಮಾಜಿ ಸಚಿವ ಬಂಡೆಪ್ಪ ಖಾಷೆಂಪೂರ ಹೇಳಿದರು.
ಮೇ
16ರ
ಸಂಜೆ
4
ಗಂಟೆಗೆ
ಆರಂಭ
ಆಗಲಿರುವ
ಸಮಾವೇಶದಲ್ಲಿ
ಮಾಜಿ
ಹೆಚ್.ಡಿ.ದೇವೇಗೌಡರು,
ಮಾಜಿ
ಮುಖ್ಯಮಂತ್ರಿ
ಹೆಚ್.ಡಿ.ಕುಮಾರಸ್ವಾಮಿ,
ಪಕ್ಷದ
ರಾಜ್ಯ
ಅಧ್ಯಕ್ಷ
ಸಿಎಂ
ಇಬ್ರಾಹಿಂ,
ಸಂಸದೀಯ
ಮಂಡಳಿ
ಅಧ್ಯಕ್ಷ
ಹೆಚ್.ಕೆ.ಕುಮಾರಸ್ವಾಮಿ
ಸೇರಿದಂತೆ
ಪಕ್ಷದ
ಎಲ್ಲ
ಶಾಸಕರು,
ಹಿರಿಯ
ಮುಖಂಡರು,
ಸಾಹಿತಿಗಳು,
ಬುದ್ಧಿಜೀವಿಗಳು,
ಕನ್ನಡಪರ,
ರೈತಪರ
ಹೋರಾಟಗಾರರು
ಭಾಗಿಯಾಗುವರು.
ಮುಂದಿನ
ಚುನಾವಣೆಯಲ್ಲಿ
ಪಕ್ಷಕ್ಕೆ
ಬಹುಮತ
ಸಿಕ್ಕರೆ
ಐದು
ವರ್ಷಗಳಲ್ಲಿ
ಜನತಾ
ಸರಕಾರ
ಕೈಗೊಳ್ಳಲಿರುವ
ಕಾರ್ಯಕ್ರಮಗಳ
ಬಗ್ಗೆ
ಆ
ಸಮಾವೇಶದಲ್ಲಿ
ಸಂಕಲ್ಪ
ಮಾಡಲಾಗುವುದು
ಎಂದು
ಹೇಳಿದರು.
ಗಂಗಾ ಆರತಿ
ಸಮಾವೇಶದ ಕೊನೆಯಲ್ಲಿ ಗಂಗಾ ಪೂಜೆ ನೆರವೇರಿಸಿದ ಮೇಲೆ ಅತ್ಯಂತ ಸಂಪ್ರದಾಯಬದ್ಧವಾಗಿ ಗಂಗಾ ಆರತಿಯನ್ನು ನೆರವೇರಿಸಲಾಗುವುದು. ಈ ಕಾರ್ಯಕ್ರಮ ನಡೆಸಿಕೊಡಲು ವಾರಾಣಸಿಯಿಂದ ಪಂಡಿತರನ್ನು ಕರೆಸಲಾಗುವುದು. ಸಂಜೆಯ ಹೊತ್ತಿನಲ್ಲಿ ಆರತಿ ಕಾರ್ಯಕ್ರಮ ವಿಶೇಷವಾಗಿ ಮೂಡಿಬರಲಿದೆ.
ಐದು ಉಪ ಸಮಿತಿ ರಚನೆ:
ಜಲಧಾರೆ ಸಮಾವೇಶವನ್ನು ಯಶಸ್ವಿಯಾಗಿ ಮಾಡುವ ಉದ್ದೇಶದಿಂದ ಐದು ಉಪ ಸಮಿತಿಗಳನ್ನು ರಚನೆ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಲಾಯಿತು. ವಾಹನ ನಿಲುಗಡೆ, ಊಟ, ಮಾಧ್ಯಮ, ಸಭಾಂಗಣ ಹಾಗೂ ಗಂಗಾ ಆರತಿ ವ್ಯವಸ್ಥೆಗಾಗಿ ಈ ಉಪ ಸಮಿತಿಗಳನ್ನು ರಚನೆ ಮಾಡಲಾಗಿದೆ. ಅವುಗಳ ಮುಖ್ಯಸ್ಥರು ಯಾರು ಎಂಬುದನ್ನು ಒಂದೆರಡು ದಿನದಲ್ಲಿ ತಿಳಿಸಲಾಗುವುದು.
ಅಭ್ಯರ್ಥಿ ಆಯ್ಕೆ:
ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನಾಗಿ ಚಂದ್ರಶೇಖರ್ ಲೋಣಿ ಅವರನ್ನು ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಂಡೆಪ್ಪ ಖಾಷೆಂಪೂರ ಹೇಳಿದರು.
ಸಭೆಯಲ್ಲಿ
ಮಾಜಿ
ಪ್ರಧಾನ
ಮಂತ್ರಿಗಳಾದ
ಎಚ್.ಡಿ.ದೇವೇಗೌಡರು,
ಮಾಜಿ
ಮುಖ್ಯಮಂತ್ರಿ
ಎಚ್.ಡಿ.ಕುಮಾರಸ್ವಾಮಿ
ಜತೆಗೆ,
ಮಾಜಿ
ಸಚಿವ
ಎನ್.
ಎಂ.ನಬಿ,
ಮಾಜಿ
ಸಂಸದ
ಕುಪೆಂದ್ರ
ರೆಡ್ಡಿ,
ವಿಧಾನ
ಪರಿಷತ್
ಸದಸ್ಯರಾದ
ಕೆ.ಎನ್.ತಿಪ್ಪೇಸ್ವಾಮಿ,
ಗೋವಿಂದರಾಜು,
ಶಾಸಕರಾದ
ಕೆ.ಎಂ.
ಕೃಷ್ಣಾರೆಡ್ಡಿ,
ವೆಂಕಟರಾವ್
ನಾಡಗೌಡ,
ಪುಟ್ಟರಾಜು,
ಅನ್ನದಾನಿ,
ರಾಜಾ
ವೆಂಕಟಪ್ಪ
ನಾಯಕ,
ಮಾಜಿ
ಶಾಸಕಿ
ಶಾರದಾ
ಪೂರ್ಯ
ನಾಯಕ್,
ತಿಮ್ಮರಾಯಪ್ಪ,
ವೆಂಕಟ
ಶಿವಾರೆಡ್ಡಿ,
ವಿಧಾನ
ಪರಿಷತ್
ಮಾಜಿ
ಸದಸ್ಯ
ಟಿ.ಎ.ಶರವಣ
ಹಾಗೂ
ಜಪ್ರುಲ್ಲಾ
ಖಾನ್,
ಸುಧಾಕರ
ಶೆಟ್ಟಿ,
ಸಮೃದ್ಧಿ
ಮಂಜುನಾಥ್,
ನಾಸಿರ್
ಭಗವಾನ್,
ವಿಲ್ಸನ್
ರೆಡ್ಡಿ,
ಹನುಮಂತಪ್ಪ
ಮಾವಿನಮರದ
ಮುಂತಾದವರು
ಹಾಜರಿದ್ದರು.
Recommended Video