ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ನರೇಂದ್ರ ಮೋದಿ ಅವರಷ್ಟು ಪ್ರಬುದ್ಧನಲ್ಲ

|
Google Oneindia Kannada News

ಬೆಂಗಳೂರು, ಆ.21 : "ನಾನು ನರೇಂದ್ರ ಮೋದಿ ಅವರಷ್ಟು ಪ್ರಬುದ್ಧನಲ್ಲ. ಆದ್ದರಿಂದಲೇ ರಾಜಕೀಯವಾಗಿ ಹಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದೆ, ಸಂಘ ಪರಿವಾರದ ಗರಡಿಯಲ್ಲಿ ಬೆಳೆದ ನಾನು ಹಣ ಮತ್ತು ಅಧಿಕಾರದ ಆಸೆಯಿಂದ ಬಿಜೆಪಿಸ ಸೇರುತ್ತಿಲ್ಲ" ಎಂದು ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಮಹಾದೇವ ಬಿದರಿ ಹೇಳಿದ್ದಾರೆ.

ಬುಧವಾರ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಬೆಂಬಲಿಗರೊಂದಿಗೆ ಶಂಕರ ಬಿದರಿ ಅವರು ಬಿಜೆಪಿಗೆ ಸೇರ್ಪಡೆಯಾದರು. ನಂತರ ಮಾತನಾಡಿದ ಅವರು, ನಾನು ಹಿಂದೆ ಸೇರಿದ್ದ ಪಕ್ಷದ ನಾಯಕರು ನನ್ನನ್ನು ಸಂಘ ಪರಿವಾರದವನು ಎಂಬ ಅನುಮಾನದಿಂದ ನೋಡಿದರು. ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಆದ್ದರಿಂದ ಪಕ್ಷವನ್ನು ಬಿಡಬೇಕಾಯಿತು ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಿ.ಟಿ.ರವಿ ಮುಂತಾದ ನಾಯಕರು ಶಂಕರ ಬಿದರಿ ಅವರಿಗೆ ಪಕ್ಷದ ಬಾವುಟ ನೀಡುವ ಮೂಲಕ ಅವರನ್ನು ಬಿಜೆಪಿಗೆ ಬರಮಾಡಿಕೊಂಡರು. ಚಿತ್ರಗಳಲ್ಲಿ ನೋಡಿ ಬಿದರಿ ಬಿಜೆಪಿ ಸೇರ್ಪಡೆ

ಬಿಜೆಪಿಗೆ ಶಂಕರ ಬಿದರಿ ಸೇರ್ಪಡೆ

ಬಿಜೆಪಿಗೆ ಶಂಕರ ಬಿದರಿ ಸೇರ್ಪಡೆ

ನಿವೃತ್ತ ಪೊಲೀಸ್ ಮಹಾನಿರ್ದೇಶಕ ಮತ್ತು ಸರ್ವ ಜನಶಕ್ತಿ ಪಕ್ಷದ ಸಂಸ್ಥಾಪಕ ಶಂಕರ ಬಿದರಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಚಿವ ಸಿ.ಟಿ.ರವಿ ಮುಂತಾದ ನಾಯಕರು ಶಂಕರ ಬಿದರಿ ಅವರಿಗೆ ಪಕ್ಷದ ಬಾವುಟ ನೀಡುವ ಮೂಲಕ ಅವರನ್ನು ಬಿಜೆಪಿಗೆ ಬರಮಾಡಿಕೊಂಡರು.

ನರೇಂದ್ರ ಮೋದಿ ವಿಚಾರಧಾರೆ ಮೆಚ್ಚಿದ್ದೇನೆ

ನರೇಂದ್ರ ಮೋದಿ ವಿಚಾರಧಾರೆ ಮೆಚ್ಚಿದ್ದೇನೆ

ಹಿಂದೆ ಸೇರಿದ್ದ ಪಕ್ಷದ ನಾಯಕರು ನನ್ನನ್ನು ಸಂಘ ಪರಿವಾರದವನು ಎಂಬ ಅನುಮಾನದಿಂದ ನೋಡಿದರು. ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಆದ್ದರಿಂದ ಪಕ್ಷವನ್ನು ಬಿಡಬೇಕಾಯಿತು ಎಂದು ಹೇಳಿದರ ಶಂಕರಬಿದರಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ವಿಚಾರಧಾರೆಯನ್ನು ಮೆಚ್ಚಿ ಬಿಜೆಪಿ ಸೇರುತ್ತಿದ್ದೇನೆ ಎಂದು ತಿಳಿಸಿದರು.

ನಾನು ಸಂಘಪರಿವಾರದವನು

ನಾನು ಸಂಘಪರಿವಾರದವನು

12 ವಯಸ್ಸಿನಲ್ಲೇ ನಾನು ಸಂಘ ಪರಿವಾರದ ಶಾಖೆಗೆ ಹೋಗುತ್ತಿದ್ದೆ. ಸಂಘದ ಸಹವಾಸ ನನ್ನಲ್ಲಿ ದೇಶಭಕ್ತಿಯನ್ನು ಬೆಳೆಸಿತು. ಶಿಸ್ತನ್ನು ಕಲಿಸಿತು ಎಂದು ಹೇಳಿದ ಶಂಕರ ಬಿದರಿ ನಾನು ಸಂಘಪರಿವಾರದವನು, ಹಣ ಮತ್ತು ಅಧಿಕಾರದ ಆಸೆಯಿಂದ ಬಿಜೆಪಿ ಸೇರುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಮೋದಿಯಂತೆ ಪ್ರಬುದ್ಧನಲ್ಲ

ಮೋದಿಯಂತೆ ಪ್ರಬುದ್ಧನಲ್ಲ

ನಾನು ನರೇಂದ್ರ ಮೋದಿ ಅವರಷ್ಟು ಪ್ರಬುದ್ಧನಲ್ಲ. ಆದ್ದರಿಂದ ರಾಜಕೀಯವಾಗಿ ಹಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದೆ. ಈಗ ತಪ್ಪುಗಳ ಅರಿವಾಗಿದೆ. ಬಿಜೆಪಿ ಗಂಗಾನದಿ ಇದ್ದಂತೆ. ಪಕ್ಷ ಸೇರಲು ಯಾವುದೇ ಷರತ್ತು ವಿಧಿಸಿಲ್ಲ. ಯಾವುದೇ ಹುದ್ದೆಯನ್ನು ಬಯಸಿಲ್ಲ. ನನ್ನ ಸಾಮರ್ಥ್ಯ ನೋಡಿ ನಾಯಕರು ಕೆಲಸವಹಿಸಿದರೆ ಅದನ್ನು ಮಾಡುತ್ತೇನೆ ಎಂದರು.

ದೇವರಿಗೆ ವಿಶೇಷ ಪೂಜೆ

ದೇವರಿಗೆ ವಿಶೇಷ ಪೂಜೆ

ಮಲ್ಲೇಶ್ವರಂ ಬಿಜೆಪಿ ಕಚೇರಿಗೆ ಆಗಮಿಸುವ ಮುನ್ನ ಶಂಕರ ಬಿದರಿ ಅವರು ಪತ್ನು ಸಮೇತರಾಗಿ ಮಹಾಗಣಪತಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

English summary
Former IGP and Janashkthi party president Shankar Bidari joined BJP on Wednesday, August 20. Bidari joined the party in the presence of BJP state president Prahlad Joshi and former CM Jagadish Shettar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X