ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಖೇಣಿ ಮನೆ ಮೇಲೆ ಐಟಿ ದಾಳಿ
ಬೀದರ್, ಮೇ 11: ಬೀದರ್ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಅಶೋಕ್ ಖೇಣಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಕ್ರಮವಾಗಿ ಮನೆಯಲ್ಲಿ ಹಣ ಸಂಗ್ರಹಿಸಿಟ್ಟಿರುವ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ ಮತ್ತು ಸಿಇಒ ಡಾ. ಸೆಲ್ವಮಣಿ ನೇತೃತ್ವದಲ್ಲಿ ಮನೆ ಮೇಲೆ ದಾಳಿ ನಡೆಸಲಾಗಿದೆ.
ಬೀದರ್ ನಗರದ ರಾಂಪುರೇ ನಗರದಲ್ಲಿರುವ ಅಶೋಕ್ ಖೇಣಿ ಮನೆ ದಾಳಿ ನಡೆಸಲಾಗಿದ್ದು ಹಲವು ಗಂಟೆಗಳಿಂದ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಸದಾಶಿವ ನಗರದಲ್ಲಿರುವ ಖೇಣಿ ಮನೆ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಕಡತ ಪರಿಶೀಲನೆ ನಡೆಸುತ್ತಿದ್ದಾರೆ.
Comments
ashok kheny bidar it raid congress karnataka assembly elections 2018 ಕರ್ನಾಟಕ ವಿಧಾನಸಭೆ ಚುನಾವಣೆ 2018 ಆದಾಯ ತೆರಿಗೆ ಐಟಿ ದಾಳಿ ಬೀದರ್ ಅಶೋಕ್ ಖೇಣಿ
English summary
Karnataka assembly elections 2018: Income tax officials conduct raids at Bidar and Bengaluru on houses and premises of Bidar Dakshin MLA Ashok Kheny.
Story first published: Friday, May 11, 2018, 13:54 [IST]