ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಯೂಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಕೆ ಮಾಡಲಿದೆ ಇಸ್ಕಾನ್?

|
Google Oneindia Kannada News

ಬೆಂಗಳೂರು, ಡಿಸೆಂಬರ್ 04 : ಮಧ್ಯಾಹ್ನದ ಬಿಸಿಯೂಟದಲ್ಲಿ ಇಸ್ಕಾನ್ ಇನ್ನು ಮುಂದೆ ಈರುಳ್ಳಿ, ಬೆಳ್ಳುಳ್ಳಿ ಬಳಕೆ ಮಾಡಲಿದೆಯೇ?. ಹೌದು, ಸಾರ್ವಜನಿಕ ಶಿಕ್ಷಣ ಇಲಾಖೆ ಊಟದಲ್ಲಿ ಈರುಳ್ಳಿ ಬಳಕೆ ಮಾಡಬೇಕು ಎಂದು ಸೂಚನೆ ನೀಡಿದೆ.

ಕರ್ನಾಟಕದ 6 ಜಿಲ್ಲೆಗಳ 2814 ಶಾಲೆಗಳ 4,42,108 ಮಕ್ಕಳಿಗೆ ಅಕ್ಷಯ ಪಾತ್ರೆ ಯೋಜನೆಯಡಿ ಇಸ್ಕಾನ್ ಮಧ್ಯಾಹ್ನದ ಬಿಸಿಯೂಟ ಪೂರೈಕೆ ಮಾಡುತ್ತಿದೆ. ಆದರೆ, ಇಸ್ಕಾನ್ ಊಟದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಕೆ ಮಾಡುವುದಿಲ್ಲ.

'ಇಂದಿರಾ ಕ್ಯಾಂಟೀನ್'ಗೆ ಈರುಳ್ಳಿ-ಬೆಳ್ಳುಳ್ಳಿ ಸಂಕಟ'ಇಂದಿರಾ ಕ್ಯಾಂಟೀನ್'ಗೆ ಈರುಳ್ಳಿ-ಬೆಳ್ಳುಳ್ಳಿ ಸಂಕಟ

ಈಗ ಶಿಕ್ಷಣ ಇಲಾಖೆ ಇಸ್ಕಾನ್ ಬಿಸಿಯೂಟದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಕೆ ಮಾಡಬೇಕು ಎಂದು ಸೂಚನೆ ಕೊಟ್ಟಿದೆ. ರಾಜ್ಯ ಆಹಾರ ಆಯೋಗ ಈರುಳ್ಳಿ ಬಳಕೆ ಮಾಡದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು.

ಪೌರಕಾರ್ಮಿಕರಿಗೆ ಇಸ್ಕಾನ್‌ ಬದಲಾಗಿ ಇಂದಿರಾ ಕ್ಯಾಂಟೀನ್‌ ಊಟಪೌರಕಾರ್ಮಿಕರಿಗೆ ಇಸ್ಕಾನ್‌ ಬದಲಾಗಿ ಇಂದಿರಾ ಕ್ಯಾಂಟೀನ್‌ ಊಟ

ISKCON to use onion and garlic in midday meal

ಗುರುವಾರ ಹೊರತುಪಡಿಸಿ ಉಳಿದ ದಿನ ಊಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಕೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ಕಳಿಸಿದ್ದ ಪತ್ರಕ್ಕೆ ಇಸ್ಕಾನ್ ಇನ್ನೂ ಉತ್ತರವನ್ನು ನೀಡಿಲ್ಲ. ಇಸ್ಕಾನ್ ಇದಕ್ಕೆ ನಿರಾಕರಿಸಿದರೆ ಪರ್ಯಾಯ ಮಾರ್ಗಕ್ಕಾಗಿ ಇಲಾಖೆ ಚಿಂತನೆ ನಡೆಸಿದೆ.

ಕನ್ನಡ ಸವಿನುಡಿಯ ಜೊತೆ ಶಾಲಾ ಮಕ್ಕಳಿಗಿನ್ನು ಹಾಲು ಜೇನಿನ ಸವಿಕನ್ನಡ ಸವಿನುಡಿಯ ಜೊತೆ ಶಾಲಾ ಮಕ್ಕಳಿಗಿನ್ನು ಹಾಲು ಜೇನಿನ ಸವಿ

ಮತ್ತೊಂದು ಕಡೆ ಕ್ಷೀರಭಾಗ್ಯ ಯೋಜನೆಯಡಿ ಇಸ್ಕಾನ್ ಶಾಲಾ ಮಕ್ಕಳಿಗೆ ತಣ್ಣನೆಯ ಹಾಲನ್ನು ಪೂರೈಕೆ ಮಾಡುತ್ತಿದೆ. ಇದಕ್ಕೆ ಆಹಾರ ಆಯೋಗ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಸಿ ಹಾಲನ್ನು ನೀಡುವಂತೆಯೂ ಸೂಚನೆ ನೀಡಿದೆ.

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಯೋಜನೆ ಟೆಂಡರ್ ಪಡೆಯಲು ಸಹ ಇಸ್ಕಾನ್ ಪ್ರಯತ್ನ ನಡೆಸಿತ್ತು. ಆದರೆ, ಈರುಳ್ಳಿ, ಬೆಳ್ಳುಳ್ಳಿ ಬಳಕೆ ಮಾಡುವುದಿಲ್ಲ ಎಂಬ ಕಾರಣಕ್ಕೆ ಟೆಂಡರ್ ಕೈ ತಪ್ಪಿತ್ತು.

English summary
Karnataka education department directed ISKCON foundation to use Onion and Garlic in midday meal. ISKCON providing midday meal to 2814 school across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X