ಕೊಡಗು ಜಿಲ್ಲೆ ಮಳೆ ಕಾರ್ಯಾಚರಣೆ ವಿಡಿಯೋ ಟ್ವೀಟ್ ಮಾಡಿದ ಐಪಿಎಸ್ ರೂಪಾ
Recommended Video
ಬೆಂಗಳೂರು, ಆಗಸ್ಟ್ 16: ಮಳೆಯಿಂದ ಭಾರೀ ಸಮಸ್ಯೆಗೆ ಈಡಾಗಿರುವ ಕೊಡಗಿನ ಕುಶಾಲನಗರದ ವಿವಿಧೆಡೆ ನೂರಾ ಎಂಬತ್ತು ಮಂದಿಯನ್ನು ರಕ್ಷಣೆ ಮಾಡಿರುವ ಬಗ್ಗೆ ಐಪಿಎಸ್ ಅಧಿಕಾರಿ ಡಿ.ರೂಪಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಾಗರಿಕ ರಕ್ಷಣಾ ಸ್ವಯಂಸೇವಕರ ಈ ಕೆಲಸದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯದ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.
ಡಾ.ಚೇತನ್ ಅವರ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯ ಪಡೆಯ ಮೂವತ್ತೊಂದು ಮಂದಿ ಕಳೆದ ಎರಡು ದಿನಗಳಿಂದ ಕೊಡಗಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸ್ವಯಂಸೇವಕರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದು, ಸಮಾಜಕ್ಕೆ ಅರ್ಥಪೂರ್ಣವಾದ ಕೊಡುಗೆ ನೀಡುತ್ತಿದ್ದಾರೆ ಎಂದು ವಿಡಿಯೋವೊಂದನ್ನು ಸಹ ಟ್ವೀಟ್ ಮಾಡಿದ್ದಾರೆ.
ಧಾರಾಕಾರ ಮಳೆ: ವರುಣನ ಆರ್ಭಟ 'ಸಾಕಪ್ಪಾ ಸಾಕು' ಎಂದ ಕೊಡಗು ಜನತೆ
ಕೊಡಗು ಜಿಲ್ಲೆಯಲ್ಲಿ ಎರಡು ದಿನದಿಂದ ಭಾರೀ ಮಳೆ ಆಗುತ್ತಿದೆ. ಕೇರಳಕ್ಕೆ ಹೋಗುವ ಹೆದ್ದಾರಿ ಕೂಡ ಬಂದ್ ಆಗಿದೆ. ಜಿಲ್ಲೆಯಲ್ಲಿ ಪರಿಹಾರ ಕಾರ್ಯಾಚರಣೆ ತೀವ್ರಗೊಳಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಅಗತ್ಯ ನೆರವುಗಳನ್ನು ಪಡೆಯುವಂತೆ, ಜನರ ರಕ್ಷಣೆಗೆ ಹೆಲಿಕಾಪ್ಟರ್ ಗಳನ್ನು ಬಳಸುವಂತೆ ಕೂಡ ಸೂಚನೆ ನೀಡಿದ್ದಾರೆ.
Our Civil Defence Volunteers- Quick Reaction Team of 31 members at rescue work for last two days in Kodagu district under the leadership of Dr Chetan. These volunteers are citizens with zest and zeal to contribute meaningfully to society .@IPS_Association .@IASassociation pic.twitter.com/2qXdNyORAz
— D Roopa IPS (@D_Roopa_IPS) 16 August 2018
Proud to say that these rescuers are our trained Civil Defence Volunteers. Working in incessant rains they have rescued 180 people from different areas in Kushalnagar, Kodagu from yesterday .@CMofKarnataka .@DrGParameshwara .@NCDCNagpurInd .@ndmaindia .@PMOIndia @SEOC_Karnataka pic.twitter.com/bCgKnh5RsB
— D Roopa IPS (@D_Roopa_IPS) 16 August 2018