ಮಾನವೀಯತೆ ಮೆರೆದ ರೈಲ್ವೆ ಇಲಾಖೆ: ರಾತ್ರೋ ರಾತ್ರಿ ಸ್ಯಾನಿಟರಿ ಪ್ಯಾಡ್ ರವಾನೆ
ಬೆಂಗಳೂರು, ಜನವರಿ 17: ಸಂಕಷ್ಟದಲ್ಲಿರುವ ಪ್ರಯಾಣಿಕರ ಟ್ವೀಟ್ಗೆ ರೈಲ್ವೆ ಇಲಾಖೆ ಕೂಡಲೇ ಸ್ಪಂದಿಸಿ ಅವರ ನೆರವಿಗೆ ಧಾವಿಸುವ ಅನೇಕ ನಿದರ್ಶನಗಳನ್ನು ನೋಡಿದ್ದೇವೆ. ರೈಲ್ವೆ ಇಲಾಖೆಯ ಮತ್ತೊಂದು ಮಾನವೀಯ ಮುಖ ಪ್ರಕಟವಾಗಿದೆ.
ಈ ಘಟನೆ ನಡೆದಿರುವುದು ನಮ್ಮ ರಾಜ್ಯದಲ್ಲಿಯೇ.
ಮೈಸೂರಿಗರಿಗೆ ಸಿಹಿ ಸುದ್ದಿ : ಬೆಂಗಳೂರಿಗೆ ಮತ್ತೆರಡು ರೈಲು ಸಂಚಾರ
ವಿಶಾಲ್ ಖಾನಾಪುರೆ ಎಂಬುವವರು ತಮ್ಮ ಸ್ನೇಹಿತೆಯೊಂದಿಗೆ ಬೆಂಗಳೂರಿನಿಂದ ಹೊಸಪೇಟೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಸ್ನೇಹಿತೆ ಋತುಸ್ರಾವಕ್ಕೆ ಒಳಗಾದರು. ಅವರ ಬಳಿ ಸ್ಯಾನಿಟರಿ ಪ್ಯಾಡ್ ಇರಲಿಲ್ಲ.
IRCTC: ಒಂದೇ ಐಡಿ ಬಳಸಿ 12 ಟಿಕೆಟ್ ಬುಕ್ ಮಾಡುವುದು ಹೇಗೆ?
ವಿಶಾಲ್ ಅವರು ಕೂಡಲೇ ಸ್ಯಾನಿಟರಿ ನ್ಯಾಪ್ಕಿನ್ ಮತ್ತು ಪೆಫ್ಟಾಲ್ ಸ್ಪಾಸ್ (ಪೈನ್ ಕಿಲ್ಲರ್) ಅಗತ್ಯವಿದೆ ಎಂದು ಭಾರತೀಯ ರೈಲ್ವೆಯ ಅಧಿಕಾರಿಗಳಿಗೆ ಟ್ವೀಟ್ ಮಾಡಿದರು.
@PiyushGoyal its an emergency please help..one of my friends is traveling on train "HOSPET PASSENGER " from Bangalore to Bellary,train number 56909 ..
— Vishal Khanapure (@Vishal888782) 13 January 2019
Coach - S7, seat number 37, c is in need of "Meftal spas " tablets.. please help her @indianrailway__ @IRCTCofficial
ಐಆರ್ಸಿಟಿಸಿ ಮತ್ತು ಇಂಡಿಯನ್ ರೈಲ್ವೆ ಸೇವಾಕ್ಕೆ ಕೆಲವು ಬಾರಿ ಕರೆ ಮತ್ತು ಟ್ವೀಟ್ ಮಾಡಿದ ಬಳಿಕ ಅವರಿಗೆ ತಕ್ಷಣವೇ ಪ್ರತಿಕ್ರಿಯೆ ಬಂದಿತು.
ಅವರು ರೈಲು ಹತ್ತಿದ 140 ಕಿ.ಮೀ. ದೂರದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಮತ್ತು ಔಷಧವನ್ನು ಒದಗಿಸಲಾಯಿತು.
Thank you for the immediate response
— Vishal Khanapure (@Vishal888782) 14 January 2019
Really I'm wondered, char saal main kitna badal Gaya hai Hindusthan!.isse kehte hai "acche din" I'm really really very happy4 @indianrailway__ @PiyushGoyal @PiyushGoyalOffc @mepratap "ek aur Baar modi Sarkar" @RailMinIndia @narendramodi pic.twitter.com/heCHWEkeYB
'ರಾತ್ರಿ 11.06ಗೆ ಅಧಿಕಾರಿಯೊಬ್ಬರು ನನ್ನ ಸ್ನೇಹಿತೆಯನ್ನು ಸಂಪರ್ಕಿಸಿ ಅವರ ಅಗತ್ಯವನ್ನು ಖಚಿತಪಡಿಸಿಕೊಂಡರು. ಅವರ ಪಿಎನ್ಆರ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಪಡೆದುಕೊಂಡರು. ರಾತ್ರಿ 2 ಗಂಟೆಗೆ ರೈಲು ಅರಸೀಕೆರೆ ನಿಲ್ದಾಣ ತಲುಪಿತು. ಮೈಸೂರು ವಿಭಾಗದ ಅಧಿಕಾರಿಗಳು ಆಕೆಗೆ ಬೇಕಾದ ಎಲ್ಲ ಸಾಮಗ್ರಿಗಳೊಂದಿಗೆ ಸಿದ್ಧರಿದ್ದರು. ಇಷ್ಟು ಬೇಗನೆ ಸ್ಪಂದನೆ ಕಂಡು ನಮಗೆಲ್ಲ ಅಚ್ಚರಿಯಾಯಿತು' ಎಂದು ವಿಶಾಲ್ ಹೇಳಿದ್ದಾರೆ.