ಶ್ರೀನಿವಾಸಪುರದಲ್ಲಿ ಕೋದಂಡರಾಮಸ್ವಾಮಿ ಕಲ್ಯಾಣೋತ್ಸವ
ಕೋಲಾರ, ಏ.16: ಮಾವಿನಹಣ್ಣಿಗೆ ಹೆಸರುವಾಸಿಯಾದ ಶ್ರೀನಿವಾಸಪುರ ತಾಲೂಕು ಪುರಾಣ ಪ್ರಸಿದ್ಧ ದೇಗುಲಗಳ ಬೀಡಾಗಿದೆ. ತಾಲೂಕಿನ ಪುರಾಣಪ್ರಸಿದ್ದ ವೈಷ್ಣವ ಪುಣ್ಯ ಕ್ಷೇತ್ರವಾದ ಯಲ್ದೂರು ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಬ್ರಹ್ಮೋತ್ಸವ ವಿಜೃಂಭಣೆಯಿಂದ ಸಂಪನ್ನವಾಗಿದೆ.
ಚೋಳರ ಕಾಲದ ಈ ದೇಗುಲದಲ್ಲಿ ಸುಮಾರು 10 ದಿನಗಳ ಕಾಲ ಬ್ರಹ್ಮೋತ್ಸವ ಜರುಗುತ್ತದೆ. ಬ್ರಹ್ಮೋತ್ಸವದ ಅಂಗವಾಗಿ ಮಂಗಳವಾರ ಮುಂಜಾನೆ ಶ್ರೀ ಕೋದಂಡರಾಮಸ್ವಾಮಿ ದೇವರಿಗೆ ಕಲ್ಯಾಣೋತ್ಸವ ಹಾಗು ಗರುಡೋತ್ಸವ ಅತಿ ವಿಜೃಂಬಣೆಯಿಂದ ನೆರವೇರಿತು.
ಈ ಸಂದರ್ಭದಲ್ಲಿ ದೇವಾಲಯದ ಪ್ರಮುಖ ಅರ್ಚಕರಾದ ಶೇಷಾದ್ರಿ ಬೃಂದ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಶ್ರೀ ರಾಮನ ಭಕ್ತರ ಕಣ್ಣುಗಳಿಗೆ ಹಬ್ಬವಾಗಿ ನಡೆಸಿಕೊಟ್ಟರು. ಮನುಷ್ಯನ ಜೀವನದಲ್ಲಿ ಮದುವೆ ಘಟ್ಟ ಅದರ ಲಾಭದ ಬಗ್ಗೆ ವೇದಗಳಲ್ಲಿರುವ ಅರ್ಥ ವಿವರಿಸಿದರು.
ಕಲ್ಯಾಣೋತ್ಸವ ಹಾಗು ಗರುಡೋತ್ಸವದ ವಂಶಪಾರಂಪರ್ಯ ಸೇವಾಕರ್ತರಾಗಿ ರಾದ ಸ್ವಾತಂತ್ರ ಸೇನಾನಿ ಚಂದ್ರಯ್ಯಶೆಟ್ಟಿ ಕುಟುಂಬದವರು ಸೇರಿದಂತೆ ಗ್ರಾಮದ ಪಟೇಲ್ ಕುಟುಂಬಿಕರು ಶ್ಯಾನುಭೋಗ ಕುಟುಂಬಿಕರು ಸೇರಿದಂತೆ ದೊಡ್ಡಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.
ಶ್ರೀನಿವಾಸಪುರದ ಪುರಾಣ ಪ್ರಸಿದ್ಧ ದೇಗುಲ
ಮಾವಿನಹಣ್ಣಿಗೆ ಹೆಸರುವಾಸಿಯಾದ ಶ್ರೀನಿವಾಸಪುರ ತಾಲೂಕು ಪುರಾಣ ಪ್ರಸಿದ್ಧ ದೇಗುಲಗಳ ಬೀಡಾಗಿದೆ.
ಯಲ್ದೂರು ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನ
ಶ್ರೀನಿವಾಸಪುರ ತಾಲೂಕಿನ ಪುರಾಣಪ್ರಸಿದ್ದ ವೈಷ್ಣವ ಪುಣ್ಯ ಕ್ಷೇತ್ರವಾದ ಯಲ್ದೂರು ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಬ್ರಹ್ಮೋತ್ಸವ ವಿಜೃಂಭಣೆಯಿಂದ ಸಂಪನ್ನವಾಗಿದೆ.
ಚೋಳರ ಕಾಲದ ಈ ದೇಗುಲದಲ್ಲಿ
ಚೋಳರ ಕಾಲದ ಈ ದೇಗುಲದಲ್ಲಿ ಸುಮಾರು 10 ದಿನಗಳ ಕಾಲ ಬ್ರಹ್ಮೋತ್ಸವ ಜರುಗುತ್ತದೆ. ಬೆಂಗಳೂರಿನಿಂದ ದೇಗುಲಕ್ಕೆ ಸುಮಾರು 95 ಕಿ.ಮೀ ದೂರವಾಗುತ್ತದೆ.
ಚಂದ್ರಯ್ಯಶೆಟ್ಟಿ ಕುಟುಂಬದವರ ಸೇವೆ
ಸ್ವಾತಂತ್ರ ಸೇನಾನಿ ಚಂದ್ರಯ್ಯಶೆಟ್ಟಿ ಕುಟುಂಬದವರು ವಂಶಪಾರಂಪರ್ಯವಾಗಿ ಕಲ್ಯಾಣೋತ್ಸವ ಹಾಗು ಗರುಡೋತ್ಸವದ ಸೇವಾಕರ್ತರಾಗಿ ಉತ್ಸವ ನಡೆಸಿಕೊಂಡು ಬರುತ್ತಿದ್ದಾರೆ.