ರಾಜಭವನ ಗುಜರಾತ್ ಭವನ ಆಗಿದೆ : ಜೆಡಿಎಸ್
ಬೆಂಗಳೂರು, ಏಪ್ರಿಲ್ 07 : ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಶಾಸಕರನ್ನು ಭೇಟಿಯಾಗುವ ಸೌಜನ್ಯ ತೋರದ ರಾಜ್ಯಪಾಲ ವಜುಭಾಯಿ ವಾಲಾ ಅವರ ವಿರುದ್ಧ ಗುರುವಾರ ಜೆಡಿಎಸ್ ಬೃಹತ್ ಪ್ರತಿಭಟನೆ ನಡೆಸಿತು.
ಬೆಂಗಳೂರಿನ
ಶೇಷಾದ್ರಿ
ರಸ್ತೆಯಲ್ಲಿರುವ
ಗಾಂಧಿ
ಪ್ರತಿಮೆ
ಬಳಿ
ಪ್ರತಿಭಟನೆ
ನಡೆಸಿದ
ಜೆಡಿಎಸ್
ಮುಖಂಡರು
ಹಾಗೂ
ಕಾರ್ಯಕರ್ತರು
ರಾಜ್ಯಪಾಲರ
ವಿರುದ್ಧ
ಆಕ್ರೋಶ
ವ್ಯಕ್ತಪಡಿಸಿದರು.
ಮಾಜಿ
ಪ್ರಧಾನಿಗೆ
ಅಗೌರವ
ಸೂಚಿಸುವುದು
ಸರಿಯಲ್ಲ.
ಈ
ಬಗ್ಗೆ
ಅವರು
ರಾಜ್ಯದ
ಜನರ
ಕ್ಷಮೆ
ಕೇಳಬೇಕು
ಎಂದು
ಆಗ್ರಹಿಸಿದರು.
[ಭಲಾ,
ರಾಜಭವನಕ್ಕೆ
4
ಕೋಟಿ
ಖರ್ಚು
ಮಾಡಿದ
ವಾಲಾ!]
ಮಾಜಿ ಪ್ರಧಾನಿ ದೇವೇಗೌಡರ ಸಲಹೆಯನ್ನು ದೇಶದ ಪ್ರಧಾನಿ ಕೇಳುತ್ತಾರೆ. ಅರುಣ್ ಜೇಟ್ಲಿಯಂತಹ ನಾಯಕರು ಮನೆಗೆ ಭೇಟಿ ನೀಡಿ ಮಾತುಕತೆ ನಡೆಸುತ್ತಾರೆ. ಆದರೆ, ರಾಜ್ಯಪಾಲರು ಈ ರೀತಿ ವರ್ತಿಸಿರುವುದು ಸರಿಯಲ್ಲ. ವಜುಭಾಯಿ ವಾಲಾ ಅವರನ್ನು ಹಿಂಪಡೆಯುವಂತೆ ಕೇಂದ್ರಕ್ಕೆ ಮನವಿ ಮಾಡುವುದಾಗಿ ಪ್ರತಿಭಟನಾಕಾರರು ಹೇಳಿದರು. [ರಾಜ್ಯೋತ್ಸವದ ದಿನ ರಾಜಭವನದಲ್ಲಿ ಗುಜರಾತಿ ಉತ್ಸವ!]
ಪ್ರತಿಭಟನೆಯಲ್ಲಿ
ಶಾಸಕರಾದ
ವೈ.ಎಸ್.ವಿ.ದತ್ತ,
ಗೋಪಾಲಯ್ಯ,
ಶರವಣ,
ಮಹಿಳಾ
ಘಟಕದ
ಅಧ್ಯಕ್ಷೆ
ಶೀಲಾ
ನಾಯಕ್,
ಮಹಾನಗರ
ಯುವ
ಘಟಕದ
ಅಧ್ಯಕ್ಷ
ರಮೇಶ್
ಗೌಡ,
ಪಾಲಿಕೆ
ಸದಸ್ಯರಾದ
ಮಂಜುಳಾ
ನಾರಾಯಣಸ್ವಾಮಿ,
ಮಹದೇವ್
ಮುಂತಾದವರು
ಪಾಲ್ಗೊಂಡಿದ್ದರು.
[ಸರ್ಕಾರಿ
ಅಧಿಸೂಚನೆಗಳು
ಹಿಂದಿಯಲ್ಲಿ
ಬರಲಿ]
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೈ.ಎಸ್.ವಿ.ದತ್ತಾ ಅವರು, 'ಎಚ್.ಡಿ.ದೇವೇಗೌಡ ಹಾಗೂ ಶಾಸಕರಿಗೆ ಅಪಮಾನ ಮಾಡಿರುವ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ತಕ್ಷಣವೇ ವಾಪಸ್ ಕರೆಸಿಕೊಳ್ಳಬೇಕೆಂದು ಆಗ್ರಹಿಸಿದರು. ಮಾಜಿ ಪ್ರಧಾನಿಯನ್ನು ಭೇಟಿ ಮಾಡುವ ಸೌಜನ್ಯ ತೋರಲಿಲ್ಲ. ಇದು ರಾಜ್ಯದ ಜನತೆಗೆ ಮಾಡಿದ ಅವಮಾನವಾಗಿದೆ. ಇದರ ವಿರುದ್ಧ ಪಕ್ಷಾತೀತ ವೇದಿಕೆ ನಿರ್ಮಿಸಿ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗಿದೆ' ಎಂದರು. [ರಾಷ್ಟ್ರಗೀತೆ ವೇಳೆ ವೇದಿಕೆ ಬಿಟ್ಟಿಳಿದ ರಾಜ್ಯಪಾಲರು]
ವಿಧಾನಪರಿಷತ್
ಸದಸ್ಯ
ಟಿ.ಎ.ಶರವಣ
ಅವರು
ಮಾತನಾಡಿ,
'2
ದಿನಗಳಲ್ಲಿ
ರಾಜ್ಯಪಾಲರು
ತಾವು
ನಡೆದುಕೊಂಡ
ರೀತಿಗೆ
ಕ್ಷಮಾಪಣೆ
ಕೇಳಬೇಕು
ಇಲ್ಲದಿದ್ದರೆ
ಕೇಂದ್ರ
ಸರ್ಕಾರ
ಇವರನ್ನು
ವಾಪಸ್
ಕರೆಸಿಕೊಳ್ಳಬೇಕೆಂದು'
ಒತ್ತಾಯಿಸಿದರು.
ಶಾಸಕ ಗೋಪಾಲಯ್ಯ ಅವರು ಮಾತನಾಡಿ, 'ರಾಜಭವನ ಗುಜರಾತ್ ಭವನ ಆಗಿದೆ. ಗುಜರಾತ್ನ ಅಧಿಕಾರಿಗಳನ್ನೇ ನೇಮಿಸಿಕೊಂಡಿದ್ದಾರೆ. ರಾಜ್ಯಪಾಲರು ನಾಡಿನ ಜನರ ಕಷ್ಟಸುಖ ವಿಚಾರಿಸಬೇಕು, ರಾಜ್ಯಪಾಲರ ಇಂಥ ವರ್ತನೆ ಸಹಿಸಲಾಗುವುದಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.