ಸಂಪುಟ ವಿಸ್ತರಣೆ, ದೆಹಲಿ ಚುನವಣೆ : ಗುರುವಾರ ಗಮನಿಸಬೇಕಾದ ಇನ್ನಿತರ ಸುದ್ದಿಗಳು
ಬೆಂಗಳೂರು, ಜನವರಿ 30: ರಾಜ್ಯ ಹಾಗೂ ಕೇಂದ್ರ ಎರಡೂ ಕಡೆಗಳಲ್ಲಿ ರಾಜಕೀಯ ಚಟುವಟಿಕೆಗಳು ಮತ್ತು ಆಡಳಿತಾತ್ಮಕ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿವೆ.
ಗುರುವಾರ ಹಲವು ಮುಖ್ಯ ಘಟನಾವಳಿಗಳು ನಡೆಯಲಿದ್ದು, ಮಾಹಿತಿ, ಆಸಕ್ತಿ, ಭವಿಷ್ಯದ ದೃಷ್ಟಿಯಿಂದ ಗಮನಿಸಬೇಕಾದ ಪ್ರಮುಖ ಸುದ್ದಿಗಳ ಪಟ್ಟಿ ಇಲ್ಲಿದೆ.
* ಯಡಿಯೂರಪ್ಪ ಅವರು ಇಂದು ದೆಹಲಿಗೆ ತೆರಳಲಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ.
ದೆಹಲಿಗೆ ಯಡಿಯೂರಪ್ಪ; ಸಂಪುಟ ವಿಸ್ತರಣೆ ಲೆಕ್ಕಾಚಾರಗಳು
* ಡಿಸಿಎಂ ಪಟ್ಟಕ್ಕಾಗಿ ತುದಿಗಾಲಲ್ಲಿ ಕಾದು ಕೂತಿರುವ ಶ್ರೀರಾಮುಲು ತಮಗೆ ಡಿಸಿಎಂ ಸ್ಥಾನ ದೂರವಾಗುತ್ತಿದೆ ಎಂದು ಅರಿತು ಭಿನ್ನ ರಾಗ ಹಾಡಲು ಪ್ರಾರಂಭಿಸಿದ್ದಾರೆ. ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.
* ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರ ಬಿರುಸಿನಿಂದ ಸಾಗಿದ್ದು, ಬಿಜೆಪಿ-ಕಾಂಗ್ರೆಸ್-ಎಎಪಿ ಬಿರುಸಿನ ಪ್ರಚಾರ ಕೈಗೊಂಡಿವೆ. ಇಂದು ಪ್ರಾಣಾಳಿಕೆ ಬಿಡುಗಡೆ ಸಾಧ್ಯತೆ ಇದೆ. ರಾಷ್ಟ್ರ ರಾಜಧಾನಿಯ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ.
* ಹೈದರಾಬಾದ್ ನಲ್ಲಿ ನಾಲ್ವರನ್ನು ಕೊರೊನಾ ವೈರಸ್ ಶಂಕಿತರೆಂದು ಗುರುತಿಸಲಾಗಿದ್ದು, ಪರೀಕ್ಷಾ ವರದಿಗಳಿಗಾಗಿ ಎದುರು ನೋಡಲಾಗುತ್ತಿದೆ. ನಾಲ್ವರೂ ಸಹ ಚೀನಾದಿಂದ ಹಿಂದುರಿಗಿದವರಾಗಿದ್ದಾರೆ.
* ಐಎಂಎ ಹಗರಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ರಾಜ್ಯದ ಇಬ್ಬರು ಪ್ರಮುಖ ಐಪಿಎಸ್ ಅಧಿಕಾರಿಗಳ ವಿಚಾರಣೆಯನ್ನು ನಡೆಸಲು ಸರ್ಕಾರವು ಸಿಬಿಐ ಗೆ ಒಪ್ಪಿಗೆ ನೀಡಿದೆ. ಹೇಮಂತ್ ನಿಂಬಾಳ್ಕರ್ ಮತ್ತು ಅಜಯ್ ಹಿಲೋರಿ ವಿಚಾರಣೆಗೆ ಒಳಗಾಗಲಿದ್ದಾರೆ.
* ನಿರ್ಭಯಾ ಅತ್ಯಾಚಾರಿಗಳಲ್ಲಿ ಒಬ್ಬಾತ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯಲಿದೆ. ಇದು ಮಹತ್ವದ್ದಾಗಿದ್ದು, ಫೆಬ್ರವರಿ 1 ರಂದು ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಲಾಗುತ್ತದೆಯೇ ಇಲ್ಲವೇ ಎಂಬುದು ನಿಶ್ಚಯವಾಗಲಿದೆ.
* ಜೆಡಿಯು ಪಕ್ಷದಲ್ಲಿ ನಾಯಕರ ಕಿತ್ತಾಟ ತಾರಕಕ್ಕೆ ಹೋಗಿದ್ದು, ನಿತೀಶ್ ಕುಮಾರ್ ಅವರು ಪ್ರಶಾಂತ್ ಕಿಶೋರ್ ಅವರನ್ನು ಉಚ್ಛಾಟನೆ ಮಾಡಿದ್ದಾರೆ. ಪ್ರಶಾಂತ್ ಕಿಶೋರ್ ಮುಂದಿನ ನಡೆ ಬಗ್ಗೆ ಕುತೂಹಲವಿದೆ.
* ಕೇಂದ್ರ ಬಜೆಟ್ಗೆ ತಯಾರಿ ಬಹುತೇಕ ಅಂತಿಮವಾಗಿದ್ದು, ಬಜೆಟ್ ಮಂಡನೆಗೆ ಮುಂಚಿನ ಹೇಳಿಕೆಗಳು, ಷೇರು ಮಾರುಕಟ್ಟೆಯ ಏರಿಳಿತಗಳ ಬಗ್ಗೆ ಗಮನವಹಿಸಬೇಕಿದೆ.
* ಸಿಎಎ-ಎನ್ಆರ್ಸಿ ಪ್ರತಿಭಟನೆಗಳು ರಾಷ್ಟ್ರವ್ಯಾಪಿಯಾಗಿ ನಡೆಯುತ್ತಲೇ ಇವೆ. ಶಹೀನ್ ಬಾಗ್ನಲ್ಲಿ ಸತತ ಪ್ರತಿಭಟನೆ ನಡೆಯುತ್ತಿದೆ.