Breaking: ಹವಾಮಾನ ವೈಪರಿತ್ಯ: ಕರ್ನಾಟಕದ 8 ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಣೆ
ಬೆಂಗಳೂರು, ಅಕ್ಟೋಬರ್ 06: ಪಶ್ಚಿಮ ಬಂಗಾಳಕೊಲ್ಲಿಯಲ್ಲಿ ಉಂಟಾದ ಹವಾಮಾನ ಬದಲಾವಣೆಗಳ ಪ್ರಭಾವದಿಂದಾಗಿ ಕರ್ನಾಟಕದಲ್ಲಿ ಮುಂದಿನ ಐದು ದಿನ ವಿವಿಧಡೆ ಮಳೆ ಮುಂದುವರಿಯಲಿದೆ. ಐದನೇ ದಿನವಾದ ಅಕ್ಟೋಬರ್ 10ರಂದು ಕೆಲವು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ.
ಪಶ್ಚಿಮ ಬಂಗಾಳಕೊಲ್ಲಿಯಲ್ಲಿ ಸಮುದ್ರದಲ್ಲಿ ಸೃಷ್ಟಿಯಾಗಿದ್ದ ವಾಯುಭಾರ ಕುಸಿತವು ಬುಧವಾರಕ್ಕೆ ದುರ್ಬಲಗೊಂಡಿದೆ. ಮತ್ತದೇ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿದ್ದು, ಅದು ಆಂಧ್ರಪ್ರದೇಶದ ಕರಾವಳಿ ಭಾಗದತ್ತ ಬೀಸುತ್ತಿದೆ. ಮತ್ತೊಂದು ಮೇಲ್ಮೈ ಸುಳಿಗಾಳಿ ಬಂಗಾಳಕೊಲ್ಲಿಯ ದಕ್ಷಿಣ ಭಾಗದಲ್ಲಿ ಉಂಟಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 5ಕೀ.ಮೀ. ಎತ್ತರದಲ್ಲಿದೆ ಎಂದು ಹವಾಮಾನ ವಿಜ್ಞಾನಿ ಡಾ.ಪ್ರಸಾದ್ ತಿಳಿಸಿದ್ದಾರೆ.
ಈ ಹವಾಮಾನ ಬದಲಾವಣೆಗಳಿಂದಾಗಿ ಕರ್ನಾಟಕದಲ್ಲಿ ಮಳೆ ಮುಂದುವರಿಯುವ ಲಕ್ಷಣಗಳು ಗೋಚರಿಸಿವೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಕರಾವಳಿ ಜಿಲ್ಲೆಗಳು ಹಾಗೂ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಅಲ್ಲಲ್ಲಿ ಹಗುರವಾಗಿ ಮಳೆ ಆಗಲಿದೆ. ಕೆಲವೊಮ್ಮೆ ಗುಡುಗು ಮಿಂಚು ಸಹಿತ ಸಾಧಾರಣವಾಗಿ ಮಳೆ ಆಗುವ ಲಕ್ಷಣಗಳು ಇವೆ.
8
ಜಿಲ್ಲೆಗಳಿಗೆ
'ಯೆಲ್ಲೋ
ಅಲರ್ಟ್'
ಉತ್ತರ
ಒಳನಾಡು
ಹಾಗೂ
ದಕ್ಷಿಣ
ಒಳನಾಡು
ಭಾಗದಲ್ಲಿ
ಐದನೇ
ದಿನ
ಅಂದರೆ
ಅಕ್ಟೋಬರ್
10ರಂದು
ಗುಡುಗು
ಸಹಿತ
ಸಾಧಾರಣದಿಂದ
ಭಾರಿ
ಮಳೆಯಾಗುವ
ಸಾಧ್ಯತೆ
ಇದೆ.
ಈ
ಕಾರಣಕ್ಕೆ
ಒಟ್ಟು
8
ಜಿಲ್ಲೆಗಳಿಗೆ
'ಯೆಲ್ಲೋ
ಅಲರ್ಟ್'
ಎಚ್ಚರಿಕೆ
ನೀಡಲಾಗಿದೆ.
ಕಲಬುರಗಿ,
ಕೊಪ್ಪಳ,
ಯಾದಗಿರಿ,
ರಾಯಚೂರು
ಹಾಗೂ
ಚಿಕ್ಕಬಳ್ಳಾಪುರ,
ಕೋಲಾರ,
ಚಿತ್ರದುರ್ಗ,
ತುಮಕೂರು
ಒಂದು
ದಿನ
'ಯೆಲ್ಲೋ
ಅಲರ್ಟ್,
ಪಡೆದ
ಜಿಲ್ಲೆಗಳಾಗಿವೆ.
ಇದರ
ಹೊರತು
ಬೆಂಗಳೂರು
ನಗರ
ಮತ್ತು
ಬೆಂಗಳೂರು
ಗ್ರಾಮಾಂತರ
ಜಿಲ್ಲೆಗಳಿಗೆ
ಮುಂದಿನ
ಮೂರು
ದಿನ
ಸಾಮಾನ್ಯವಾಗಿ
ಮಳೆ
ಬೀಳಲಿದೆ.
ಈ
ಭಾಗದಲ್ಲಿ
ಚಳಿಯ
ವಾತಾವರಣವು
ಹೆಚ್ಚರಲಿದೆ
ಎಂದು
ಅವರು
ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24ಗಂಟೆಗಳಲ್ಲಿ ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ ಅಧಿಕ 7ಸೆಂ.ಮೀ. ಮಳೆ ಆಗಿದೆ. ಕೊಡಗು, ದಾವಣಗೆರೆ, ಶಿಮವೊಗ್ಗ ಜಿಲ್ಲೆಯಲ್ಲಿ ತಲಾ ಒಂದು ಸೆಂಟಿ ಮೀಟರ್ ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.