ರಾಯಚೂರಿಗೆ ಐಐಟಿ : ಸಿದ್ದರಾಮಯ್ಯ ನಿಲುವು ತಿಳಿಸಲು ಸವಾಲು
ರಾಯಚೂರು, ನವೆಂಬರ್ 19 : ರಾಯಚೂರಿನಲ್ಲಿ ಐಐಟಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ಗುರುವಾರ ಐಐಟಿ ಹೋರಾಟ ಸಮಿತಿ ಕರೆ ನೀಡಿದ್ದ ರಾಯಚೂರು ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2000ಕ್ಕೂ ಅಧಿಕ ಜನರು ರಾಯಚೂರಿನ ವಿವಿಧ ರಸ್ತೆಗಳನ್ನು ತಡೆದು ಪ್ರತಿಭಟನೆ ನಡೆಸಿದರು, ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆ
ಉದ್ದೇಶಿಸಿ
ಮಾತನಾಡಿದ
ರಾಯಚೂರು
ಐಐಟಿ
ಹೋರಾಟ
ಸಮಿತಿ
ಅಧ್ಯಕ್ಷ
ಬಸವರಾಜ
ಕಳಸ
ಅವರು,
'ಪ್ರಸ್ತಕ
ಚಳಿಗಾಲದ
ಅಧಿವೇಶನದಲ್ಲಿಯೇ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಧಾರವಾಡ
ಅಥವ
ರಾಯಚೂರಿನಲ್ಲಿ
ಐಐಟಿ
ಸ್ಥಾಪನೆ
ಮಾಡುವ
ಕುರಿತು
ಅಂತಿಮ
ನಿರ್ಧಾರ
ಪ್ರಕಟಿಸಬೇಕು'
ಎಂದು
ಒತ್ತಾಯಿಸಿದರು.
[ಐಐಟಿ
ರಾಯಚೂರಿಗೆ
ನೀಡಿ
:
ಸಿದ್ದರಾಮಯ್ಯ
ಪತ್ರ]
ರಸ್ತೆ ತಡೆ, ಬೈಕ್ ಜಾಥಾ : ಗುರುವಾರ ಕರೆ ನೀಡಿದ್ದ ರಾಯಚೂರು ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. 2000ಕ್ಕೂ ಅಧಿಕ ವಿವಿಧ ಸಂಘಟನೆಗಳ ಸದಸ್ಯರು ರಾಯಚೂರಿನ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ, ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಯಚೂರಿನಲ್ಲಿಯೇ ಐಐಟಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.[ಧಾರವಾಡದಲ್ಲಿ ಐಐಟಿ : ಅಧಿಕೃತ ಆದೇಶ ಪತ್ರ]
ವಿವಿಧ
ಸ್ಥಳದಲ್ಲಿ
ರಸ್ತೆ
ತಡೆ
ನಡೆಸಿ
ಸಾರಿಗೆ
ಸಂಚಾರವನ್ನು
ಬಂದ್
ಮಾಡಿದರು.
ಬೈಕ್
ಜಾಥಾ
ನಡೆಸಿ
ಅಂಗಡಿ,
ಸರ್ಕಾರಿ
ಶಾಲಾ-ಕಾಲೇಜುಗಳನ್ನು
ಬಂದ್
ಮಾಡಿಸಿದರು.
ಬಸವೇಶ್ವರ
ಸರ್ಕಲ್,
ಅಂಬೇಡ್ಕರ್
ಸರ್ಕಲ್
ಮುಂತಾದ
ಕಡೆ
ಪ್ರತಿಭಟನೆ
ನಡೆಸಿದರು.
ಉಪವಾಸ ಮಾಡುತ್ತಿದ್ದವರು ಆಸ್ಪತ್ರೆಗೆ : ರಾಯಚೂರಿನಲ್ಲಿ ಐಐಟಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಐದು ಸದಸ್ಯರ ಪೈಕಿ ಪಿ.ಅಮರೇಶ್ ಎಂಬುವವರು ಅಸ್ವಸ್ಥಗೊಂಡಿದ್ದು, ಬುಧವಾರ ರಾತ್ರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಂದಹಾಗೆ ಕರ್ನಾಟಕ ಸರ್ಕಾರ ಹುಬ್ಬಳ್ಳಿ-ಧಾರವಾಡ, ರಾಯಚೂರು, ಮೈಸೂರು ಜಿಲ್ಲೆಗಳಲ್ಲಿ ಐಐಟಿ ಸ್ಥಾಪನೆ ಮಾಡಬಹುದು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿ ಆರ್. ಸುಬ್ರಮಣ್ಯಂ ನೇತೃತ್ವದ ಸಮಿತಿ ಧಾರವಾಡದಲ್ಲಿ ಐಐಟಿ ಸ್ಥಾಪಿಸುವಂತೆ ಶಿಫಾರಸು ಮಾಡಿತ್ತು. ಇದಕ್ಕೆ ಕೇಂದ್ರ ಸರ್ಕಾರವೂ ಒಪ್ಪಿಗೆ ನೀಡಿದೆ. [ಚಿತ್ರಕೃಪೆ : IIT Raichur - Namma Hakku]