ಆನಂದ್ ಸಿಂಗ್ ರಾಜೀನಾಮೆ : ಕೆಪಿಸಿಸಿ ಅಧ್ಯಕ್ಷರು ಹೇಳಿದ್ದೇನು?
ಬೆಂಗಳೂರು, ಜುಲೈ 01 : 'ಯಾವ ಕಾರಣಕ್ಕೆ ಆನಂದ್ ಸಿಂಗ್ ಅವರು ರಾಜೀನಾಮೆ ನೀಡಿದ್ದಾರೆ ಅನ್ನೋದು ಅರ್ಥವಾಗಿಲ್ಲ. ಆನಂದ್ ಸಿಂಗ್ ಬಳಿ ನಾನೇ ಮಾತನಾಡುತ್ತೇನೆ' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, 'ಆನಂದ್ ಸಿಂಗ್ ನನಗೆ ಒಳ್ಳೆಯ ಸ್ನೇಹಿತರು. ಜಿಂದಾಲ್ ವಿಚಾರದಲ್ಲಿ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ. ಈಗಾಗಲೇ ಉಪ ಸಮಿತಿ ಮಾಡಿದ್ದೇವೆ' ಎಂದರು.
ಇಬ್ಬರು ಶಾಸಕರ ರಾಜೀನಾಮೆ : ರಾಹುಲ್ಗೆ ಸಿದ್ದರಾಮಯ್ಯ ಕರೆ
'ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಬಿಜೆಪಿಯವರು ಸರ್ಕಾರವನ್ನು ಅಲುಗಾಡಿಸಲು, ಗೊಂದಲ ಮೂಡಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಸ್ಥಿರವಾಗಿರುವ ವಾತಾವರಣವನ್ನು ಅಸ್ಥಿರ ಮಾಡಲು ನಿರಂತರ ಪ್ರಯತ್ನವನ್ನು ಮಾಡುತ್ತಿದ್ದಾರೆ' ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.
ಇಬ್ಬರು ಕಾಂಗ್ರೆಸ್ ಶಾಸಕರ ರಾಜೀನಾಮೆ : ಯಾರು, ಏನು ಹೇಳಿದರು?
'ಆನಂದ್ ಸಿಂಗ್ ಅವರ ರಾಜೀನಾಮೆಗೆ ಯಾವ ಕಾರಣ, ಏನು ಒತ್ತಡ ತಿಳಿದಿಲ್ಲ. ಕೆಲವರನ್ನು ಬಿಜೆಪಿಯವರು ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆನಂದ್ ಸಿಂಗ್ ಅವರ ಜೊತೆ ನಾನು ಮಾತುಕತೆ ನಡೆಸುತ್ತೇನೆ' ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದರು.
ಸಿದ್ದರಾಮಯ್ಯ ನಿವಾಸದಲ್ಲಿ ಮಹತ್ವದ ಸಭೆ,ರಾಜೀನಾಮೆ ಪರ್ವ ತಡೆಯಲು ತಂತ್ರ
'ಬಿಜೆಪಿಯವರ ಪ್ರಯತ್ನ ಸ್ಪಷ್ಟವಾಗಿ ನಮಗೆ ಗೊತ್ತಿದೆ. ಇದಕ್ಕೆ ಯಾವ ರೀತಿ ಉತ್ತರ ಕೊಡಬೇಕೋ ಆ ರೀತಿ ಉತ್ತರ ಕೊಡುತ್ತೇವೆ. ಅವರ ವಿಕೆಟ್ ಬೀಳಿಸುವ ಶಕ್ತಿ ನಮಗೂ ಇದೆ. ಹೀಗೆ ಮುಂದುವರೆದರೆ ತಿರುಗೇಟು ಕೊಡುತ್ತೇವೆ' ಎಂದು ಎಚ್ಚರಿಸಿದರು.