ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್: ಮಹತ್ವದ ಅಭಿಪ್ರಾಯ ವ್ಯಕ್ತ ಪಡಿಸಿದ ಇನ್ಫೋಸಿಸ್ ನಾರಾಯಣಮೂರ್ತಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಲಾಕ್ ಡೌನ್ ವಿಸ್ತರಣೆಯಾಗುತ್ತಾ ಹೋದರೆ, ಅದರಿಂದ ಸಾರ್ವಜನಿಕರಿಗೆ ಆಗುವ ತೊಂದರೆಯ ಬಗ್ಗೆ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಮಾತನಾಡಿದ್ದಾರೆ.

"ಇದೇ ರೀತಿ ಲಾಕ್ ಡೌನ್ ಮುಂದುವರಿದರೆ, ಕೊರೊನಾ ಸಾಂಕ್ರಾಮಿಕ ರೋಗಕ್ಕಿಂತ ಹೆಚ್ಚು ಹಸಿವಿನಿಂದಾಗಿ ಭಾರತದಲ್ಲಿ ಜನ ಸಾವನ್ನಪ್ಪಬಹುದು" ಎನ್ನುವ ಆತಂಕವನ್ನು ನಾರಾಯಣಮೂರ್ತಿ ವ್ಯಕ್ತ ಪಡಿಸಿದ್ದಾರೆ.

ಸರಳವಾಗಿ ನಡೆದ ಇನ್ಫೋಸಿಸ್ ನಾರಾಯಣಮೂರ್ತಿ ಮಗನ ವಿವಾಹಸರಳವಾಗಿ ನಡೆದ ಇನ್ಫೋಸಿಸ್ ನಾರಾಯಣಮೂರ್ತಿ ಮಗನ ವಿವಾಹ

"ನಮ್ಮ ದೇಶ ಇಂತಹ ಪರಿಸ್ಥಿತಿಯಲ್ಲಿ (ಲಾಕ್ ಡೌನ್) ತುಂಬಾ ದಿನ ಮುಂದವರಿಯಲು ಸಾಧ್ಯವಿಲ್ಲ ಎನ್ನುವ ಸತ್ಯವನ್ನು ನಾವು ಮೊದಲು ಅರಿತುಕೊಳ್ಲಬೇಕು" ಎಂದು ನಾರಾಯಣಮೂರ್ತಿ, ಉದ್ಯಮಿಗಳ ವೆಬಿನಾರ್ ಸಮಾವೇಶದಲ್ಲಿ ಮಾತನಾಡುತ್ತಾ ಹೇಳಿದರು.

Lengthy Lockdown Will Kill More People Than Covid: NR Narayana Murthy

"ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತದ ಸಾವಿನ ಪ್ರಮಾಣ 0.25-0.5% ರಷ್ಟು ಮತ್ತು ಪಾಸಿಟೀವ್ ಪ್ರಕರಣಗಳು ತೀರಾ ಕಡಿಮೆ" ಎಂದು ನಾರಾಯಣಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

"ನಮ್ಮ ದೇಶದಲ್ಲಿ ಸರಾಸರಿ ಒಂಬತ್ತು ಮಿಲಿಯನ್ ಜನರು ವಿವಿಧ ಕಾರಣಗಳಿಂದ ಸಾವನ್ನಪ್ಪುತ್ತಿದ್ದಾರೆ, ಇದರಲ್ಲಿ ಪ್ರಮುಖವಾಗಿ ಮಾಲಿನ್ಯದ ಕಾರಣದಿಂದ. ಕಳೆದ ಎರಡು ತಿಂಗಳಲ್ಲಿ ಕೊರೊನಾ ವೈರಸ್ ನಿಂದ ಸುಮಾರು ಒಂದು ಸಾವಿರ ಜನ ಸಾವನ್ನಪ್ಪಿದ್ದಾರೆ".

ಭಾರತೀಯನ ಮಾನವೀಯ ಕಾರ್ಯಕ್ಕೆ ಹೊಗಳಿ ಯು.ಎಸ್ ಸೆಕ್ರೆಟರಿ ಟ್ವೀಟ್ಭಾರತೀಯನ ಮಾನವೀಯ ಕಾರ್ಯಕ್ಕೆ ಹೊಗಳಿ ಯು.ಎಸ್ ಸೆಕ್ರೆಟರಿ ಟ್ವೀಟ್

"ನಮ್ಮ ದೇಶದ ಒಟ್ಟಾರೆ ಸಾವಿನ ಪ್ರಮಾಣವನ್ನು ನೋಡಿದಾಗ, ಕೊರೊನಾದಿಂದ ಸಾವನ್ನಪ್ಪಿರುವ ಸಂಖ್ಯೆ ನೋಡಿ, ನಾವೆಲ್ಲಾ ದಿಗಿಲು ಪಡಬೇಕಾಗಿಲ್ಲ" ಎಂದು ನಾರಾಯಣಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

English summary
Lengthy Lockdown Will Kill More People Than Covid: NR Narayana Murthy,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X