ಬಳ್ಳಾರಿ ಪ್ರತಿಭಾವಂತ ವಿದ್ಯಾರ್ಥಿಯ ಬೆನ್ನುತಟ್ಟಿದ ಸ್ಮೃತಿ
ಬಳ್ಳಾರಿ. ಜೂ.14: ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಈ ಬಾರಿಯ ಕೇಂದ್ರೀಯ ಶಾಲಾ ಶಿಕ್ಷಣ ಮಂಡಳಿ(ಸಿಬಿಎಸ್ಇ) 12 ತರಗತಿಯ ಪರೀಕ್ಷೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಹೆಚ್ಚಿನ ಅಂಕಗಳಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ತಮ್ಮ ಸಹಿ ಇರುವ ಪತ್ರವನ್ನು ಕಳುಹಿಸಿ ಅಭಿನಂದಿಸಿದ್ದಾರೆ.
ದೇಶದ ಇತಿಹಾಸದಲ್ಲಿ ಮಾನವ ಸಂಪನ್ಮೂಲ ಸಚಿವರೊಬ್ಬರು ಸಿಬಿಎಸ್ಸಿ ವಿದ್ಯಾರ್ಥಿಗಳಿಗೆ ಪತ್ರದ ಮೂಲಕ ಶುಭ ಹಾರೈಸಿರುವುದು ಇದೇ ಮೊದಲು.[ಬಿಸಿಯೂಟದ ಜೊತೆ ಮಕ್ಕಳಿಗೆ ತಣ್ಣಗಿನ ಮಜ್ಜಿಗೆ]
ಒನ್ಇಂಡಿಯದ ಬಳ್ಳಾರಿಯ ಓದುಗರಾದ ಮಹೇಶ್ ಅಗಿವಾಲ್ ಅವರ ಪುತ್ರ ಬಳ್ಳಾರಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಅವರು ಸಚಿವೆ ಸ್ಮೃತಿ ಇರಾನಿ ಕಳುಹಿಸಿರುವ ಪತ್ರವನ್ನು ಇಮೇಲ್ ಮಾಡಿ ನಮಗೆ ತಿಳಿಸಿದ್ದಾರೆ.[ಎಸ್ಎಸ್ಎಲ್ಸಿ ಹೊಸ ಪರೀಕ್ಷಾ ಪದ್ದತಿ ವರದಿಯಲ್ಲೇನಿದೆ?]
ಮುಂದಿನ ಪುಟದಲ್ಲಿ ಮಹೇಶ್ ಅಗಿವಾಲ್ ಅವರ ಪುತ್ರ ಶ್ರೀಧರ್ ಅಗಿವಾಲ್ ಅವರು ಗಳಿಸಿರುವ ಅಂಕ, ಜೊತೆಗೆ ಸ್ಮೃತಿ ಇರಾನಿ ಕಳುಹಿಸಿರುವ ಅಭಿನಂದನಾ ಪತ್ರದ ಚಿತ್ರವನ್ನು ನೀಡಲಾಗಿದೆ.
ಬಳ್ಳಾರಿಯಲ್ಲಿ ಪ್ರಥಮ ಸ್ಥಾನ
ಬಳ್ಳಾರಿ ಜಿಲ್ಲೆಯಲ್ಲಿ ಸಿಬಿಎಸ್ಸಿ 12ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀಧರ್ ಅಗಿವಾಲ್ ಅವರ ಅಂಕಪಟ್ಟಿ
ಸ್ಮೃತಿ ಇರಾನಿ ಅಭಿನಂದನೆ:
ಶ್ರೀಧರ್ ಅಗಿವಾಲ್ ಅವರಿಗೆ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅಭಿನಂದನೆ ಸಲ್ಲಿಸಿರುವ ಪತ್ರ
ಸ್ಮೃತಿ ಇರಾನಿ ಅಭಿನಂದನೆ
ಸಿಬಿಎಸ್ಇ 12 ತರಗತಿಯ ಪರೀಕ್ಷೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಹೆಚ್ಚಿನ ಅಂಕಗಳಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮೃತಿ ಇರಾನಿ ವೈಯಕ್ತಿಕವಾಗಿ ತಮ್ಮ ಸಹಿ ಇರುವ ಪತ್ರವನ್ನು ಕಳುಹಿಸಿ ಅಭಿನಂದಿಸಿದ್ದಾರೆ.
ಸಂತೋಷ ಮತ್ತು ಆಶ್ಚರ್ಯ
"ನಿಜವಾಗಿ ನನಗೆ ಆಶ್ಚರ್ಯವಾಗುತ್ತಿದೆ. ಸಿಬಿಎಸ್ಇ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮಂತ್ರಿಗಳು ಅದರಲ್ಲೂ ಕೇಂದ್ರ ಮಾನವ ಸಂಪನ್ಮೂಲ ಸಚಿವೆಯೊಬ್ಬರು ಪತ್ರ ಮುಖೇನ ಅಭಿನಂದನೆ ತಿಳಿಸುತ್ತಿರುವುದು ಇದೇ ಮೊದಲು. ನನ್ನ ಮಗನಿಗೆ ಬಹಳ ಸಂತೋಷವಾಗಿದೆ."
- ಮಹೇಶ್ ಅಗಿವಾಲ್, ಶ್ರೀಧರ್ ಅಗಿವಾಲ್ ಅವರ ಪೋಷಕರು