ಪೊಲೀಸರಿಗೆ ಗೃಹ ಸಚಿವ ಪರಮೇಶ್ವರ ನೀಡಿದ ಸೂಚನೆಗಳೇನು?
ಬೆಂಗಳೂರು, ನವೆಂಬರ್. 06: ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು ಪೊಲೀಸ್ ಇಲಾಖೆಯ ಸಹಕಾರ ಅಗತ್ಯ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.[ನಮ್ಮ ತಂದೆಯೇ ನನಗೆ ಕ್ಷೌರ ಮಾಡುತ್ತಿದ್ದರು: ಪರಮೇಶ್ವರ]
ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್, ಅಪರ ಮುಖ್ಯ ಕಾರ್ಯದರ್ಶಿ ಪಟ್ನಾಯಕ್, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.
ಗೃಹ
ಸಚಿವ
ಡಾ.
ಜಿ.
ಪರಮೇಶ್ವರ
ಭಾಷಣದ
ಹೈಲೈಟ್ಸ್
*
ರಾಜ್ಯದಲ್ಲಿರುವ
ಅಲ್ಪಸಂಖ್ಯಾತರ
ಹಿತ
ಕಾಯಲು
ಮತ್ತು
ಎಲ್ಲರೂ
ಶಾಂತಿಯುತವಾಗಿ
ಜೀವನನ
ನಡೆಸಲು
ಅವಕಾಶ
ಮಾಡಿಕೊಡುವುದು
ಗೃಹ
ಇಲಾಖೆಯ
ಕರ್ತವ್ಯ
*
ಮಂಗಳೂರು
ಹಾಗೂ
ಬೆಳಗಾವಿ
ವಿಭಾಗಗಳಲ್ಲಿ
ಶಾಂತಿ
ಕದಡುವ,
ಅನಾವಶ್ಯಕವಾಗಿ
ಸಮಾಜವನ್ನು
ಒಡೆಯುವ
ಪ್ರಕರಣಗಳು
ಹೆಚ್ಚಾಗುತ್ತಿದ್ದು,
ಇದನ್ನು
ತಡೆಗಟ್ಟುವಲ್ಲಿ
ಪೊಲೀಸ್
ಇಲಾಖೆ
ಪಾತ್ರ
ಬಹಳ
ಮುಖ್ಯವಾಗಿದೆ.[ಡ್ರಾಪ್
ಕೊಡುವ
ನೆಪದಲ್ಲಿ
ಪಕ್ಕದ
ಮನೆ
ವಿದ್ಯಾರ್ಥಿನಿ
ಮೇಲೆ
ರೇಪ್]
*
ರಾಜ್ಯದಲ್ಲಿ
ಹೆಚ್ಚುತ್ತಿರುವ
ಮರಳು
ದಂಧೆ,
ಬಡ್ಡಿ
ವ್ಯವಹಾರ,
ಭೂ
ಹಗರಣ,
ಭೂ
ಮಾಫಿಯಾ
ಈ
ರೀತಿಯ
ಯಾವುದೇ
ದಂಧೆಯಲ್ಲಿ
ಗೃಹ
ಇಲಾಖೆಯ
ಅಧಿಕಾರಿಗಳು,
ಸಿಬ್ಬಂದಿ
ಶಾಮೀಲಾಗಿದ್ದು
ಕಂಡುಬಂದರೆ
ಕಟ್ಟುನಿಟ್ಟಿನ
ಕ್ರಮ
ತೆಗೆದುಕೊಳ್ಳಲಾಗುವುದು.
*
ಸಮಾಜುಘಾತಕ
ಚಟುವಟಿಕೆಗೆ
ಅವಕಾಶ
ನೀಡದಂತೆ
ಪೊಲೀಸ್
ಇಲಾಖೆ
ಸದಾ
ಮುಂಜಾಗ್ರತಾ
ಕ್ರಮ
ಅನುಸರಿಸಬೇಕು.
*
ಬೆಂಗಳೂರಿನಲ್ಲಿರುವ
ಶೇ.
40
ವಲಸಿಗರ
ರಕ್ಷಣೆ
ಮತ್ತು
ಇವರ
ಕಾರ್ಯಚಟುವಟಿಕೆಗಳ
ಮಾಹಿತಿ
ಸಂಗ್ರಹಿಸುವುದು
ಬಹಳ
ಮುಖ್ಯ.