ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಗೃಹ ಸಚಿವರ ಮೊದಲ ಸಭೆ
ಬೆಂಗಳೂರು, ಆಗಸ್ಟ್ 09 : ಪೊಲೀಸ್ ಇಲಾಖೆಯಲ್ಲಿನ ಸಮಸ್ಯೆಗಳ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಮೊದಲ ಸಭೆ ಮಾಡಿದ್ದೇನೆ. ಪೊಲೀಸ್ ಇಲಾಖೆಯನ್ನು ಜನ ಸ್ನೇಹಿ ಇಲಾಖೆಯನ್ನಾಗಿ ಮಾರ್ಪಡಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.
ಸೋಮವಾರ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ನಾನು ಗೃಹ ಸಚಿವನಾದ ಬಳಿಕ ಮೊದಲಬಾರಿಗೆ ಗೃಹ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಒಳಗೊಂಡಂತೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ. ನಾನು ಅಪರಾಧ ಪ್ರಕರಣಗಳ ಬಗ್ಗೆ ವಿವರ ಕೇಳೀಲ್ಲ. ಇಲಾಖೆಗೆ ಬರುವ ಅನುದಾನ, ಪೊಲೀಸ್ ಇಲಾಖೆಯಲ್ಲಿನ ಆಧುನೀಕರಣ, ತಂತ್ರಜ್ಞಾನ ಬಳಕೆ ಕುರಿತು ಸಭೆ ನಡಸಿ ಮಾಹಿತಿ ಪಡೆದಿದ್ದೇನೆ. ಇಲಾಖೆಯನ್ನು ನಾನು ಅರ್ಥ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ಕುರಿತು ಬೆಂಗಳೂರಿನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ @ikseshwarappa #AragaJnanendra pic.twitter.com/B5FnztOrM0
— oneindiakannada (@OneindiaKannada) August 9, 2021
ಪೊಲೀಸ್ ಇಲಾಖೆಯಲ್ಲಿ ಹಲವು ಸಮಸ್ಯೆಗಳಿದ್ದು, ಅವನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುವುದು. ಕರ್ನಾಟಕ ಪೊಲೀಸ್ ಇಲಾಖೆ ಮಹತ್ವದ ಇಲಾಖೆ. ಪೊಲೀಸರು ದಕ್ಷತೆಯಿಂದ ಕೆಲಸ ಮಾಡಿದರೆ ಮಾತ್ರ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ನೆಲೆಸಿ ಜನರು ನೆಮ್ಮದಿಯಿಂದ ಇರಲು ಸಾಧ್ಯ. ಇಲಾಖೆ ಇನ್ನೂ ಚೆನ್ನಾಗಿ ಕೆಲಸ ಮಾಡಬೇಕು. ಇದಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗುವುದು. ಮೊದಲ ಹಂತದಲ್ಲಿ ಪೊಲೀಸ್ ಇಲಾಖೆಯ ಅಭಿವೃದ್ಧಿ, ಯೋಜನೆ, ಅನುದಾನ ಕುರಿತು ಚರ್ಚೆ ನಡೆಸಿದ್ದೇನೆ. ಅಪರಾಧಗಳು, ರಾಜ್ಯದ ವಸ್ತುಸ್ಥಿತಿ ಕುರಿತು ಮಾಹಿತಿ ಪಡೆಯುತ್ತೇನೆ. ಪೊಲೀಸ್ ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಕೆ.ಎಸ್.
ಈಶ್ವರಪ್ಪ
ಅವರು
ಕಾರ್ಯಕ್ರಮವೊಂದರಲ್ಲಿ
ತಲೆ
ಕಡಿಯಿರಿ
ಎಂಬ
ವಿವಾದಾತ್ಮಕ
ಹೇಳಿಕೆ
ನೀಡಿದ್ದು,
ಅದರ
ಬಗ್ಗೆ
ಪ್ರತಿಕ್ರಿಯೆ
ನೀಡಲು
ನೂತನ
ಗೃಹ
ಮಂತ್ರಿ
ಅರಗ
ಜ್ಞಾನೇಂದ್ರ
ನಿರಾಕರಣೆ
ಮಾಡಿದರು.
ಈಶ್ವರಪ್ಪ
ಅವರು
ಯಾವ
ಹೇಳಿಕೆಯನ್ನು
ಯಾವ
ಮನಸ್ಥಿತಿಯಲ್ಲಿ
ಹೇಳಿದ್ದಾರೋ
ನನಗೆ
ಗೊತ್ತಿಲ್ಲ.
ಅದನ್ನು
ನೋಡಿದ
ಬಳಿಕ
ಪ್ರತಿಕ್ರಿಯೆ
ನೀಡುತ್ತೇನೆ.
ವಿನಾಃಕಾರಣ
ಪ್ರತಿಕ್ರಿಯೆ
ನೀಡುವುದು
ಸೂಕ್ತವಲ್ಲ
ಎಂದು
ಸ್ಪಷ್ಟನೆ
ನೀಡಿದರು.
ಇನ್ಸೈಡ್ ಸ್ಟೋರಿ: ಗೃಹ ಮಂತ್ರಿ ಇಲಾಖೆ ಸಮಸ್ಯೆಗಳನ್ನು ಸಡಿಪಡಿಸುತ್ತಾರಾ?
ಅಪರಾಧ ಚಿತ್ರಣ ಕುರಿತು ಸಭೆ: ರಾಜ್ಯದಲ್ಲಿ ಅಪರಾಧ ಸ್ಥಿತಿಗತಿ, ತನಿಖಾ ಸಂಸ್ಥೆಗಳು ನಡೆಸುತ್ತಿರುವ ಮಹತ್ವದ ಅಪರಾಧ ಪ್ರರಣಗಳ ತನಿಖಾ ವರದಿಗಳ ವಸ್ತುಸ್ಥಿತಿ ಸೇರಿದಂತೆ ಇಲಾಖೆಯ ಕಾರ್ಯಶೈಲಿ ಅಂಕಿ ಅಂಶ ಮತ್ತಿತರ ಮಹತ್ವದ ವಿಚಾರದ ಬಗ್ಗೆ ಒಂದು ವಾರದೊಳಗೆ ಸಭೆ ನಡೆಸಿ ಚರ್ಚಿಸುವುದಾಗಿ ನೂತನ ಸಚಿವರು ಪೊಲೀಸರಿಗೆ ತಿಳಿಸಿದ್ದಾರೆ. ಅದರಂತೆ ಒಂದು ವಾರದೊಳಗೆ ರಾಜ್ಯದ ಅಪರಾಧ ಚಿತ್ರಣ, ಅಪರಾಧ ಕೃತ್ಯಗಳ ಬಗ್ಗೆ ನೂತನ ಗೃಹ ಸಚಿವರು ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎಂದು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿ ತಿಳಿಸಿದ್ದಾರೆ.
ಇನ್ನು ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದ ಸಭೆಯಲ್ಲಿ ರಾಜ್ಯದಲ್ಲಿ ಶಾಂತಿ ಸುವ್ಯಸ್ಥೆ ಕಾಪಾಡುವ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಜರುಗಿಸಲು ಸೂಚನೆ ನೀಡಿದ್ದಾರೆ. ಯಾವುದೇ ಪ್ರಭಾವಕ್ಕೆ ಒಳಗಾಗದೇ ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ.