ಹೈ-ಕ ಕೋಟಾ ಸೀಟು ಹಂಚಿಕೆ: ಸಹಮತದ ಒಪ್ಪಂದ ಕಾನೂನಲ್ಲ- ಹೈಕೋರ್ಟ್
ಬೆಂಗಳೂರು, ಮಾ.18: ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಹಂಚಿಕೆ ಸಂಬಂಧ ರಾಜ್ಯ ಸರ್ಕಾರ ಮತ್ತು ಕರ್ನಾಟಕದ ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳ ಸಂಘದ ನಡುವಿನ ಸಹಮತದ ಒಪ್ಪಂದವನ್ನು ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಪ್ರವೇಶ ನಿಯಮಗಳ ನಿಬಂಧನೆಗಳ ಅಡಿಯಲ್ಲಿ) ಆದೇಶ, 2013 ರಲ್ಲಿ ಸೀಟುಗಳನ್ನು ಕಾಯ್ದಿರಿಸಲು 'ಕಾನೂನು' ಅಥವಾ 'ಆದೇಶ' ವೆಂದು ಪರಿಗಣಿಸಲಾಗದು ಎಂದು ರಾಜ್ಯ ಹೈಕೋರ್ಟ್ ಆದೇಶಿಸಿದೆ.
ಅಲ್ಲದೆ, ಇಡೀ ರಾಜ್ಯದಲ್ಲಿನ ಅರ್ಹ ತೆಲುಗು ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಈ ಕೋರ್ಸ್ಗಳ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಎನ್ಎಂಸಿಗೆ ಅನುಮತಿ ನೀಡುವ ಎರಡನೇ ಸುತ್ತಿನ ಕೌನ್ಸೆಲಿಂಗ್ ಹೊಸದಾಗಿ ನಡೆಸಲು ನ್ಯಾಯಾಲಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.
ಉಕ್ರೇನ್ನಿಂದ ಬಂದ ವೈದ್ಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿ; ಸರ್ಕಾರಕ್ಕೆ ಎಚ್ಡಿಕೆ ಆಗ್ರಹ
ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಸಲ್ಲಿಸಿದ ಅರ್ಜಿಗಳನ್ನು ಭಾಗಶಃ ಮಾನ್ಯ ಮಾಡುವ ಮೂಲಕ ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶ ನೀಡಿದೆ.
ಹೈದರಾಬಾದ್-ಕರ್ನಾಟಕ ಪ್ರದೇಶದ ತೆಲುಗು ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾತ್ರ ರಾಯಚೂರಿನ ನವೋದಯ ವೈದ್ಯಕೀಯ ಕಾಲೇಜಿನಲ್ಲಿ (ಎನ್ಎಂಸಿ) ಪ್ರಸ್ತುತ ಶೈಕ್ಷಣಿಕ ಪಿಜಿ ಮತ್ತು ಯುಜಿ ವೈದ್ಯಕೀಯ ಕೋರ್ಸ್ಗಳಿಗೆ ಸೀಟುಗಳನ್ನು ಪಡೆಯಲು ರಾಜ್ಯ ಸರ್ಕಾರ ಹೊರಡಿಸಿದ ಪರಿಷ್ಕೃತ ಸೀಟ್ ಮ್ಯಾಟ್ರಿಕ್ಸ್ ಅನ್ನು ಸಹ ನ್ಯಾಯಪೀಠ ರದ್ದುಗೊಳಿಸಿದೆ.
ವಿಭಾಗೀಯ ಪೀಠದ ಆದೇಶವೇನು?
ಕೋರ್ಟ್ ಪರಿಶೀಲನೆಯಲ್ಲಿರುವ ಸಹಮತದ ಒಪ್ಪಂದವು ಸೀಟು ವ್ಯವಸ್ಥೆಗಳ ವಿಷಯದಲ್ಲಿ ಮತ್ತು ವೃತ್ತಿಪರ ಕೋರ್ಸ್ಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಬಂಧಿಸಿದ ಇತರ ಪ್ರಾಸಂಗಿಕ ವಿಷಯಗಳಲ್ಲಿ ಸಂಘರ್ಷವನ್ನು ತಪ್ಪಿಸಲು ಉಭಯ ಪಕ್ಷಗಳ ನಡುವಿನ ತಾತ್ಕಾಲಿಕ ವ್ಯವಸ್ಥೆಯಾಗಿದೆ ಮತ್ತು ಇದು ಕಲಂ 371(ಜೆ)ಅಡಿಯಲ್ಲಿ ಆದೇಶದ ಸ್ಥಿತಿಯನ್ನು ಹೊಂದಲು ಸಾಧ್ಯವಿಲ್ಲ ಎಂದು ಪೀಠವು ತಿಳಿಸಿದೆ.
2014 ರಲ್ಲಿ ನ್ಯಾಯಾಲಯವು ಕೆಇಐ (ಆರ್ ಎಎಚ್-ಕೆಆರ್ ) ಆದೇಶ, 2013 ರ ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಿರುವುದನ್ನು ಗಮನಿಸಿದ ಪೀಠವು, 2022 ಜನವರಿಯಲ್ಲಿ ಸರ್ಕಾರ ಮತ್ತು ಸಂಘ ನಡುವೆ ಒಮ್ಮತದ ಒಪ್ಪಂದದಲ್ಲಿನ ಷರತ್ತುಗಳ ಗಮನಿಸಿದರೆ, 371 (ಜೆ) ಕಲಂ ಅಡಿಯಲ್ಲಿ ನೀಡಲಾದ ಈ ಆದೇಶದ ಜಾರಿಯು ಸರ್ಕಾರಕ್ಕೆ ದೊರಕಿಲ್ಲ ಎಂದು ಹೇಳಿದೆ.
ನೀಟ್ ಕೌನ್ಸೆಲಿಂಗ್ 2022; ಪ್ರಸಕ್ತ ಮೀಸಲಾತಿ ಮಾನದಂಡಗಳ ಅನ್ವಯವೇ ಆರಂಭ: ಸುಪ್ರೀಂ ಕೋರ್ಟ್
ಕರ್ನಾಟಕ ರಾಜ್ಯ ಒಂದು ಘಟಕವನ್ನಾಗಿ ಪರಿಗಣಿಸಿದರೆ, ಸಹಮತದ ಒಪ್ಪಂದವನ್ನು ಇಡಿಯಾಗಿ ಓದಿದರೆ, ಸಂಸ್ಥೆಗೆ ಲಭ್ಯವಿರುವ ಒಟ್ಟು ಸೀಟುಗಳ ಶೇ.55ರಷ್ಟು ಸೀಟುಗಳಲ್ಲಿ ಶೇ.66ರಷ್ಟು ಸೀಟುಗಳನ್ನು ಸಂಪೂರ್ಣ ಪರಿಗಣಿಸುವ ಮೂಲಕ ಭರ್ತಿ ಮಾಡುವುದನ್ನು ನಿರ್ಬಂಧಿಸುವುದಿಲ್ಲ ಯಾವುದೇ ತೊಂದರೆ ಇಲ್ಲ ಎಂದು ನ್ಯಾಯಪೀಠ ಹೇಳಿದೆ.
ಎಸ್ಸಿ/ಎಸ್ಟಿ/ಒಬಿಸಿಗಳಿಗೆ ಮೀಸಲಾತಿ ಮತ್ತು 371(ಜೆ) ಕಲಂ ಅಡಿಯಲ್ಲಿ ಹೈದ್ರಾಬಾದ್-ಕರ್ನಾಟಕ ಪ್ರದೇಶದ ಮೀಸಲಾತಿ ಸೇರಿದಂತೆ ರಾಜ್ಯದ ಮೀಸಲಾತಿ ನೀತಿಯನ್ನು ಸರ್ಕಾರಕ್ಕೆ ಒಪ್ಪಿಸಲಾಗಿರುವ ಶೇ.25ರಷ್ಟು ಕೋಟಾದಲ್ಲಿ ಶೇ.20ರಿಂದ ಶೇ.25ರಷ್ಟು ಸೀಟುಗಳಿಗೆ ಜಾರಿಗೊಳಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಚೆನ್ನಾಗಿ ತಿಳಿದಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.