ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಭಾರಿ ಮಳೆಯ ಎಚ್ಚರಿಕೆ
ಬೆಂಗಳೂರು, ನವೆಂಬರ್ 17: ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ನವೆಂಬರ್ 21ರವರೆಗೆ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹೇಳಲಾಗಿದೆ.
ಇನ್ನು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ನವೆಂಬರ್ 20ರವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಧಿಕ ಮಳೆ
ಕಳೆದ 4-5 ದಿನದಿಂದ ನಗರದಲ್ಲಿ ಸುರಿಯುತ್ತಿರುವ ಜಿಟಿ ಜಿಟಿ ಮಳೆ, ಮೈ ಕೊರೆಯೋ ಚಳಿಗೆ ಜನರು ಹೈರಾಣಾಗಿ ಹೋಗಿದ್ದು, ಇದರ ನಡುವೆ ಮಂಗಳವಾರ ಸಂಜೆ ಸುರಿದ ಭಾರೀ ಮಳೆ ರಾಜಧಾನಿಯಲ್ಲಿ ಅವಾಂತರಗಳನ್ನೇ ಸೃಷ್ಟಿಸಿದೆ.
ನಗರದಲ್ಲಿ ಸುರಿದ ಮಳೆಗೆ ರಸ್ತೆಗಳೆಲ್ಲಾ ಕೆರೆಗಳಂತಾಗಿದ್ದವು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿತ್ತು. ಇನ್ನೂ 2 ರಿಂದ 3 ದಿನ ಕೂಡ ಇದೇ ಪರಿಸ್ಥಿತಿ ಇರಲಿದ್ದು, ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
5 ದಿನ ಸಾಧಾರಣ ಮಳೆಯಾಗಲಿದೆ. ಹೀಗಾಗಿ ಬೆಂಗಳೂರಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಿನಲ್ಲಿ
ಕಳೆದ
4-5
ದಿನದಿಂದ
ಜಿಟಿ
ಜಿಟಿ
ಮಳೆಯಿಂದ
ಬೇಸತ್ತಿದ್ದ
ಬೆಂಗಳೂರು
ಮಂದಿಗೆ
ಒಮ್ಮೆಲೇ
ಸುರಿದ
ಭಾರೀ
ಮಳೆ
ಅವಾಂತರಗಳನ್ನ
ತಂದೊಡ್ಡಿದೆ.
ಒಂದು
ಕಡೆ
ಮೈ
ಕೊರೆಯೋ
ಚಳಿ,
ಮತ್ತೊಂದೆಡೆ
ಜಿಟಿ
ಜಿಟಿ
ಮಳೆ
ವೇಗ
ಪಡೆದುಕೊಂಡು
ಆರ್ಭಟಿಸಿ
ಅವಾಂತರ
ಸೃಷ್ಟಿಸಿ
ಆಘಾತ
ನೀಡಿದೆ.
ಇದೆಲ್ಲದರಿಂದ
ಬೇಸತ್ತಿರುವ
ರಾಜಧಾನಿ
ಮಂದಿ
ಈ
ಮಳೆಯಿಂದ
ಮುಕ್ತಿ
ಯಾವಾಗಪ್ಪ
ಎಂದು
ಹೇಳುತ್ತಿದ್ದಾರೆ.
ಹವಾಮಾನ ಇಲಾಖೆ ಮಾಹಿತಿ ನೀಡಿರುವ ಪ್ರಕಾರ ಒಂದೇ ದಿನ ನಗರದಲ್ಲಿ 40.2 ಮಿ.ಮೀ ನಷ್ಟು ಮಳೆಯಾಗಿದೆ ಎಂದು ತಿಳಿಸಿದೆ. ಈ ಪೈಕಿ ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ 21.6 ಮಿ.ಮೀ ಮಳೆಯಾಗಿದೆ ಎಂದು ತಿಳಿಸಿದೆ.
ಭಾರೀ
ಮಳೆಯಿಂದಾಗಿ
ಬಾಣಸವಾಡಿ
ರೈಲ್ವೆ
ನಿಲ್ದಾಣದ
ಹಿಂಭಾಗ,
ಬಾಗಲಕುಂಟೆ,
ಗುರಗುಂಟೆಪಾಳ್ಯ,
ನೆಲಮಂಗಲ,
ತುಮಕೂರು
ರಸ್ತೆ,
ಕೋರಮಂಗಲ,
ರಾಜರಾಜೇಶ್ವರಿ
ನಗರ,
ಮತ್ತು
ತಗ್ಗು
ಪ್ರದೇಶಗಳಲ್ಲಿ
ನೀರು
ನಿಂತಿದ್ದರಿಂದ
ಜನರು
ಸಾಕಷ್ಟು
ಸಮಸ್ಯೆ
ಎದುರಿಸುವಂತಾಗಿತ್ತು.
ಕರಾವಳಿ,
ದಕ್ಷಿಣ
ಒಳನಾಡು
ಸೇರಿದಂತೆ
ಹಲವೆಡೆ
ಮುಂದಿನ
ಕೆಲ
ದಿನಗಳ
ಕಾಲ
ಭಾರೀ
ಮಳೆಯಾಗಲಿದ್ದು,
ಕರ್ನಾಟಕದ
ಬಹುತೇಕ
ಭಾಗಗಳಲ್ಲಿ
ಯೆಲ್ಲೋ
ಅಲರ್ಟ್
ಘೋಷಿಸಲಾಗಿದೆ.
ಮಳೆಯಾಗಿರುವ ಪ್ರದೇಶಗಳು
ಕಾರವಾರ, ಹಾಸನ, ಸುಬ್ರಹ್ಮಣ್ಯ, ಚಿಕ್ಕಮಗಳೂರು, ಶೃಂಗೇರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೋಟ, ಬೆಂಗಳೂರು ನಗರ, ಬೆಂಗಳೂರು ಎಚ್ಎಎಲ್, ಜಿಕೆವಿಕೆ, ನುಗ್ಗೇನಹಳ್ಳಿ, ಪಂಚನಹಳ್ಳಿ, ಗೇರುಸೊಪ್ಪ, ಬೇಲೂರು, ಮಾಲೂರು, ನೆಲಮಂಗಲ, ಎಂಎಂ ಹಿಲ್ಸ್, ಹೊನ್ನಾವರ, ಗೋಕರ್ಣ, ಗೌರಿ ಬಿದನೂರು, ಜ್ಞಾನಭಾರತಿ, ಹೊಸದುರ್ಗ, ಹೊಸಕೋಟೆ, ಸಿದ್ದಾಪುರ, ಸಾಗರ, ಸಿದ್ದಾಪುರ, ಮದ್ದೂರು, ಬಾಳೆಹೊನ್ನೂರು, ಕೊಟ್ಟಿಗೆಹಾರ, ಕಮ್ಮರಡಿ, ಜಯಪುರ, ಅಜ್ಜಂಪುರ, ಶ್ರವಣಬೆಳಗೊಳ, ಕಾರ್ಕಳ, ಶಿರಾಲಿ, ಭಟ್ಕಳ, ಅಂಕೋಲ, ಐಟಿಸಿ ಜಾಲ, ಮಂಡ್ಯ, ಕೃಷ್ಣರಾಜಸಾಗರ, ಉತ್ತರಹಳ್ಳಿ, ಅರಸೀಕೆರೆ, ಭದ್ರಾವತಿ, ಸೊರಬ, ತೀರ್ಥಹಳ್ಳಿಯಲ್ಲಿ ಮಳೆಯಾಗಿದೆ.
ಬೆಂಗಳೂರು ವಾತಾವರಣ ಹೇಗಿದೆ?
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಮಳೆಯಾಗಲಿದೆ. 27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್ಎಎಲ್ನಲ್ಲಿ 27.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೆಂಗಳೂರು ನಗರದಲ್ಲಿ 26.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 27.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 206 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಕನಿಷ್ಠ ಉಷ್ಣಾಂಶ
ದಾವಣಗೆರೆಯಲ್ಲಿ 19.3 ಡಿಗ್ರಿ ಸೆಲ್ಸಿಯಸ್ ಅತಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ರಾಜ್ಯದ ವಾತಾವರಣ ಹೇಗಿರಲಿದೆ?
ಮುಂದಿನ
24
ಗಂಟೆಗಳಲ್ಲಿ
ರಾಜ್ಯದ
ಕರಾವಳಿ,
ದಕ್ಷಿಣ
ಒಳನಾಡು
ಹಾಗೂ
ಉತ್ತರ
ಒಳನಾಡಿನಲ್ಲಿ
ಮಳೆಯಾಗಲಿದೆ.
ಉತ್ತರ
ಕನ್ನಡ,
ದಕ್ಷಿಣ
ಕನ್ನಡ,
ಉಡುಪಿ,
ಬೆಂಗಳೂರು
ಗ್ರಾಮಾಂತರ,
ಬೆಂಗಳೂರು
ನಗರ
ಚಾಮರಾಜನಗರ,
ಚಿಕ್ಕಬಳ್ಳಾಪುರ,
ಚಿಕ್ಕಮಗಳೂರು,
ಚಿತ್ರದುರ್ಗ,
ದಾವಣಗೆರೆ,
ಹಾಸನ,
ಕೊಡಗು,
ಕೋಲಾರ,
ಮಂಡ್ಯ,
ಮೈಸೂರು,
ರಾಮನಗರ,
ಶಿವಮೊಗ್ಗ,
ತುಮಕೂರು
ಜಿಲ್ಲೆಗಳಲ್ಲಿ
ಮಳೆಯಾಗಲಿದೆ
ಎಂದು
ಹೇಳಲಾಗಿದೆ.
ಇನ್ನು
ಉತ್ತರ
ಒಳನಾಡಿನ
ಬಾಗಲಕೋಟೆ,
ಬೆಳಗಾವಿ,
ಬೀದರ್,
ಧಾರವಾಡ,
ಗದಗ,
ಹಾವೇರಿ,
ಕಲಬುರಗಿ,
ಕೊಪ್ಪಳ,
ರಾಯಚೂರು,
ವಿಜಯಪುರ,
ಯಾದಗಿರಿ
ಜಿಲ್ಲೆಗಳಲ್ಲಿ
ಸಾಧಾರಣ
ಮಳೆಯಾಗಲಿದೆ.
Recommended Video