ನವೆಂಬರ್ 9ರವರೆಗೆ ರಾಜ್ಯದ 8 ಜಿಲ್ಲೆಗಳಲ್ಲಿ ಅಧಿಕ ಮಳೆ
ಬೆಂಗಳೂರು, ನವೆಂಬರ್ 04: ರಾಜ್ಯದ 8ಕ್ಕೂ ಅಧಿಕ ಜಿಲ್ಲೆಗಳಲ್ಲಿ ನವೆಂಬರ್ 09ರವರೆಗೆ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ನಗರದಲ್ಲಿ ನ.4ರಂದು ಹಿಂಗಾರು ಮಳೆಯ ಪ್ರಭಾವ ಅಧಿಕವಾಗಿರಲಿದ್ದು, ಈ ವೇಳೆ ಅನೇಕ ಪ್ರದೇಶಗಳಲ್ಲಿ ಗುಡುಗು ಮತ್ತು ಗಾಳಿ ಸಹಿತ ಭಾರಿ ಮಳೆ ಬೀಳಲಿದೆ. ಉಳಿದ ಎರಡು ದಿನ ಮಳೆ ಪ್ರಭಾವ ಇದ್ದರೂ ಸಹಿತ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮತ್ತು ತುಂತುರು ಮಳೆ ಬೀಳುವ ಸಂಭವವಿದೆ. ಕೆಲವು ದಿನಗಳಿಂದ ಕಂಡು ಬರುತ್ತಿರುವ ಮೋಡ ಮುಸುಕಿದ ವಾತಾವರಣವೇ ನ.6ರ ವರೆಗೆ ಮುಂದುವರಿಯಲಿದೆ.
ನ.4ರಿಂದ ಭಾರಿ ಮಳೆ ಮುನ್ಸೂಚನೆ, ಹಲವೆಡೆ ಯೆಲ್ಲೋ ಅಲರ್ಟ್
ಚಿಕ್ಕಮಗಳೂರು: ಕಾಫಿ, ಅಡಕೆ ಸೇರಿದಂತೆ ಇತರೇ ಬೆಳೆಗಳಿಗೆ ಅಪಾರ ನಷ್ಟವುಂಟು ಮಾಡಿರುವ ಮಳೆ, ಎರಡು ದಿನಗಳಿಂದ ಬಿಡುವು ಕೊಟ್ಟು, ಬುಧವಾರ ಮತ್ತೆ ರೀ ಎಂಟ್ರಿ ಕೊಟ್ಟಿರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ.
ಚಿಕ್ಕಮಗಳೂರು, ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಚಿಕ್ಕಮಗಳೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ದಟ್ಟವಾಗಿ ಮೋಡ ಕವಿದ ವಾತಾವರಣ ಇದ್ದು, ರಾತ್ರಿ ವೇಳೆಗೆ ಕೆಲವೆಡೆ ಮಳೆಯಾಗುತ್ತಿತ್ತು.
ಆದರೆ, ಬುಧವಾರ ಮಧ್ಯಾಹ್ನ 4 ಗಂಟೆಗೆ ಗುಡುಗು, ಮಿಂಚುಸಹಿತ ಆರಂಭವಾದ ಮಳೆ 10 ನಿಮಿಷಗಳ ಕಾಲ ಬಂದು ನಂತರದಲ್ಲಿ ಅರ್ಭಟ ಕಡಿಮೆಯಾಗಿತ್ತಾದರೂ ತುಂತುರು ಹನಿ ಮುಂದುವರಿದಿತ್ತು.
ಶೃಂಗೇರಿ ತಾಲೂಕಿನಾದ್ಯಂತ ಬುಧವಾರ ಸಂಜೆ ಗುಡಿಗು, ಸಿಡಿಲುಸಹಿತ ಭಾರಿ ಮಳೆ ಆರ್ಭಟಿಸಿತು. ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿದ್ದು, ಸಂಜೆಯ ವೇಳೆ ಗುಡುಗು, ಸಿಡಿಲಿನ ಆರ್ಭಟ ಆರಂಭಗೊಂಡಿತು. ಪಟ್ಟಣ ಸೇರಿದಂತೆ ಗಾಮೀಣ ಪ್ರದೇಶ ವಿವಿಧೆಡೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಸುಮಾರು ಎರಡು ಗಂಟೆಗಳಿಗೂ ಅಧಿಕ ಹೊತ್ತು ಭಾರೀ ಮಳೆ ಸುರಿಯಿತು.
ಒಂದೆಡೆ ದೀಪಾವಳಿಯ ಸಂಭ್ರಮವಿದ್ದರೆ ಇನ್ನೊಂದೆಡೆ ಗುಡುಗು, ಸಿಡಿಲು ಮಳೆಯ ಆರ್ಭಟ ಜನರಲ್ಲಿ ನಿರಾಸೆ ಮೂಡಿಸಿದೆ. ಬಣ್ಣದ ಹಬ್ಬ, ಬೆಳಕಿನ ಹಬ್ಬ, ಪಟಾಕಿ ಹಬ್ಬ ದೀಪಾವಳಿಗೆ ಗುಡುಗು ಮಿಂಚಿನ ಬೆಳಗು, ಗುಡುಗಿನ ಆರ್ಭಟವೇ ಹೆಚ್ಚಾಗುತ್ತಿದೆ.
ಎಲ್ಲೆಲ್ಲಿ ಮಳೆ
ಪಾವಗಡ, ಮೂಡುಬಿದಿರೆ, ಕಾರ್ಕಳ, ಕೋಟ, ಕಳಸ, ಶೃಂಗೇರಿ, ಬಾಳೆಹೊನ್ನೂರು, ಭಾಗಮಂಡಲ, ಧರ್ಮಸ್ಥಳ, ಬೆಳ್ತಂಗಡಿ, ಹಾವೇರಿ, ಆಗುಂಬೆ, ಅಗ್ರಹಾರ ಕೋಣಂದೂರು, ದಾವಣಗೆರೆಯಲ್ಲಿ ಮಳೆಯಾಗಿದೆ.
ಬೆಂಗಳೂರು ವಾತಾವರಣ ಹೇಗಿದೆ?
ಬೆಂಗಳೂರಲ್ಲಿ
ಭಾಗಶಃ
ಮೋಡಕವಿದ
ವಾತಾವರಣವಿದ್ದು,
ಅಲ್ಲಲ್ಲಿ
ಸಾಧಾರಣ
ಮಳೆಯಾಗುವ
ಸಾಧ್ಯತೆ
ಇದೆ,27
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ,
20
ಡಿಗ್ರಿ
ಸೆಲ್ಸಿಯಸ್
ಕನಿಷ್ಠ
ಉಷ್ಣಾಂಶ
ದಾಖಲಾಗಿದೆ.
ಎಚ್ಎಎಲ್ನಲ್ಲಿ
25.4
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ,
18.4
ಡಿಗ್ರಿ
ಸೆಲ್ಸಿಯಸ್
ಕನಿಷ್ಠ
ಉಷ್ಣಾಂಶ,
ಬೆಂಗಳೂರು
ನಗರದಲ್ಲಿ
26.2
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ
20.2
ಡಿಗ್ರಿ
ಸೆಲ್ಸಿಯಸ್
ಕನಿಷ್ಠ
ಉಷ್ಣಾಂಶ,
ಕೆಐಎಎಲ್ನಲ್ಲಿ
27.4
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ,
20.4
ಡಿಗ್ರಿ
ಸೆಲ್ಸಿಯಸ್
ಕನಿಷ್ಠ
ಉಷ್ಣಾಂಶ
ದಾಖಲಾಗಿದೆ.
ರಾಜ್ಯದ ವಾತಾವರಣ ಹೇಗಿರಲಿದೆ?
ಕರಾವಳಿಯ
ಹಲವು
ಕಡೆಗಳಲ್ಲಿ,
ದಕ್ಷಿಣ
ಒಳನಾಡಿನ
ಕೆಲವು
ಕಡೆಗಳಲ್ಲಿ
ಹಾಗೂ
ಉತ್ತರ
ಒಳನಾಡಿನ
ಒಂದೆರಡು
ಕಡೆಗಳಲ್ಲಿ
ಮಳೆಯಾಗಲಿದೆ.
ರಾಜ್ಯದ
8ಕ್ಕೂ
ಅಧಿಕ
ಜಿಲ್ಲೆಗಳಲ್ಲಿ
ನವೆಂಬರ್
09ರವರೆಗೆ
ಹೆಚ್ಚು
ಮಳೆಯಾಗಲಿದೆ
ಎಂದು
ಹವಾಮಾನ
ಇಲಾಖೆ
ಮುನ್ಸೂಚನೆ
ನೀಡಿದೆ.
ಬೆಳಗಾವಿ,
ಧಾರವಾಡ,
ಗದಗ,
ಹಾವೇರಿ,
ಚಿಕ್ಕಮಗಳೂರು,
ಹಾಸನ,
ಕೊಡಗು,
ಶಿವಮೊಗ್ಗ
ಜಿಲ್ಲೆಗಳಿಗೆ
ಯೆಲ್ಲೋ
ಅಲರ್ಟ್
ಘೋಷಿಸಲಾಗಿದೆ.
ಕರಾವಳಿ
ಪ್ರದೇಶದ
ಪ್ರಮುಖ
ಬೆಳೆಯಾಗಿರುವ
ಅಡಿಕೆಗೆ
ಹಿಂಗಾರು
ಮಳೆ
ಪೂರಕವಾಗಿದ್ದು,
ಉತ್ತಮ
ಫಸಲು
ನಿರೀಕ್ಷಿಸಬಹುದಾಗಿದೆ.
ಭಾರತೀಯ
ಹವಾಮಾನ
ಇಲಾಖೆ
ವಾಡಿಕೆಯಂತೆ
ಅಕ್ಟೋಬರ್
1
ರಿಂದ
ಹಿಂಗಾರು
ಆರಂಭಗೊಂಡಿದ್ದರೂ
ಅಕ್ಟೋಬರ್
ಕೊನೆಯ
ವಾರದಲ್ಲಿ
ಹಿಂಗಾರು
ಮಾರುತ
ಅಪ್ಪಳಿಸಿತ್ತು.
ಮುಂದಿನ
ಕೆಲವು
ದಿನಗಳ
ಕಾಲ
ಕರಾವಳಿಯಲ್ಲಿ
ಅಧಿಕ
ಮಳೆಯಾಗಲಿದೆ.
Recommended Video
ಕನಿಷ್ಠ ಉಷ್ಣಾಂಶ
ಬೆಳಗಾವಿಯಲ್ಲಿ 15.0 ಡಿಗ್ರಿ ಸೆಲ್ಸಿಯಸ್ ಅತಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.ಕರಾವಳಿ ಭಾಗದಲ್ಲಿ ಈ ಬಾರಿ ಮುಂಗಾರು ಮಳೆ ವಾಡಿಕೆಯಂತೆ ಸುರಿಯದೇ ನಿರೀಕ್ಷೆಯನ್ನು ಹುಸಿಗೊಳಿಸಿದ್ದು, ಈಗ ಹಿಂಗಾರು ಮಳೆ ಆರಂಭವಾಗಿದೆ. ಆರಂಭದಲ್ಲಿ ಉತ್ತಮ ಮಳೆ ಸುರಿಯುತ್ತಿರುವ ಕಾರಣ ಹಿಂಗಾರು ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ.