ಉತ್ತರ ಕರ್ನಾಟಕದಲ್ಲಿ ವರುಣನ ಆರ್ಭಟ
ಗುಲ್ಬರ್ಗ, ಆ.31 : ಉತ್ತರ ಕರ್ನಾಟಕದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವಿರಾರು ಎಕರೆಯಲ್ಲಿ ಬೆಳೆದು ನಿಂತಿದ್ದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಕೊಪ್ಪಳ, ರಾಯಚೂರು, ಗುಲ್ಬರ್ಗ, ಬಾಗಲಕೋಟೆ, ಬಳ್ಳಾರಿ, ಗದಗ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ.
ಬಿಸಿಲನಾಡಿನಲ್ಲಿ
ಕಳೆದ
ವಾರದಿಂದ
ಸುರಿಯುತ್ತಿರುವ
ಮಳೆಯಿಂದಾಗಿ
ಕೋಟ್ಯಂತರ
ರೂಪಾಯಿ
ನಷ್ಟ
ಸಂಭವಿಸಿದೆ.
ನೂರಾರು
ಜನ
ಮನೆ
ಕಳೆದುಕೊಂಡಿದ್ದಾರೆ.
ಇದುವರೆಗೆ
ಮಳೆಗೆ
ಸಿಲುಕಿ
10ಕ್ಕೂ
ಹೆಚ್ಚು
ಜನರು
ಮೃತಪಟ್ಟಿದ್ದಾರೆ.
ಮಳೆಯ ಹಿನ್ನಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಗುಲ್ಬರ್ಗದಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಚಿವ ಖಮರುಲ್ ಇಸ್ಲಾಂ ಅವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. [ಬಿಸಲನಾಡಲ್ಲಿ ಮುಂದುವರಿದ ವರುಣನ ಆರ್ಭಟ]
ಉತ್ತರ ಕರ್ನಾಟಕದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮುಳಗಡೆಯಾಗಿರುವ ಗ್ರಾಮಗಳಲ್ಲಿ ಅಗತ್ಯ ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಗದಗ
ಜಿಲ್ಲೆಯ
ರೋಣ
ತಾಲೂಕಿನಲ್ಲಿ
ಭಾರೀ
ಮಳೆಯಿಂದಾಗಿ
ಭಾನುವಾರ
ಮನೆಯೊಂದು
ಕುಸಿದು
ಬಿದ್ದಿದ್ದು
ಇಬ್ಬರು
ಮಕ್ಕಳು
ಅವಶೇಷಗಳಡಿ
ಸಿಲುಕಿದ್ದಾರೆ.
ರಾಯಚೂರು
ಜಿಲ್ಲೆಯ
ಕೊಣಚ
ಗ್ರಾಮದ
ಬಳಿ
ಶರಣ
ಬಸಪ್ಪ
ಎಂಬ
ಬಾಲಕ
ವಿದ್ಯುತ್
ತಂತಿ
ತುಳಿದು
ಮೃತಪಟ್ಟಿದ್ದಾನೆ.
ಭಾರೀ ಮಳೆಯಿಂದ ಹಲವು ಮನೆಗಳು ಕುಸಿದು ಬಿದ್ದಿವೆ. ನದಿಗಳು ತುಂಬಿ ಹರಿಯುತ್ತಿದ್ದು, ನದಿಪಾತ್ರದ ಪ್ರದೇಶಗಳ ಜನತೆ ಆತಂಕದಲ್ಲಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲೂ ಮಳೆ ಜನರಲ್ಲಿ ಆತಂಕ ಮೂಡಿಸಿದೆ. ಆಂಧ್ರ ಕರಾವಳಿಯಲ್ಲಿ ವಾಯುಭಾರ ಕುಸಿತದಿಂದ ಮಳೆ ಸುರಿಯುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇನ್ನೆರಡು ದಿನ ಮಳೆ ಮುಂದುವರೆಯಲಿದೆ ಎಂದು ಮುನ್ನಚ್ಚರಿಕೆ ನೀಡಿದೆ.