ಬಜೆಟ್ ಕುರಿತ ಆರೋಪಕ್ಕೆ ಸದನದಲ್ಲಿ ಉತ್ತರ ಕೊಟ್ಟ ಕುಮಾರಸ್ವಾಮಿ
Recommended Video
ಬೆಂಗಳೂರು, ಜುಲೈ 09 : ಕರ್ನಾಟಕ ಬಜೆಟ್ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಕರ್ನಾಟಕ ಬಜೆಟ್ ಅಣ್ಣ-ತಮ್ಮಂದಿರ ಬಜೆಟ್, ಹಾಸನ-ರಾಮನಗರ-ಮಂಡ್ಯ ಬಜೆಟ್ ಮುಂತಾದ ಆರೋಪಗಳಿಗೆ ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತ್ಯುತ್ತರ ನೀಡಿದರು.
ಸೋಮವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಎಚ್.ಡಿ.ಕುಮಾರಸ್ವಾಮಿ ಸದನವನ್ನು ಉದ್ದೇಶಿಸಿ ಮಾತನಾಡಿದರು. ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ. ಅಣ್ಣ-ತಮ್ಮಂದಿರ ಬಜೆಟ್ ಎಂದೆಲ್ಲಾ ಟೀಕೆಗಳು ಬಂದಿದ್ದವು. ಎಲ್ಲದಕ್ಕೂ ಕುಮಾರಸ್ವಾಮಿ ಇಂದು ಉತ್ತರ ನೀಡಿದರು.
ಕರ್ನಾಟಕ ಬಜೆಟ್ ವಿರುದ್ದ ಕೆಲವು ಕಾಂಗ್ರೆಸ್ ನಾಯಕರ ಅತೃಪ್ತಿ!
ಕುಮಾರಸ್ವಾಮಿ ಅವರ ತಿಳಿ ಹಾಸ್ಯ ಮಿಶ್ರಿತ ಮಾತುಗಳು ಸದಸನದಲ್ಲಿ ನಗುವಿನ ಅಲೆ ಎಬ್ಬಿಸಿತು. ಪ್ರತಿಪಕ್ಷ ಮಾಡಿದ ಆರೋಪಕ್ಕೆ ಕುಮಾರಸ್ವಾಮಿ ಪ್ರತ್ಯುತ್ತರ ನೀಡಿದರು. ಕಾಂಗ್ರೆಸ್-ಜೆಡಿಎಸ್ನದ್ದು ಅಪವಿತ್ರ ಮೈತ್ರಿ ಎಂದು ಆರೋಪಿಸುವ ಯಡಿಯೂರಪ್ಪ ಅವರಿಗೆ ತಿರುಗೇಟು ಕೊಟ್ಟರು.
ಉ. ಕರ್ನಾಟಕ, ಕರಾವಳಿಗೆ ಎಚ್ಡಿಕೆ ಕೊಟ್ಟಿದ್ದೇನು? ಅಭಿಮಾನಿಗಳು ಮುಂದಿಟ್ಟ ಪಟ್ಟಿ ಇದು
ಕುಮಾರಸ್ವಾಮಿ ಸದನದಲ್ಲಿ ಮಾತನಾಡಿದ ಭಾಷಣದ ಮುಖ್ಯಾಂಶಗಳು
* ನಾನು ಮೊದಲನೇ ಹಂತದಲ್ಲಿ ರೈತರ 34 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ್ದೇನೆ. ಸಾಲಮನ್ನಾ ಬಗ್ಗೆ ಜನರಲ್ಲಿ ಅಪಾರ್ಥಗಳನ್ನು ಬಿತ್ತಬೇಡಿ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ಕೊಟ್ಟರು.
* ಬಜೆಟ್ನಲ್ಲಿ ವಿದ್ಯುತ್ ದರ ಏರಿಕೆ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಯಾವ ಸರ್ಕಾರದ ಕೈಯಲ್ಲಿಯೂ ಸಹ ಉಚಿತವಾಗಿ ವಿದ್ಯುತ್ ನೀಡಲು ಸಾಧ್ಯವಿಲ್ಲ.
ಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಆಯವ್ಯಯದ Highlights
* ಅಪ್ಪ-ಮಕ್ಕಳ ಬಜೆಟ್, ಅಣ್ಣ-ತಮ್ಮಂದಿರ ಬಜೆಟ್ ಎಂದು ಆರೋಪಗಳನ್ನು ಮಾಡುವುದು ಸರಿಯಲ್ಲ. ಯಾರಿಗೂ ಕೂಡಾ ಅಧಿಕಾರ ಶಾಶ್ವತವಲ್ಲ ಎಂಬುದನ್ನು ತಿಳಿಯಿರಿ.
* ನಾನು ಯಾವುದೇ ಜಾತಿಯೊಂದರ ಮುಖ್ಯಮಂತ್ರಿಯಲ್ಲ. ವಿಭೂತಿ ಬಳಿದುಕೊಂಡು ಬಂದವರನ್ನೂ ದೂರ ತಳ್ಳಿಲ್ಲ. ಅವರಿಗೂ ಕೆಲಸ ನೀಡಿದ್ದೇನೆ. ಒಕ್ಕಲಿಗರಿಗೆ ಶೇ 34ರಷ್ಟು ಅನುದಾನ ನೀಡಲಾಗಿದೆ ಎಂಬ ಆರೋಪವನ್ನು ಅವರು ತಳ್ಳಿ ಹಾಕಿದರು.
* ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದ ಅಪವಿತ್ರ ಮೈತ್ರಿ ಎಂದು ಆರೋಪಗಳನ್ನು ಮಾಡುತ್ತಿದ್ದೀರಿ. ಅಂದು ಬಿಜೆಪಿ ಮತ್ತು ಜೆಡಿಎಸ್ ಸೇರಿ ಸರ್ಕಾರ ರಚನೆ ಮಾಡಿದಾಗ ಅದು ಅಪವಿತ್ರ ಮೈತ್ರಿ ಎಂದು ಅನ್ನಿಸಲಿಲ್ಲವೇ?
* ಸಾಂದರ್ಭಿಕ ಶಿಶು ಎಂಬ ಮಾತನ್ನು ಕುಮಾರಸ್ವಾಮಿ ಸದನದಲ್ಲಿ ಮತ್ತೊಮ್ಮೆ ಹೇಳಿದರು. ನಾನೊಂದು ಸಾಂದರ್ಭಿಕ ಶಿಶುವಾಗಿದ್ದು, ಕಾಂಗ್ರೆಸ್-ಜೆಡಿಎಸ್ ಶಾಸಕರೇ ನನ್ನ ಅಪ್ಪ-ಅಮ್ಮ ಎಂದರು.
* ರಾಜಕಾರಣದಲ್ಲಿ ಟೀಕೆ, ಜಗಳ ಸಾಮಾನ್ಯ. ಹಿಂದೆ ಯಡಿಯೂರಪ್ಪ ಅವರ ಜೊತೆಗೂ ಜಗಳವಾಗಿತ್ತು. ಆದರೂ ಮೈತ್ರಿ ಸರ್ಕಾರ ರಚನೆ ಮಾಡಲಿಲ್ಲವೇ?. ಮೈತ್ರಿ ಸರ್ಕಾರ ಪತನವಾದಾಗ ಸಹ ಜಗಳ ನಡೆದಿತ್ತು.
* ಹಾಸನಕ್ಕೆ ಹೆಚ್ಚಿನ ಅನುದಾನ ನೀಡಿರುವ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಅವರು, ಹಾಸನದ ಶಾಸಕರು ಯಾವ ಪಕ್ಷದವರು ಎಂದು ಪ್ರಶ್ನಿಸಿದರು. ಹಾಸನದ ಬಿಜೆಪಿ ಶಾಸಕರು ಒಪ್ಪದಿದ್ದರೆ ಆ ಅನುದಾನವನ್ನು ಉತ್ತರ ಕರ್ನಾಟಕ ಭಾಗಕ್ಕೆ ನೀಡಲು ಸಿದ್ಧ ಎಂದರು.
* ನಾನು ಭಯಗ್ರಸ್ತ ಮುಖ್ಯಮಂತ್ರಿಯಲ್ಲ. ರಾಜ್ಯಕ್ಕೆ ಉತ್ತಮವಾದ ಆಡಳಿತ ನೀಡಬೇಕು ಎಂಬ ಉದ್ದೇಶ ನಮ್ಮ ಸರ್ಕಾರಕ್ಕಿದೆ. 104 ಶಾಸಕರ ಬಲವಿದ್ದ ನಿಮಗೆ 113ಕ್ಕೆ ಏರಲು ಬಲವೆಲ್ಲಿತ್ತು? ಎಂದು ಪ್ರಶ್ನಿಸಿದರು.