ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸರ್ಕಾರದ ವೈಫಲ್ಯದಿಂದ ರಾಜ್ಯದಲ್ಲಿ ಕೊರೋನಾಗೆ ಮೊದಲ ಬಲಿ'

|
Google Oneindia Kannada News

ಬೆಂಗಳೂರು, ಮಾ. 14: ಕರೋನಾ ವೈರಸ್ ಗೆ ರಾಜ್ಯದಲ್ಲಿ ಮೊದಲ ಸಾವಾಗಿರುವುದು ದುರದೃಷ್ಟಕರ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕಲಬುರಗಿಯಲ್ಲಿ ವ್ಯಕ್ತಿಯೊಬ್ಬರು ಕೊರೋನಾ ವೈರಸ್ ನಿಂದ ಸಾವನ್ನಪ್ಪಿರುವುದು ದೃಢಪಟ್ಟಿರುವುದರ ಕುರಿತು ವಿಧಾನಸೌಧದಲ್ಲಿ ಮಾತನಾಡಿರುವ ಅವರು, ಸರ್ಕಾರ ತಡವಾಗಿ ಈ ಮಾಹಿತಿ ನೀಡಿದೆ. ಇದು ಆರೋಗ್ಯ ಇಲಾಖೆಯ ವೈಫಲ್ಯ ಎಂದು ಆರೋಪಿಸಿದ್ದಾರೆ. ಇಲಾಖೆ ಸಭೆ ನಡೆಸಿ ನಿಯಂತ್ರಣಕ್ಕೆ ತತ್ಷಣ ಕ್ರಮ ತೆಗೆದುಕೊಳ್ಳಬೇಕು. ಪ್ರತಿದಿನ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲೂ ಕೊರೋನಾ ವೈರಸ್ ಭೀತಿ ಬಗ್ಗೆ ಚರ್ಚೆ

ವಿಧಾನಸಭೆಯಲ್ಲೂ ಕೊರೋನಾ ವೈರಸ್ ಭೀತಿ ಬಗ್ಗೆ ಚರ್ಚೆ

ಇನ್ನು ವಿಧಾನಸಭೆ ಕಲಾಪದಲ್ಲಿಯೂ ಕೊರೋನಾ ವೈರಸ್ ಕುರಿತು ಭೀತಿ ವ್ಯಕ್ತವಾಗಿದೆ. ರಾಜ್ಯದಲ್ಲಿ ಅತ್ಯಂತ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಕೊರೋನಾ ವೈರಸ್ ಕುರಿತು ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಪ್ರಸ್ತಾಪ ಮಾಡಿದ್ದಾರೆ. ಕೊರೋನಾಗೆ ಮೊದಲ ಬಲಿ ನಮ್ಮ ಕಲಬುರಗಿ ಜಿಲ್ಲೆಯಲ್ಲಿಯೇ ಆಗಿರೋದು ದುರದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ.

ಕಲಬುರಗಿ ವೃದ್ಧನಿಗೆ ಕೊರೊನಾ ಬಂದಿದ್ದು ಹೇಗೆ?ಕಲಬುರಗಿ ವೃದ್ಧನಿಗೆ ಕೊರೊನಾ ಬಂದಿದ್ದು ಹೇಗೆ?

ವಿಮಾನ ನಿಲ್ದಾಣದಲ್ಲಿ ಯಾವುದೇ ತಪಾಸಣೆ ಮಾಡಿರಲಿಲ್ಲ

ವಿಮಾನ ನಿಲ್ದಾಣದಲ್ಲಿ ಯಾವುದೇ ತಪಾಸಣೆ ಮಾಡಿರಲಿಲ್ಲ

ಕರೋನಾ ವೈರಸ್ ನಿಂದ ಮೃತಪಟ್ಟ ಖಾಸಿಂ ಮೊಹಮದ್ ಸಿದ್ದಕಿ ಅವರು ಮೂಲತಃ ಕಲಬುರ್ಗಿಯವರು. ಉಮ್ರಾ ತೀರ್ಥ ಯಾತ್ರೆಗೆ ತೆರಳಿದ್ದ ಅವರು ಫೆಬ್ರವರಿ 29ರಂದು ಕಲ್ಬುರ್ಗಿಗೆ ಬಂದಿದ್ದಾರೆ.

ನಂತರ ಅವರನ್ನು ಸಾಕಷ್ಟು ಜನರು ಭೇಟಿಯಾಗಿ ಉಮ್ರಾ ಯಾತ್ರೆಯ ಶುಭಕೋರಿದ್ದಾರೆ. ಮಾರ್ಚ್ 08 ರಂದು ಅವರಿಗೆ ಜ್ವರ ಕಾಣಿಸಿಕೊಂಡಿದೆ. ನಂತರ ಅವರಿಗೆ ಕರೋನಾ ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಅದು ಗೊತ್ತಾದ ನಂತರ ಜಿಲ್ಲಾ ಆರೋಗ್ಯ ಇಲಾಖೆಯವರು ನಿರ್ಲಕ್ಷ್ಯತನ ತೋರಿಸಿದ್ದಾರೆ.

ಐಸೋಲೆಟ್ ಮಾಡದೆ ಹೈದ್ರಾಬಾದ್ ಗೆ ತೆರಳಲು ಬಿಟ್ಟಿದ್ದಾರೆ

ಐಸೋಲೆಟ್ ಮಾಡದೆ ಹೈದ್ರಾಬಾದ್ ಗೆ ತೆರಳಲು ಬಿಟ್ಟಿದ್ದಾರೆ

ಸಿದ್ದಕಿ ಅವರಿಗೆ ರೋಗ ಲಕ್ಷಣಗಳು ಕಂಡು ಬಂದಾಗ ಅವರನ್ನು ಐಸೋಲೆಟ್ ಮಾಡದೆ ಹೈದ್ರಾಬಾದ್ ಗೆ ತೆರಳಲು ಬಿಟ್ಟಿದ್ದಾರೆ.

ಕೊರೊನಾ ಬಗ್ಗೆ ರಾಹುಲ್ ಎಚ್ಚರಿಸಿದ್ದರು, ಮೋದಿ ಸರ್ಕಾರ ನಿರ್ಲಕ್ಷ್ಯ ಮಾಡಿತಾ?ಕೊರೊನಾ ಬಗ್ಗೆ ರಾಹುಲ್ ಎಚ್ಚರಿಸಿದ್ದರು, ಮೋದಿ ಸರ್ಕಾರ ನಿರ್ಲಕ್ಷ್ಯ ಮಾಡಿತಾ?

ಹೈದ್ರಾಬಾದ್ ನಲ್ಲೂ ಅವರು ಐದು ಆಸ್ಪತ್ರೆಗಳಿಗೆ ಎಡತಾಕಿದ್ದಾರೆ. ಐದು ದಿನಗಳಾದ ನಂತರ ಎಚ್ಚೆತ್ತುಕೊಂಡು ಜಿಲ್ಲಾ ವೈದ್ಯಾಧಿಕಾರಿಗಳು ದೂರವಾಣಿ ಕರೆ ಮಾಡಿದ್ದರು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಮೃತದೇಹವನ್ನೂ ಸರಿಯಾಗಿ ನಿರ್ಹಹಣೆ ಮಾಡಿಲ್ಲ

ಮೃತದೇಹವನ್ನೂ ಸರಿಯಾಗಿ ನಿರ್ಹಹಣೆ ಮಾಡಿಲ್ಲ

ಅವರ ಮೃತದೇಹವನ್ನು ತರಬೇಕಾದರೂ ಯಾವುದೇ ಮುಂಜಾಗ್ರತೆ ತೆಗೆದುಕೊಂಡಿಲ್ಲ. ಯಾರು ಬೇಕಾದರೂ ಹೋಗಿ ಅವರ ಪಾರ್ಥೀವ ಶರೀರದ ದರ್ಶನ ಮಾಡಿಕೊಂಡು ಬರಲು ಬಿಟ್ಟಿದ್ದಾರೆ. ಖಾಸಿಂ ಅವರ ಗಂಟಲ ದ್ರವವನ್ನು ಪರೀಕ್ಷೆಗೆ ತೆಗೆದುಕೊಳ್ಳುವ ಸಂದರ್ಭದಲ್ಲೂ ಕಲ್ಬುರ್ಗಿ ಜಿಲ್ಲಾ ಆರೋಗ್ಯಾಧಿಕಾರಿಗಳು ಯಾವುದೇ ಮುಂಜಾಗ್ರತೆ ತೆಗೆದುಕೊಂಡಿಲ್ಲ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಬೆಂಗಳೂರಿಗರಿಗೆ ಆಘಾತಕಾರಿ ಸುದ್ದಿ: ಗೂಗಲ್ RMZ ಕಂಪನಿಯಲ್ಲಿ ಕೊರೊನಾ!ಬೆಂಗಳೂರಿಗರಿಗೆ ಆಘಾತಕಾರಿ ಸುದ್ದಿ: ಗೂಗಲ್ RMZ ಕಂಪನಿಯಲ್ಲಿ ಕೊರೊನಾ!

ಕಲಬುರಗಿಯಲ್ಲಿ ಕೊರೋನಾಗೆ ಔಷಧಿ ಇದೆಯೆಂದು ಬೋರ್ಡ್

ಕಲಬುರಗಿಯಲ್ಲಿ ಕೊರೋನಾಗೆ ಔಷಧಿ ಇದೆಯೆಂದು ಬೋರ್ಡ್

ಮತ್ತೊಂದೆಡೆ ಮೆಡಿಕಲ್ ಶಾಪ್ ಗಳವರು ಕೊರೋನಾ ವೈರಸ್ ಗೆ ಔಷಧಿ ಇದೆ ಎಂದು ಬೋರ್ಡ್ ಹಾಕಿಕೊಂಡು 200-300ರೂ ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಹರಡುತ್ತಿರುವ ಸುದ್ದಿ ನೋಡಿ ಜನ ಆತಂಕಿತರಾಗಿದ್ದಾರೆ. ಇದೆಲ್ಲವನ್ನು ಸರ್ಕಾರ ಗಮನಿಸಿವ ಸೂಕ್ತಕ್ರಮನಕೈಗೊಳ್ಳಬೇಕೆಂದು ಖರ್ಗೆ ಆಗ್ರಹಿಸಿದ್ದಾರೆ.

English summary
Former CM H.D. Kumaraswamy alleges that Corona patient died due to government health department failure. In addition, MLA Priyank Kharge said the coroner's death in the Kalaburagi district had caused anxiety.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X