ಸಂಪುಟ ವಿಸ್ತರಣೆ : ಸಂಪುಟ ಸೇರುವ ಕಾಂಗ್ರೆಸ್ ಶಾಸಕರ ಪಟ್ಟಿ!
ಬೆಂಗಳೂರು, ಆಗಸ್ಟ್ 27 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ನಲ್ಲಿ ಸಚಿವ ಸ್ಥಾನಕ್ಕೆ ಹೆಚ್ಚಿನ ಆಕಾಂಕ್ಷಿಗಳಿದ್ದು, ಸಂಭಾವ್ಯ ಸಚಿವರ ಪಟ್ಟಿ ಸಿದ್ಧವಾಗಿದೆ.
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಬಳಿಕ ಸಂಪುಟ ವಿಸ್ತರಣೆ ಮಾಡಿದ್ದರು. ಕಾಂಗ್ರೆಸ್ನ 14, ಜೆಡಿಎಸ್ನ 9, ಬಿಎಸ್ಪಿ ಮತ್ತು ಕೆಪಿಜೆಪಿಯ ಒಬ್ಬರು ಶಾಸಕರು ಸಂಪುಟ ಸೇರಿದ್ದರು. ಕಾಂಗ್ರೆಸ್ನಿಂದ 6 ಮತ್ತು ಜೆಡಿಎಸ್ನಿಂದ ಒಬ್ಬರು ಸಂಪುಟ ಸೇರಬಹುದಾಗಿದೆ.
ಸಂಪುಟ ವಿಸ್ತರಣೆ ಬಗ್ಗೆ ಮೌನ ಮುರಿದ ಕರ್ನಾಟಕ ಕಾಂಗ್ರೆಸ್ ನಾಯಕರು!
ಸೆಪ್ಟೆಂಬರ್ 15ರ ಬಳಿಕ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ಹಿರಿಯ ನಾಯಕರು ಸಂಪುಟ ಸೇರಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಸದ್ಯ ಸಿದ್ಧವಾಗಿರುವ ಪಟ್ಟಿಯಲ್ಲಿ ಈ ನಾಯಕರ ಹೆಸರು ಇಲ್ಲ.
ಕುಮಾರಸ್ವಾಮಿ ಸಂಪುಟ ವಿಸ್ತರಣೆ ಬಗ್ಗೆ ಹೊಸ ಸುದ್ದಿಯೊಂದು ಹೊರಬಿತ್ತು!
105 ಸ್ಥಳೀಯ ಸಂಸ್ಥೆಗಳ ಚುನಾವಣೆ ಆ.31ಕ್ಕೆ ನಿಗದಿಯಾಗಿದೆ. ಸೆಪ್ಟೆಂಬರ್ 3ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಬಳಿಕ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಸಂಪುಟ ಸೇರುವ ಶಾಸಕರ ಪಟ್ಟಿ ಇಲ್ಲಿದೆ ನೋಡಿ...
ಸಂಪುಟ ಸೇರುವ ಶಾಸಕರ ಪಟ್ಟಿ
*
ಬೀದರ್
ನಗರ
ಕ್ಷೇತ್ರದ
ಶಾಸಕ
ರಹೀಂ
ಖಾನ್
(ಅಲ್ಪಸಂಖ್ಯಾತ)
*
ಕುಷ್ಟಗಿ
ಶಾಸಕ
ಅಮರೇಗೌಡ
ಬಯ್ಯಾಪುರ
(ಲಿಂಗಾಯತ)
*
ಶಹಾಪುರ
ಶರಣ
ಬಸಪ್ಪ
ದರ್ಶನಾಪುರ್
(ಲಿಂಗಾಯತ)
ಬೆಂಗಳೂರು ನಗರದ ಶಾಸಕರು
*
ಕೆಜಿಎಫ್
ಶಾಸಕಿ
ರೂಪಾ
ಶಶಿಧರ್
(ದಲಿತ
-
ಎಡಗೈ)
*
ವಿಜಯನಗರದ
ಶಾಸಕ
ಎಂ.ಕೃಷ್ಣಪ್ಪ
(ಒಕ್ಕಲಿಗ)
*
ಯಶವಂತಪುರ
ಶಾಸಕ
ಎಸ್.ಟಿ.ಸೋಮಶೇಖರ್
(ಒಕ್ಕಲಿಗ)
ಕುಮಾರಸ್ವಾಮಿ ಸಂಪುಟ ಸೇರುವವರು
*
ವಿಧಾನ
ಪರಿಷತ್
ಸದಸ್ಯ
ಆರ್.ಬಿ.ತಿಮ್ಮಾಪುರ
(ದಲಿತ
ಎಡಗೈ)
*
ಕುಂದಗೋಳ
ಶಾಸಕ
ಸಿ.ಎಸ್.ಶಿವಳ್ಳಿ
(ಕುರುಬ)
*
ಹೊಸಕೋಟೆ
ಶಾಸಕ
ಎಂ.ಟಿ.ಬಿ.ನಾಗರಾಜ್
(
ಕುರುಬ)
*
ಸಂಡೂರು
ಶಾಸಕ
ತುಕಾರಾಂ
(ವಾಲ್ಮೀಕಿ)
ಜೆಡಿಎಸ್ನಿಂದ ಯಾರು?
ಆಗಸ್ಟ್ 30 ಅಥವ 31ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಅಂದು ಸಂಪುಟ ವಿಸ್ತರಣೆಯ ದಿನಾಂಕವನ್ನು ಅಂತಿಮಗೊಳಿಸಲಾಗುತ್ತದೆ. ಆದರೆ, ಜೆಡಿಎಸ್ನಿಂದ ಯಾರು ಸಚಿವರಾಗಲಿದ್ದಾರೆ? ಎಂಬುದು ಇನ್ನೂ ಅಂತಿಮವಾಗಿಲ್ಲ.
ಹಿರಿಯ ನಾಯಕರ ಅಸಮಾಧಾನ?
ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ರಾಮಲಿಂಗಾ ರೆಡ್ಡಿ, ಎಚ್.ಕೆ.ಪಾಟೀಲ್ ಅವರು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ಹಿರಿಯ ನಾಯಕರಿಗೆ ಸಚಿವ ಸ್ಥಾನ ನೀಡದಿದ್ದರೆ ಅವರು ಅಸಮಾಧಾನಗೊಳ್ಳುವ ಸಾಧ್ಯತೆ ಇದೆ.
ಕಾಂಗ್ರೆಸ್ನಿಂದ 6 ಶಾಸಕರು ಸಂಪುಟ ಸೇರಬಹುದಾಗಿದೆ. ಯಾರು ಸಂಪುಟ ಸೇರಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.