ರೈತರ ಬಗ್ಗೆ ಮೋದಿಯನ್ನು ಪ್ರಶ್ನಿಸಿದ ಎಚ್.ಡಿ.ದೇವೇಗೌಡ
ಬೆಂಗಳೂರು, ಜನವರಿ 02 : 'ರೈತರು ದೆಹಲಿಯಲ್ಲೇ ಬೀಡು ಬಿಟ್ಟು ಪ್ರತಿಭಟನೆ ನಡೆಸಿದಾಗ ನೀವೇನು ಮಾಡಿದ್ದೀರಿ? ಎಂದು ಒಮ್ಮೆ ನೆನಪಿಸಿಕೊಳ್ಳಿ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಬುಧವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು @H_D_Devegowda ಅಕೌಂಟ್ನಿಂದ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ನಾನೂ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಎಂದ ಮಾಜಿ ಪಿಎಂ ದೇವೇಗೌಡರು
ನರೇಂದ್ರ ಮೋದಿ ಅವರೇ, ನಿಮ್ಮ ತೋರ್ಬೆರಳು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದರೆ ಕಪ್ಪು ಹಣ,ನೋಟು ಅಪನಗದೀಕರಣ, ಗಂಗಾ ನದಿ ಸ್ವಚ್ಛತೆ, ನದಿ ಜೋಡಣೆ, ರಾಮಮಂದಿರ ಇಂತಹ ಅನೇಕ ವಿಚಾರವಾಗಿ ಉಳಿದ ಬೆರಳುಗಳು ನಿಮ್ಮನ್ನೇ ಪ್ರಶ್ನಿಸುತ್ತವೆ ಎಂದು ಹೇಳಿದ್ದಾರೆ.
@narendramodi ಅವರೇ, ನಿಮ್ಮ ತೋರ್ಬೆರಳು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದರೆ ಕಪ್ಪು ಹಣ,ನೋಟು ಅಪನಗದೀಕರಣ,ಗಂಗಾ ನದಿ ಸ್ವಚ್ಛತೆ,ನದಿ ಜೋಡಣೆ,ರಾಮಮಂದಿರ ಇಂತಹ ಅನೇಕ ವಿಚಾರವಾಗಿ ಉಳಿದ ಬೆರಳುಗಳು ನಿಮ್ಮನ್ನೇ ಪ್ರಶ್ನಿಸುತ್ತವೆ.ರೈತರು ದೆಹಲಿಯಲ್ಲೇ ಬೀಡು ಬಿಟ್ಟು ಪ್ರತಿಭಟನೆ ನಡೆಸಿದಾಗ ನೀವೇನು ಮಾಡಿದ್ದೀರಿ ಎಂದು ಒಮ್ಮೆ ನೆನಪಿಸಿಕೊಳ್ಳಿ.
— H D Devegowda (@H_D_Devegowda) January 2, 2019
ರೈತರು ದೆಹಲಿಯಲ್ಲೇ ಬೀಡು ಬಿಟ್ಟು ಪ್ರತಿಭಟನೆ ನಡೆಸಿದಾಗ ನೀವೇನು ಮಾಡಿದ್ದೀರಿ? ಎಂದು ಒಮ್ಮೆ ನೆನಪಿಸಿಕೊಳ್ಳಿ ಎಂದು ದೇವೇಗೌಡರು ಪ್ರಶ್ನೆ ಮಾಡಿದ್ದಾರೆ.
ಬೋಗಿಬಿಲ್ ಸೇತುವೆ ಉದ್ಘಾಟನೆ : ಮೋದಿ ವಿರುದ್ಧ ಗೌಡರ ಗುಡುಗು
ಸಾಲಮನ್ನಾ : ಕರ್ನಾಟಕದ ಸಾಲಮನ್ನಾ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆ ಗಮನಿಸಿದ್ದೇನೆ. ಪ್ರೀತಿಯ ಪ್ರಧಾನಿಗಳೇ 60 ಸಾವಿರಕ್ಕೂ ಅಧಿಕ ರೈತರು ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಪಡೆದಿದ್ದಾರೆ. ನಮ್ಮ ಭರವಸೆಯನ್ನು ಈಡೇರಿಸಲು ನಾವು ಬದ್ಧವಾಗಿದ್ದೇವೆ' ಎಂದು ಹೇಳಿದ್ದಾರೆ.
I have observed taunting statements of @narendramodi on Karnataka's crop loan waiver scheme.
— H D Devegowda (@H_D_Devegowda) January 2, 2019
Dear PM, more than 60,000 farmers have already received money directly into their bank accounts. We are determined to keep our promise to the farmers and are acting on the same lines.