ತಂಬಾಕು ಪದಾರ್ಥಗಳ ಮೇಲೆ ದುಪ್ಪಟ್ಟು ತೆರಿಗೆ ಎತ್ತಿಹಿಡಿದ ಹೈಕೋರ್ಟ್
ಬೆಂಗಳೂರು ಅ.5. ಬೀಡಿ, ಸಿಗರೇಟು ಸೇರಿದಂತೆ ನಾನಾ ಬಗೆಯ ತಂಬಾಕು ಉತ್ಪನ್ನಗಳ ಮೇಲೆ ದುಪ್ಪಟ್ಟು ತೆರಿಗೆ ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಎತ್ತಿಹಿಡಿದೆ.
ತಂಬಾಕು ಆಧರಿಸಿ ಪದಾರ್ಥಗಳ ಮೇಲೆ ಅಬಕಾರಿ ಸುಂಕ ಮತ್ತು ರಾಷ್ಟ್ರೀಯ ವಿಪತ್ತು ಆಕಸ್ಮಿಕ ಸುಂಕ (ಎನ್ಸಿಸಿಡಿ) ವಿಧಿಸಿರುವುದನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.
ಎನ್ಸಿಸಿಡಿ ವಿಧಿಸಿರುವುದನ್ನು ಪ್ರಶ್ನಿಸಿ ಘೋದಾವತ್ ಪ್ಯಾಕರ್ಸ್ ಎಲ್ಎಲ್ಪಿ ಮತ್ತಿತರ ಐವರು ಸಲ್ಲಿಸಿದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರಿದ್ದ ಏಕಸದಸ್ಯಪೀಠ ವಜಾಗೊಳಿಸಿ ಈ ಆದೇಶ ಮಾಡಿದೆ.
ಹೈಕೋರ್ಟ್ ಆದೇಶವೇನು?
ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ವಿಧಿಸುವುದು ಸಾರ್ವಜನಿಕ ನೀತಿಯ ವಿಷಯವಾಗಿದೆ ಮತ್ತು ಆದ್ದರಿಂದ ಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಿಜಿಎಸ್ಟಿಯು ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕವನ್ನು ವಿಧಿಸುವುದನ್ನು ಪರಿಗಣಿಸುತ್ತದೆ, ಜೊತೆಗೆ ಸಿಜಿಎಸ್ಟಿಯ ನಿಬಂಧನೆಗಳ ಅಡಿಯಲ್ಲಿ ತೆರಿಗೆ ವಿಧಿಸಲಾಗುತ್ತದೆ. ಯಾವುದೇ ದೋಷವಿಲ್ಲ. ಹೀಗಾಗಿ ಪ್ರತಿವಾದಿಗಳಾದ ಹಣಕಾಸು ಸಚಿವಾಲಯ ಮತ್ತು ಕೇಂದ್ರ ತೆರಿಗೆ ಆಯುಕ್ತರು - ಸಿಜಿಎಸ್ಟಿ ಮತ್ತು ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕವನ್ನು ವಿಧಿಸಲು ಅರ್ಹರಾಗಿದ್ದಾರೆ ಮತ್ತು ಅಂತಹ ಎಲ್ಲ ಅಧಿಕಾರ ಅವರಿಗಿದೆ ಎಂದು ನ್ಯಾಯಾಲಯವು ತೀರ್ಪು ಮಹತ್ವದ ನೀಡಿದೆ.
ಕೇಂದ್ರ ಸರ್ಕಾರ 2017ರಲ್ಲಿ ಸರಕು ಮತ್ತು ಸೇವಾ ತೆರಿಗೆ ಕಾಯಿದೆ ಜಾರಿಗೊಳಿಸುವ ಮುನ್ನ, ತಂಬಾಕು ಉತ್ಪನ್ನಗಳಿಗೆ ಕೇಂದ್ರ ಅಬಕಾರಿ ಕಾಯ್ದೆ 1944ರಡಿ (ಕೇಂದ್ರ ಅಬಕಾರಿ ಸುಂಕ ಕಾಯ್ದೆ 1985ರೊಂದಿಗೆ ಓದಿ) ನಿಬಂಧನೆಗಳ ಅಡಿಯಲ್ಲಿ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಕೇಂದ್ರೀಯ ಅಬಕಾರಿ ಕಾಯಿದೆಯನ್ನು ರದ್ದುಗೊಳಿಸುವುದರಿಂದ ಅರ್ಜಿದಾರರು ಹಣಕಾಸು ಕಾಯಿದೆಯ ಏಳನೇ ಶೆಡ್ಯೂಲ್ನ ಅಡಿಯಲ್ಲಿ ನಿರ್ಧರಿಸಿದಂತೆ ಎನ್ಸಿಸಿಡಿಯನ್ನು ಪಾವತಿಸುವುದರಿಂದ ಮುಕ್ತಗೊಳಿಸುವುದಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಅಲ್ಲದೆ, ರಾಷ್ಟ್ರೀಯ ವಿಪತ್ತು ಆಕಸ್ಮಿಕ ಸುಂಕ -ಎನ್ಸಿಸಿಡಿ ಒಂದು ಸರ್ಚಾರ್ಜ್ ಮತ್ತು ಅಬಕಾರಿ ಸುಂಕದಿಂದ ಸ್ವತಂತ್ರವಾಗಿ ವಿಧಿಸಬಹುದಾದ ಒಂದು ರೀತಿಯ ಅಬಕಾರಿ ಸುಂಕವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಕೇಂದ್ರೀಯ ಅಬಕಾರಿ ಕಾಯ್ದೆ 1944ರ ನಾಲ್ಕನೇ ಶೆಡ್ಯೂಲ್ನ ನಿಬಂಧನೆಗಳ ಅಡಿಯಲ್ಲಿ ಆಲೋಚಿಸಿದಂತೆ, ಅಬಕಾರಿ ಸುಂಕವನ್ನು ವಿಧಿಸದಿರುವ ಜಾಗದಲ್ಲಿ ಎನ್ಸಿಸಿಡಿಯನ್ನು ವಿಧಿಸುವುದನ್ನು ಕಾನೂನಿನಲ್ಲಿ ಕೆಟ್ಟದ್ದೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.
ಅರ್ಜಿದಾರರ ವಾದವೇನು?
2017ರ ಜುಲೈ 1 ರಿಂದ 2019ರ ಜುಲೈ 6 ರವರೆಗೆ ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲೆ ಯಾವುದೇ ಅಬಕಾರಿ ಸುಂಕವಿರಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಅಲ್ಲದೆ, ಒಂದು ಉತ್ಪನ್ನಗಳ ಮೇಲೆ ಅಬಕಾರಿ ಸುಂಕವನ್ನು ವಿಧಿಸದಿದ್ದಾಗ, ಮತ್ತೆ ಅದೇ ವಸ್ತುಗಳ ಮೇಲೆ ಎನ್ಸಿಸಿಡಿ ವಿಧಿಸಲಾಗುವುದಿಲ್ಲ. ಆದ್ದರಿಂದ ಈ ಅವಧಿಯಲ್ಲಿ ಎನ್ಸಿಸಿಡಿ ವಿಧಿಸಬಾರದು, ಅದನ್ನು ರದ್ದುಗೊಳಿಸಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.