ಸಚಿವ ದೇಶಪಾಂಡೆ ವಿರುದ್ಧ ಲೋಕಾಯುಕ್ತ ತನಿಖೆಗೆ ತಡೆ
ಬೆಂಗಳೂರು, ಮಾ.5 : ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರ ವಿರುದ್ಧ ನಡೆಯುತ್ತಿದ್ದ ಲೋಕಾಯುಕ್ತ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಂಧ್ಯತರ ತಡೆಯಾಜ್ಞೆ ನೀಡಿದೆ. ಐಟಿ ಕಾರಿಡಾರ್ ಯೋಜನೆಯಲ್ಲಿ ಅಕ್ರಮವಾಗಿ ಭೂಮಿ ಪಡೆದಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ತನಿಖೆ ನಡೆಯುತ್ತಿತ್ತು.
ಸಚಿವ
ಆರ್.ವಿ.ದೇಶಪಾಂಡೆ
ಅವರ
ವಿರುದ್ಧ
ತನಿಖೆ
ನಡೆಸುವಂತೆ
ಲೋಕಾಯುಕ್ತ
ವಿಶೇಷ
ನ್ಯಾಯಾಲಯ
ಫೆ.18ರಂದು
ಆದೇಶ
ನೀಡಿತ್ತು.
ಈ
ಆದೇಶ
ದೇಶಪಾಂಡೆ
ಅವರು
ಹೈಕೋರ್ಟ್ನಲ್ಲಿ
ಅರ್ಜಿ
ಸಲ್ಲಿಸಿದ್ದರು.
ಅರ್ಜಿಯ
ವಿಚಾರಣೆ
ನಡೆಸಿದ
ಕೋರ್ಟ್
ಇಂದು
ತನಿಖೆಗೆ
ತಡೆಯಾಜ್ಞೆ
ನೀಡಿದೆ.
[ಸಚಿವ
ದೇಶಪಾಂಡೆ
ವಿರುದ್ಧ
ಲೋಕಾಯುಕ್ತ
ತನಿಖೆ]
ವಾಸುದೇವ ರೆಡ್ಡಿ ಎಂಬುವವರು 2001ರಲ್ಲಿ ಕೈಗಾರಿಕೆ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಅವರು, ಐಟಿ ಕಾರಿಡಾರ್ ಯೋಜನೆಯಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ದೂರಿನ ಅನ್ವಯ ತನಿಖೆ ನಡೆಸುವಂತೆ ಆದೇಶ ನೀಡಲಾಗಿತ್ತು. [ಐಟಿ ಕಾರಿಡಾರ್ ಹಗರಣದ ವಿವರ]
ಏನಿದು ಆರೋಪ : 2001ರಲ್ಲಿ ವರ್ತೂರು ಹೋಬಳಿ ವ್ಯಾಪ್ತಿಯಲ್ಲಿ ಐಟಿ ಕಾರಿಡಾರ್ ನಿರ್ಮಿಸಲು ಸರ್ಕಾರ 500 ಎಕರೆ ಜಮೀನನ್ನು ಸ್ವಾಧೀನಕ್ಕೆ ತೆಗೆದುಕೊಂಡಿತ್ತು. ಆದರೆ, 430 ಎಕರೆ ಉಳಿಸಿಕೊಂಡು ಉಳಿದ 70 ಎಕರೆ ಜಮೀನನ್ನು ಡಿನೋಟಿಫಿಕೇಷನ್ ಮಾಡಲಾಗಿತ್ತು.
ಆಗ ಕೈಗಾರಿಕಾ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಅವರು ಅನೇಕ ಉದ್ಯಮಿಗಳ ಜೊತೆ ಸೇರಿ ಡಿನೋಟಿಫಿಕೇಶನ್ ಮಾಡಿಸಿದ್ದಾರೆ. ಉದ್ಯಮಿಗಳಿಗೆ ನೆರವು ನೀಡಲು ಅಕ್ರಮವಾಗಿ ಡೀನೋಟಿಫಿಕೇಶನ್ ಮಾಡಿಸಿದ್ದಾರೆ ಎಂಬುದು ಆರೋಪವಾಗಿದೆ.