ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಕಿಶೋರ್ ಚಂದ್ರ ನೇಮಕ ಸಾಧ್ಯತೆ
ಬೆಂಗಳೂರು, ಅಕ್ಟೋಬರ್ 12: ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕ ಮತ್ತು ನಿರೀಕ್ಷಕರಾಗಿ (ಡಿಜಿ ಐಜಿಪಿ) ಹಿರಿಯ ಪೊಲೀಸ್ ಅಧಿಕಾರಿ ಎಚ್.ಸಿ ಕಿಶೋರ್ ಚಂದ್ರ ನೇಮಕವಾಗುವ ಸಾಧ್ಯತೆ ಇದೆ.
ಹಾಲಿ ಡಿಜಿಪಿ ರೂಪಕ್ ಕುಮಾರ್ ದತ್ತಾ ಈ ತಿಂಗಳ ಅಂತ್ಯಕ್ಕೆ ನಿವೃತ್ತರಾಗಲಿದ್ದು ಅವರ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಬೇಕಾಗಿದೆ.
ಹಾಲಿ ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಪರ ಸರಕಾರದ ಹೆಚ್ಚಿನ ಸಚಿವರು ಒಲವು ವ್ಯಕ್ತಪಡಿಸಿದ್ದು, ಅವರೇ ಡಿಜಿ-ಐಜಿಪಿಯಾಗಲಿದ್ದಾರೆ ಎನ್ನಲಾಗಿದೆ.
ಡಿಜಿಪಿ ಸ್ಥಾನಕ್ಕೆ ನೀಲಮಣಿ ರಾಜು, ಎಸಿಬಿ ಡಿಜಿಪಿ ಎಂ.ಎನ್ ರೆಡ್ಡಿ ಕೂಡಾ ರೇಸಿನಲ್ಲಿದ್ದರು. ಕೇಂದ್ರ ಸೇವೆಗೆ ತೆರಳುವುದಾಗಿ ನೀಲಮಣಿ ರಾಜು ಮನವಿ ಸಲ್ಲಿಸಿದ್ದಾರೆ.
ಹೀಗಾಗಿ ಡಿಜಿಪಿ ಸ್ಥಾನಕ್ಕೆ ಎಂ.ಎನ್. ರೆಡ್ಡಿ ಮತ್ತು ಕಿಶೋರ್ ಚಂದ್ರ ಸ್ಪರ್ಧೆ ಇದೆ. ಸರಕಾರ ಕಿಶೋರ್ ಚಂದ್ರ ಪರ ಒಲವು ಹೊಂದಿರುವುದರಿಂದ ಅವರೇ ಡಿಜಿಪಿ ಹುದ್ದೆ ಅಲಂಕರಿಸುವುದು ಬಹುತೇಕ ಖಚಿತವಾಗಿದೆ.
ಕಿಶೋರ್ ಚಂದ್ರ ಕರ್ನಾಟಕದವರು ಎನ್ನುವುದು ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.
Comments
English summary
Kishor Chandra may succeed Rupak Kumar Dutta as Director General and Inspector General of Police, Karnataka.