ಲೈಂಗಿಕ ಕಿರುಕುಳ ಕೇಸ್, ರಾಘವೇಶ್ವರಶ್ರೀಗಳಿಗೆ ಮತ್ತೆ ಸಂಕಟ
ಬೆಂಗಳೂರು, ಅ.9: ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಗಳು ಬಂಧನಕ್ಕೆ ವಿಧಿಸಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಬುಧವಾರ ತೆರವುಗೊಳಿಸಿದೆ. ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಬೆದರಿಕೆ ಪ್ರಕರಣದ ಆರೋಪ ಎದುರಿಸುತ್ತಿರುವ ರಾಘವೇಶ್ವರ ಭಾರತಿಗಳ ವಿರುದ್ಧ ಸಿಐಡಿ ತನಿಖೆ ಮುಂದುವರೆಯಲಿ ಎಂದು ಹೈಕೋರ್ಟ್ ನ್ಯಾಯಪೀಠ ಆದೇಶಿಸಿದೆ.
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐಆರ್ ರದ್ದು ಮಾಡಬೇಕು ಹಾಗೂ ತನಿಖೆಗೆ ತಡೆಯಾಜ್ಞೆ ನೀಡಬೇಕು ಎಂದು ರಾಘವೇಶ್ವರ ಶ್ರೀಗಳ ಪರ ವಕೀಲರು ಹೈಕೋರ್ಟಿಗೆ ಅರ್ಜಿ ಹಾಕಿದ್ದರು. ಈ ಅರ್ಜಿ ವಿಚಾರಣೆ ನಡೆದು ಈ ಹಿಂದೆ ಒಂದು ವಾರಗಳ ಕಾಲ ತಡೆಯಾಜ್ಞೆ ನೀಡಲಾಗಿತ್ತು. ಆದರೆ, ಅಂತಿಮ ತೀರ್ಪನ್ನು ಇಂದಿಗೆ ಕಾಯ್ದಿರಿಸಲಾಗಿತ್ತು. ಬುಧವಾರ ವಿಚಾರಣೆ ನಡೆಸಿದ ನ್ಯಾ. ಕೆ.ಎನ್ ಫಣೀಂದ್ರ ಅವರು ಮೇಲ್ಕಂಡ ಆದೇಶ ಹೊರಡಿಸಿದ್ದಾರೆ. [ಸಿಐಡಿ ತನಿಖೆ ಸ್ವಾಗತಿಸಿದ ಶ್ರೀಮಠ]
ರಾಘವೇಂದ್ರ
ಶ್ರೀಗಳ
ಪರ
ವಕೀಲ
ಬಿ.ವಿ.ಆಚಾರ್ಯ
ವಾದ
ಮಂಡಿಸಿದರೆ,
ಅರ್ಜಿದಾರರ
ಪರ
ಎಂ.ಟಿ.ನಾಣಯ್ಯ
ವಾದ
ಮಂಡಿಸಿದ್ದರು.
ಹೈಕೋರ್ಟಿನಲ್ಲಿ
ಅರ್ಜಿ
ವಜಾಗೊಂಡಿದ್ದರಿಂದ
ಸುಪ್ರೀಂಕೋರ್ಟಿಗೆ
ಮೇಲ್ಮನವಿ
ಸಲ್ಲಿಸಬೇಕು.
ಅಲ್ಲಿಯವರೆಗೆ
ಶ್ರೀಗಳ
ವಿರುದ್ದದ
ವಿಚಾರಣೆಗೆ
ತಡೆಯಾಜ್ಞೆ
ನೀಡಬೇಕೆಂದು
ರಾಘವೇಂದ್ರ
ಶ್ರೀಗಳ
ಪರ
ವಕೀಲರು
ಮಾಡಿದ
ಮನವಿಯನ್ನು
ನ್ಯಾಯಾಧೀಶ
ಫಣೀಂದ್ರ
ಅವರು
ತಳ್ಳಿ
ಹಾಕಿದರು.
ಬಂಧನಕ್ಕಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದ್ದ ಹಿನ್ನಡೆ ಪಡೆದ ರಾಘವೇಶ್ವರ ಪರ ವಕೀಲರು ರಾಮಚಂದ್ರಾಪುರ ಮಠದ ಶ್ರೀ ರಾಘವೇಂದ್ರ ಸ್ವಾಮೀಜಿಗಳ ಪರವಾಗಿ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ
ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಆರೋಪ ಸಂಬಂಧ ಪ್ರೇಮಲತಾ ಮತ್ತು ದಿವಾಕರ್ ಶಾಸ್ತ್ರಿ ಎಂಬುವರ ಪರವಾಗಿ ಅವರ ಪುತ್ರಿ ಅಂಶುಮತಿ ಎಂಬುವರು ರಾಘವೇಶ್ವರ ಸ್ವಾಮೀಜಿ ವಿರುದ್ಧ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಗಿರಿನಗರ ಪೊಲೀಸರು ರಾಘವೇಶ್ವರ ಭಾರತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಕೆಕ್ಕಾರು ಮಠಕ್ಕೆ ತೆರಳಿ ಖುದ್ದು ಶ್ರೀಗಳ ಕೈಗೆ ನೋಟಿಸ್ ನೀಡಲಾಗಿತ್ತು. ನಂತರ ಎಫ್ ಐಆರ್ ರದ್ದುಪಡಿಸುವಂತೆ ಕೋರಿ ಸ್ವಾಮೀಜಿ ಹೈಕೋರ್ಟ್ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
ಇನ್ನೊಂದೆಡೆ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಗಳು ನಡೆಸುವ 'ರಾಮಕಥಾ' ಕಾರ್ಯಕ್ರಮಕ್ಕೆ ತೆರಳಬಾರದು ಎಂದು ಕಲಾವಿದರಿಗೆ ಬೆದರಿಕೆ ಹಾಕಿರುವ ಪ್ರಕರಣದ ಆರೋಪಿಗಳಾದ ಗಾಯಕಿ ಪ್ರೇಮಲತಾ ದಿವಾಕರ್ ದಂಪತಿಗೆ ಜಾಮೀನು ಮಂಜೂರಾಗಿರುವುದನ್ನು ಸ್ಮರಿಸಬಹುದು. [ಪೂರ್ಣ ವಿವರ ಇಲ್ಲಿ ಓದಿ]