ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನ ಪರಿಷತ್: ಎಚ್‌. ವಿಶ್ವನಾಥ್ ಸೇರಿ 4 ಸದಸ್ಯರ ನಾಮನಿರ್ದೇಶನ

|
Google Oneindia Kannada News

ಬೆಂಗಳೂರು, ಜು. 22: ವಿಧಾನ ಪರಿಷತ್‌ಗೆ ಐವರು ಸದಸ್ಯರನ್ನು ನಾಮನಿರ್ದೇಶನ ಮಾಡಿ ರಾಜ್ಯಪಾಲರು ಆದೇಶ ಮಾಡಿದ್ದಾರೆ. ಕಲಾ ಕ್ಷೇತ್ರದಿಂದ ಸಿ.ಪಿ. ಯೋಗೇಶ್ವರ್, ಸಾಹಿತ್ಯ ಕ್ಷೇತ್ರದಿಂದ ಎಚ್. ವಿಶ್ವನಾಥ್, ಸಮಾಜಸೇವೆ ಕ್ಷೇತ್ರದಿಂದ ಭಾರತಿ ಶೆಟ್ಟಿ, ವಿಶಿಷ್ಟ ಸೇವಾ ಕ್ಷೇತ್ರದಿಂದ ಶಾಂತಾರಾಂ ಸಿದ್ದಿ ಹಾಗೂ ಶಿಕ್ಷಣ ಕ್ಷೇತ್ರದಿಂದ ಪ್ರೊ. ಸಾಬಣ್ಣ ತಳವಾರ್ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲಾಗಿದೆ.

Recommended Video

ಅಪ್ಪನ ಹಾದಿಯನ್ನೇ ಹಿಡಿದ ಮಗ | Oneindia Kannada

ಇಂದು ಬೆಳಗ್ಗೆಯಷ್ಟೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಪಾಲ ವಜೂಬಾಯಿ ವಾಲಾ ಅವರನ್ನು ಭೇಟಿ ಮಾಡಿದ್ದರು. ರಾಜ್ಯಪಾಲರನ್ನು ಭೇಟಿಮಾಡಿ ಅಭ್ಯರ್ಥಿಗಳ ಪಟ್ಟಿಯನ್ನು ಸಿಎಂ ಯಡಿಯೂರಪ್ಪ ಸಲ್ಲಿಸಿದ್ದರು.

H Vishwanath, CP Yogeshwar and 3 others nominated to legislative council

ವಿಧಾನ ಪರಿಷತ್ ಸದಸ್ಯರಾಗಿ ಯಲ್ಲಾಪುರದ ಶಾಂತಾರಾಮ ಸಿದ್ಧಿ ಅಚ್ಚರಿ ಆಯ್ಕೆವಿಧಾನ ಪರಿಷತ್ ಸದಸ್ಯರಾಗಿ ಯಲ್ಲಾಪುರದ ಶಾಂತಾರಾಮ ಸಿದ್ಧಿ ಅಚ್ಚರಿ ಆಯ್ಕೆ

ಸಿ.ಪಿ. ಯೋಗೇಶ್ವರ್: ಮಾಜಿ ಸಚಿವ, ರಾಮನಗರ ಜಿಲ್ಲೆ, ಒಕ್ಕಲಿಗ ಸಮುದಾಯ-ಕಲೆ ಕ್ಷೇತ್ರ

ಎಚ್. ವಿಶ್ವನಾಥ್: ಮಾಜಿ ಸಚಿವ, ಮೈಸೂರು ಜಿಲ್ಲೆ, ಕುರುಬ ಸಮುದಾಯ- ಸಾಹಿತ್ಯ ಕ್ಷೇತ್ರ

ಭಾರತಿ ಶೆಟ್ಟಿ: ಪರಿಷತ್ ಮಾಜಿ ವಿಧಾನ ಸದಸ್ಯೆ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ, ಶಿವಮೊಗ್ಗ ಜಿಲ್ಲೆ, ಬಂಟ ಸಮುದಾಯ-ಸಮಾಜ ಸೇವೆ ಕ್ಷೇತ್ರ

ಶಾಂತಾರಾಮ ಸಿದ್ದಿ: ಸಂಘ ಪರಿವಾರದ ವನವಾಸಿ ಕಲ್ಯಾಣ ಸಂಘಟನೆಯಲ್ಲಿ ಸಕ್ರೀಯ, ಉತ್ತರ ಕನ್ನಡ ಜಿಲ್ಲೆ, ಬುಡಕಟ್ಟು ಸಮುದಾಯ, ವಿಶಿಷ್ಟ ಸೇವಾ ಕ್ಷೇತ್ರ

ಪ್ರೊ. ಸಾಬಣ್ಣ ತಳವಾರ: ಬೆಳಗಾವಿ ರಾಣಿ ಚೆನ್ನಮ್ಮ ವಿವಿಯಲ್ಲಿ ಪ್ರೊಫೆಸರ್, ಕಲ್ಬುರ್ಗಿ ಜಿಲ್ಲೆ, ಕೋಳಿ ಸಮುದಾಯ-ಶಿಕ್ಷಣ ಕ್ಷೇತ್ರ

English summary
The Governor has nominated five members to the Legislative Council. C.P. Yogeshwar from the art field, H. Vishwanath from literature, Bharathi Shetty from Social Services, Shantaram Siddhi from Specialized Service and Prof. Sabanna Talwar from Education has been nominated for the Legislative Council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X