ಗುರುಪಾದಪ್ಪ ನಾಗಮಾರಪಲ್ಲಿ ಬಿಜೆಪಿಯಿಂದ ಉಚ್ಛಾಟನೆ?
ಬೀದರ್, ಜೂ. 28 : ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧವಾಗಿ ಕೆಲಸ ಮಾಡಿದ್ದ ಬೀದರ್ ಕ್ಷೇತ್ರದ ಬಿಜೆಪಿ ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕೆಂದು ಬೀದರ್ ಬಿಜೆಪಿ ಘಟಕ ರಾಜ್ಯ ಘಟಕಕ್ಕೆ ಶನಿವಾರ ಶಿಫಾರಸು ಮಾಡಿದೆ.
ಶನಿವಾರ
ಬೀದರ್
ನಲ್ಲಿ
ಬಿಜೆಪಿ
ಯುವಮೋರ್ಚಾ
ಕಾರ್ಯಕಾರಿಣಿ
ಸಭೆ
ನಡೆಯುತ್ತಿದ್ದು,
ಬೀದರ್
ಬಿಜೆಪಿ
ಘಟಕ
ಗುರುಪಾದಪ್ಪ
ನಾಗಮಾರಪಲ್ಲಿ
ಮತ್ತು
ಅವರ
ಪುತ್ರ
ಸೂರ್ಯಕಾಂತ
ನಾಗಮಾರಪಲ್ಲಿ,
ಡಿ.ಕೆ.
ಸಿದ್ಧರಾಮ್
ಅವರು
ಪಕ್ಷ
ವಿರೋಧಿ
ಚಟುವಟಿಕೆ
ಹಿನ್ನಲೆಯಲ್ಲಿ
ಪಕ್ಷದಿಂದ
ಉಚ್ಛಾಟನೆ
ಮಾಡಬೇಕು
ಎಂದು
ರಾಜ್ಯಾಧ್ಯಕ್ಷ
ಪ್ರಹ್ಲಾದ್
ಜೋಶಿ
ಅವರಿಗೆ
ಶಿಫಾರಸು
ಮಾಡಿದೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಯುವಮೋರ್ಚಾ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿದ್ದು, ಅದರಲ್ಲಿ ಪಾಲ್ಗೊಂಡಿದ್ದಾರೆ. ಜಿಲ್ಲಾ ಘಟಕ ನೇರವಾಗಿ ಅವರಿಗೆ ಮೂವರು ನಾಯಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕೆಂದು ಮನವಿ ಸಲ್ಲಿಸಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಸೂರ್ಯಕಾಂತ ನಾಗಮಾರಪಲ್ಲಿ ಅವರಿಗೆ ಬೀದರ್ ಕ್ಷೇತ್ರದ ಟಿಕೆಟ್ ನಿರಾಕರಿಸಲಾಗಿತ್ತು. ಪಕ್ಷ ಅಲ್ಲಿ ಭಗವಂತ ಖೂಬಾ ಅವರಿಗೆ ಟಿಕೆಟ್ ನೀಡಿತ್ತು. ಚುನಾವಣೆಯಲ್ಲಿ ಖೂಬಾ ಅವರು ಜಯಗಳಿಸಿದ್ದರು. [ಲೋಕಸಭೆ ಚುನಾವಣೆ ಸೋತವರು, ಗೆದ್ದವರು]
ಸೂರ್ಯಕಾಂತ ನಾಗಮಾರಪಲ್ಲಿ ಅವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಅವರ ಪ್ರಮುಖ ಬೆಂಬಲಿಗರು ಕಾಂಗ್ರೆಸ್ ಅಭ್ಯರ್ಥಿ ಧರಂಸಿಂಗ್ ಅವರ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಜಿಲ್ಲಾ ಘಟಕ ತನ್ನ ಶಿಫಾರಸಿನಲ್ಲಿ ವಿವರಣೆಯನ್ನು ನೀಡಿದೆ. ಆದರೆ, ಪ್ರಹ್ಲಾದ್ ಜೋಶಿ ಅವರು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಟ್ಟಾಬೆಂಬಲಿಗರಾದ ಗುರುಪಾದಪ್ಪ ನಾಗಮಾರಪಲ್ಲಿ ಅವರು, ಯಡಿಯೂರಪ್ಪ ಜೊತೆ ಬಿಜೆಪಿ ಮರಳಿದ್ದರು. ಆಗ ಅವರು ತಮ್ಮ ಪುತ್ರನಿಗೆ ಬೀದರ್ ಕ್ಷೇತ್ರದ ಟಿಕೇಟ್ ನೀಡುವ ಕುರಿತು ಭರವಸೆ ಪಡೆದಿದ್ದರು. ಆದರೆ, ನಂತರ ನಡೆದ ವಿದ್ಯಾಮಾನಗಳಿಂದ ಸೂರ್ಯಕಾಂತ ನಾಗಮಾರಪಲ್ಲಿಗೆ ಟಿಕೆಟ್ ಕೈತಪ್ಪಿತ್ತು.