ಬೀದರ್ನಲ್ಲಿ ಬುಧವಾರ ಗುರುಪಾದಪ್ಪ ನಾಗಮಾರಪಲ್ಲಿ ಅಂತ್ಯಕ್ರಿಯೆ
ಬೀದರ್, ನವೆಂಬರ್ 17 : ಬೀದರ್ ಕ್ಷೇತ್ರದ ಕೆಜೆಪಿ ಶಾಸಕ ಮತ್ತು ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ಅವರ ಅಂತ್ಯಕ್ರಿಯೆ ಬೀದರ್ನಲ್ಲಿ ಬುಧವಾರ ಬೆಳಗ್ಗೆ ನಡೆಯಲಿದೆ. ಹೃದಯಾಘಾತದಿಂದಾಗಿ ಮಂಗಳವಾರ ಮುಂಜಾನೆ ಬೆಂಗಳೂರಿನಲ್ಲಿ ಗುರುಪಾದಪ್ಪ ನಾಗಮಾರಪಲ್ಲಿ ಮೃತಪಟ್ಟಿದ್ದಾರೆ.
ಬೀದರ್ನಲ್ಲಿ
ಮಾತನಾಡಿದ
ಗುರುಪಾದಪ್ಪ
ನಾಗಮಾರಪಲ್ಲಿ
ಅವರ
ಪುತ್ರ
ಉಮಾಕಾಂತ್
ನಾಗಮಾರಪಲ್ಲಿ
ಅವರು
ಅಂತ್ಯ
ಸಂಸ್ಕಾರದ
ಕುರಿತು
ಮಾಹಿತಿ
ನೀಡಿದ್ದಾರೆ.
'ಬುಧವಾರ
ಬೆಳಗ್ಗೆ
ಬೀದರ್
ಜಿಲ್ಲೆಯ
ಔರಾದ್
ತಾಲೂಕಿನ
ಚಿಂತಾಕಿ
ಗ್ರಾಮದಲ್ಲಿ
ಅಂತ್ಯಸಂಸ್ಕಾರ
ನಡೆಯಲಿದೆ'
ಎಂದು
ತಿಳಿಸಿದ್ದಾರೆ.
[ನಾಗಮಾರಪಲ್ಲಿ
ಸಾವಿಗೆ
ಕಂಬನಿ
ಮಿಡಿದ
ಗಣ್ಯರು]
'ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಗುರುಪಾದಪ್ಪ ನಾಗಮಾರಪಲ್ಲಿ ಅವರ ಮೃತದೇಹವನ್ನು ಬೀದರ್ಗೆ ತರಲಾಗುತ್ತದೆ. ಡಿಸಿಸಿ ಬ್ಯಾಂಕ್ ಆವರಣದಲ್ಲಿ ರಾತ್ರಿಯ ತನಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಂಜೆ ಮೃತದೇಹವನ್ನು ಔರಾದ್ಗೆ ತೆಗೆದುಕೊಂಡು ಹೋಗಲಾಗುತ್ತದೆ' ಎಂದು ಹೇಳಿದ್ದಾರೆ. [ನಾಗಮಾರಪಲ್ಲಿ ಪರಿಚಯ ಓದಿ]
ಅಂತಿಮ ನಮನ ಸಲ್ಲಿಸಿದ ಸಿದ್ದರಾಮಯ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿ ಗುರುಪಾದಪ್ಪ ನಾಗಮಾರಪಲ್ಲಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿದರು.
ನವೆಂಬರ್ 11 ರಂದು ಬೀದರ್ನಲ್ಲಿ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ 74 ನೇ ಹುಟ್ಟು ಹಬ್ಬವನ್ನು ಅತ್ಯಂತ ಅದ್ದೂರಿಯಿಂದ ಆಚರಿಸಿಕೊಂಡ ಗುರುಪಾದಪ್ಪ ನಾಗಮಾರಪಲ್ಲಿ ಅವರು ಐದು ದಿನಗಳ ನಂತರ ನಮ್ಮೊಂದಿಗಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಅವರ ಅಗಲಿಕೆಯಿಂದ ಉಂಟಾದ ದುಃಖವನ್ನು ಭರಿಸಲು ಶಕ್ತಿಯನ್ನು ದೇವರು ನೀಡಲಿ ಎಂದು ಸಿದ್ದರಾಮಯ್ಯ ಪ್ರಾರ್ಥಿಸಿದರು.