ಅಕ್ರಮ-ಸಕ್ರಮ ವಿಧೇಯಕ, ರಾಜ್ಯಪಾಲರ ಒಪ್ಪಿಗೆ
ಬೆಂಗಳೂರು, ಫೆ.6 : ರಾಜ್ಯದಲ್ಲಿ ಮತ್ತೊಮ್ಮೆ ಅಕ್ರಮ-ಸಕ್ರಮ ಯೋಜನೆ ಜಾರಿಗೆ ಬರಲಿದೆ. 20*30 ಅಳತೆಯ ನಿವೇಶನದಲ್ಲಿ ಕಟ್ಟಿದ ವಾಸಯೋಗ್ಯ ಮನೆಗಳನ್ನು ಸಕ್ರಮಗೊಳಿಸಲು ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಉಭಯ ಸದನಗಳು ವಿಧೇಯಕಕ್ಕೆ ಅನುಮೋದನೆ ನೀಡಿ, ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಟ್ಟಿದ್ದವು.
ಈ
ಅಕ್ರಮ
ಸಕ್ರಮ
ಯೋಜನೆಯಡಿ
ಬಿಬಿಎಂಪಿ,
ಪಾಲಿಕೆ,
ನಗರಸಭೆ,
ಪುರಸಭೆ
ವ್ಯಾಪ್ತಿಯ
ಕಂದಾಯ
ಭೂಮಿಯಲ್ಲಿ
ಗರಿಷ್ಠ
20*30
ಅಳತೆಯ
ನಿವೇಶನದಲ್ಲಿ
ಕಟ್ಟಿದ
ವಾಸಯೋಗ್ಯ
ಮನೆಗಳನ್ನು
ಸಕ್ರಮಗೊಳಿಸಲು
ಅವಕಾಶ
ಕಲ್ಪಿಸಲಾಗುತ್ತದೆ.
ಗುರುವಾರ
ಇದಕ್ಕೆ
ರಾಜ್ಯಪಾಲರು
ಒಪ್ಪಿಗೆ
ನೀಡಿದ್ದಾರೆ.
[ಸಿದ್ಧವಾಗುತ್ತಿದೆ
ಅಕ್ರಮ-ಸಕ್ರಮ
ಮಾರ್ಗಸೂಚಿ]
ಕೆಲವು ದಿನಗಳ ಹಿಂದೆ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಅತಿ ಚಿಕ್ಕ ಪ್ರದೇಶದಲ್ಲಿ ಬಡವರು ವಾಸಕ್ಕಾಗಿ ಕಟ್ಟಿಕೊಂಡಿರುವ ಮನೆಗಳನ್ನು ಸಕ್ರಮ ಮಾಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು. [ಅಕ್ರಮ - ಸಕ್ರಮ ಎಂದರೇನು? ನಿಮಗಿದು ತಿಳಿದಿರಲಿ]
ಕಾಲಮಿತಿ ನಿಗದಿ : ಈ ಅಕ್ರಮ-ಸಕ್ರಮ ಯೋಜನೆಗೆ ಕಾಲಮತಿ ನಿಗದಿಪಡಿಸಲಾಗುತ್ತದೆ. 2012ರ ಜ.1ಕ್ಕಿಂತ ಮೊದಲು 20*30 ಅಳತೆಯ ನಿವೇಶನದಲ್ಲಿ ಮನೆ ಕಟ್ಟಿದ್ದರೆ ಮಾತ್ರ ಸಕ್ರಮ ಮಾಡಲಾಗುತ್ತದೆ. ಕಂದಾಯ ಭೂಮಿಯಲ್ಲಿ ಕಟ್ಟಿರುವ ಮನೆಗಳಿಗೆ ಮಾತ್ರ ಇದು ಅನ್ವಯವಾಗಲಿದೆ.
ಸರ್ಕಾರ ಕೆರೆ, ರಾಜಕಾಲುವೆ, ಪಾರ್ಕ್ ನಿರ್ಮಿಸಲು ಮೀಸಲಾಗಿಟ್ಟ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದರೆ ಸಕ್ರಮಗೊಳಿಸುವುದಿಲ್ಲ.ಈ ಕುರಿತು ಸರ್ಕಾರ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ನಗರಸಭೆ, ಪುರಸಭೆ, ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಯೋಜನೆ ಜಾರಿಗೊಳಿಸಲು ವಿಸ್ತೀರ್ಣವನ್ನು ನಿಗದಿಗೊಳಿಸಲಾಗುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 18 ಕಿ.ಮೀ. ವಿಸ್ತೀರ್ಣದೊಳಗೆ ಮನೆಗಳನ್ನು ಸಕ್ರಮ ಮಾಡಲಾಗುತ್ತದೆ.