ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲು ರಾಜ್ಯಪಾಲರ ಸೂಚನೆ
ಬೆಂಗಳೂರು, ಏಪ್ರಿಲ್ 20: ರಾಜ್ಯದಲ್ಲಿ ಕೊರೊನಾ ಸೋಂಕಿನ ಪರಿಸ್ಥಿತಿ ಕುರಿತು ಅವಲೋಕನ ಹಾಗೂ ಚರ್ಚೆಗೆ ರಾಜ್ಯಪಾಲ ವಜುಭಾಯಿ ವಾಲಾ ಅವರ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷಗಳ ಸಭೆ ನಡೆದಿದ್ದು, ಕೊರೊನಾ ನಿಯಂತ್ರಣಕ್ಕೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ರೋಗಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವಂತೆ ತಿಳಿಸಿದರು. ಜನರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುವುದರೊಂದಿಗೆ ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳೊಂದಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಶ್ರೀಮಂತ ರಾಜ್ಯ ಎನಿಸಿಕೊಳ್ಳುವುದಕ್ಕಿಂತ ಕರ್ನಾಟಕ ಆರೋಗ್ಯಪೂರ್ಣ ರಾಜ್ಯವಾಗಬೇಕು ಎಂದು ಹೇಳಿದ್ದಾರೆ. ಮುಂದೆ ಓದಿ...
ಸರ್ವ ಪಕ್ಷಗಳ ಸಭೆ; ರಾಜ್ಯದಲ್ಲಿ ಲಾಕ್ ಡೌನ್ ಅನಿವಾರ್ಯ
"ಎಲ್ಲರ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಿದ್ದೇವೆ"
ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಇಂದಿನ ಸಭೆಯಲ್ಲಿ ರಾಜ್ಯಪಾಲರು ಹಾಗೂ ಎಲ್ಲ ಮುಖಂಡರ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಲೋಪದೋಷಗಳ ನಿವಾರಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ ಯಡಿರಯೂರಪ್ಪನವರು, ರಾಜ್ಯದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ, ಔಷಧಿ, ವೆಂಟಿಲೇಟರುಗಳು, ಐಸಿಯು ಒದಗಿಸಲು ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದರು.
"ಎಲ್ಲಾ ಕಡೆ ಆಕ್ಸಿಜನೇಟೆಡ್ ಹಾಸಿಗೆಗಳ ಸಂಖ್ಯೆಯಲ್ಲಿ ಹೆಚ್ಚಳ"
ಕಳೆದ ಒಂದು ವರ್ಷದಲ್ಲಿ ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆ ಶೇ. 12ರಷ್ಟು ಹೆಚ್ಚಿದ್ದರೆ, ಆಕ್ಸಿಜನೇಟೆಡ್ ಹಾಸಿಗೆಗಳ ಸಂಖ್ಯೆ 29667ಕ್ಕೆ ಗಣನೀಯವಾಗಿ ಹೆಚ್ಚಳವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಒದಗಿಸುವಂತೆ ಆದೇಶ ಹೊರಡಿಸಲಾಗಿದೆ. ರೆಮ್ ಡಿಸಿವಿರ್ ಇಂಜೆಕ್ಷನ್ ಕೊರತೆಯೂ ಇಲ್ಲ ಎಂದು ತಿಳಿಸಿದರು.
ಅಭಿಪ್ರಾಯ ವ್ಯಕ್ತಪಡಿಸಿದ ಪ್ರಮುಖರು
ವಿಧಾನ ಪರಿಷತ್ತಿನ ಸದಸ್ಯ ಬಸವರಾಜ ಹೊರಟ್ಟಿ ಅವರು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಕಡ್ಡಾಯವಾಗಿ ನಡೆಸಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಜನಪ್ರತಿನಿಧಿಗಳು ಪಾಲಿಸಿ, ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಜನಪ್ರತಿನಿಧಿಗಳು ಹಾಗೂ ನಾಗರಿಕರು ಜವಾಬ್ದಾರಿಯುತ ನಡವಳಿಕೆ ಪ್ರದರ್ಶಿಸಬೇಕು. ಆಯುಷ್ ಇಲಾಖೆಯ ಸಲಹೆಯಂತೆ ಮುನ್ನೆಚ್ಚರಿಕೆಯ ಕ್ರಮ ವಹಿಸಬೇಕು ಎಂದು ತಿಳಿಸಿದರು.
ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಜಾರಿಗೆ ತರುವಂತೆ ಸಲಹೆ
ಸಭೆಯಲ್ಲಿ
ಮಾತನಾಡಿದ
ವಿರೋಧ
ಪಕ್ಷದ
ಮುಖಂಡ
ಸಿದ್ದರಾಮಯ್ಯ,
ಎಸ್.ಆರ್.
ಪಾಟೀಲ,
ಡಿ.ಕೆ.
ಶಿವಕುಮಾರ್,
ಎಚ್.ಡಿ.
ಕುಮಾರಸ್ವಾಮಿ,
ಎಚ್.ಕೆ.
ಕುಮಾರಸ್ವಾಮಿ,
ಎಚ್.ಡಿ.
ರೇವಣ್ಣ,
ರಾಜ್ಯ
ಬಿಜೆಪಿ
ಅಧ್ಯಕ್ಷ
ನಳಿನ್
ಕುಮಾರ್
ಕಟೀಲ್
ಮೊದಲಾದವರು
ತಾಂತ್ರಿಕ
ಸಲಹಾ
ಸಮಿತಿಯ
ಶಿಫಾರಸುಗಳನ್ನು
ಜಾರಿಗೆ
ತರುವಂತೆ
ಸಲಹೆ
ನೀಡಿದರು.
ಜೊತೆಗೆ
ಆಸ್ಪತ್ರೆಗಳಲ್ಲಿ
ಜನಸಾಮಾನ್ಯರಿಗೆ
ಚಿಕಿತ್ಸಾ
ಸೌಲಭ್ಯ
ಸುಲಭವಾಗಿ
ದೊರೆಯುವ
ವ್ಯವಸ್ಥೆ
ರೂಪಿಸುವಂತೆ
ಹಾಗೂ
ಚಿಕಿತ್ಸೆ
ನಿರಾಕರಿಸುವ
ಆಸ್ಪತ್ರೆಗಳ
ವಿರುದ್ಧ
ಕ್ರಮ
ಕೈಗೊಳ್ಳುವಂತೆ
ಆಗ್ರಹಿಸಿದರು.
ಔಷಧ
ಲಭ್ಯತೆ,
ಆಕ್ಸಿಜನ್,
ವೆಂಟಿಲೇಟರ್ಗಳ
ಸೌಲಭ್ಯವನ್ನು
ಹೆಚ್ಚಾಗಿ
ಒದಗಿಸುವಂತೆ
ಸಲಹೆ
ನೀಡಿದರು.
ಖಾಸಗಿ
ಆಸ್ಪತ್ರೆಗಳ
ಬಿಲ್
ಪಾವತಿಗೆ
ಏಕರೂಪದ
ಮಾರ್ಗಸೂಚಿ
ಹೊರಡಿಸುವಂತೆ
ಸಲಹೆ
ನೀಡಿದರು.
ಸಭೆಯ
ಪ್ರಾರಂಭದಲ್ಲಿ
ಆರೋಗ್ಯ
ಸಚಿವ
ಡಾ.
ಕೆ.
ಸುಧಾಕರ್
ಅವರು
ಕೋವಿಡ್
ನಿರ್ವಹಣೆಗಾಗಿ
ರಾಜ್ಯದಲ್ಲಿ
ಕೈಗೊಂಡಿರುವ
ಕ್ರಮಗಳ
ಕುರಿತು
ಪ್ರಾತ್ಯಕ್ಷಿಕೆ
ನೀಡಿದರು.
Recommended Video