ಬುಡಕಟ್ಟು ಜನರಿಗೆ ಸರ್ಕಾರದಿಂದ ಪಡಿತರ ಹಂಚಿಕೆ
ಬೆಂಗಳೂರು, ಅ.7 : ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಗಿರಿಜನರು ಹಾಗೂ ಬುಡಕಟ್ಟು ಜನರಿಗೆ ಮಳೆಗಾಲ ಸೇರಿದಂತೆ ವರ್ಷದ ಆರು ತಿಂಗಳು ಪೌಷ್ಠಿಕ ಆಹಾರ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. 30 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಚಾಮರಾಜ ನಗರ ಜಿಲ್ಲೆಗಳ ಗಿರಿಜನರು ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.
ವಿಧಾನಸೌಧದಲ್ಲಿ
ಸೋಮವಾರ
ಪತ್ರಿಕಾಗೋಷ್ಠಿ
ನಡೆಸಿದ
ಸಮಾಜ
ಕಲ್ಯಾಣ
ಸಚಿವ
ಎಚ್.ಆಂಜನೇಯ
ಅವರು,
ಈ
ಯೋಜನೆಗಾಗಿ
30
ಕೋಟಿ
ರೂ.ವೆಚ್ಚ
ಮಾಡಲಾಗುತ್ತಿದೆ
ಎಂದು
ಹೇಳಿದರು.
ಅರಣ್ಯ
ಪ್ರದೇಶಗಳಲ್ಲಿ
ತೀವ್ರ
ಮಳೆಗಾಲ
ಸೇರಿದಂತೆ
ವರ್ಷದ
ಆರು
ತಿಂಗಳು
ಆಹಾರದ
ಕೊರತೆ
ನಿರ್ಮಾಣವಾಗುತ್ತದೆ.
ಆದ್ದರಿಂದ
ಈ
ಸಂದರ್ಭದಲ್ಲಿ
ಪೌಷ್ಠಿಕ
ಆಹಾರ
ನೀಡಲು
ಯೋಜನೆ
ಜಾರಿಗೊಳಿಸಲಾಗಿದೆ
ಎಂದರು.
ಈ ಯೋಜನೆಯ ಅನ್ವಯ ಅರಣ್ಯವಾಸಿಗಳಿಗೆ ಪ್ರತಿ ತಿಂಗಳು 30 ಕೆ.ಜಿ. ಅಕ್ಕಿ, 2 ಲೀಟರ್ ಎಣ್ಣೆ, 2 ಕೆ.ಜಿ. ಬೇಳೆ, 5 ಕೆ.ಜಿ. ಸಕ್ಕರೆ ವಿತರಣೆ ಮಾಡಲಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಚಾಮರಾಜ ನಗರ ಜಿಲ್ಲೆಗಳ ಗಿರಿಜನರು ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಇವುಗಳಲ್ಲದೇ ಅರಣ್ಯದಲ್ಲಿ ವಾಸಿಸುತ್ತಿರುವ ಹಾಗೂ ನಾಗರಿಕ ಬದುಕಿನಿಂದ ದೂರವಿರುವ ಈ ಜನರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಸಂಕಲ್ಪವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಸಚಿವರು ತಿಳಿಸಿದರು.
ವಿದ್ಯಾರ್ಥಿ ನಿಲಯ ಸ್ಥಾಪನೆ : ಪರಿಶಿಷ್ಟ ಪಂಗಡದವರ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಈ ವರ್ಷ 4515 ಕೋಟಿ ರೂ. ಮೀಸಲಿಡಲಾಗಿದೆ. ಪಂಗಡದ ವಿದ್ಯಾರ್ಥಿಗಳಿಗೆ 28 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಹಾಗೂ 4 ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಆರಂಭಿಸಲಾಗುವುದು ಎಂದು ಸಚಿವ ಆಂಜನೇಯ ಅವರು ಹೇಳಿದರು.