ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವರುಣದೇವನ ಕೃಪೆ ಆಶಿಸಿ ಸರ್ಕಾರದಿಂದ ಪರ್ಜನ್ಯ ಜಪ-ತಪ
ಬೆಂಗಳೂರು, ಜೂನ್ 1:ರಾಜ್ಯಾದ್ಯಂತ ಭೀಕರ ಬರ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೂ ತೀವ್ರ ಸಮಸ್ಯೆ ನಿರ್ಮಾಣವಾಗಿದೆ.
ಜಾನುವಾರು ಅಥವಾ ಇತರೆ ಪ್ರಾಣಿಗಳಿಗೂ ಕುಡಿಯಲು ನೀರು ಸಿಗುತ್ತಿಲ್ಲ, ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ದೇವಸ್ಥಾನಗಳಲ್ಲೂ ಪರ್ಜನ್ಯ ಮಾಡಿಸಲು ಸೂಚಿಸಲಾಗಿದೆ. ಆದರೆ ಪರ್ಜನ್ಯವು ಆರ್ಥಿಕವಾಗಿ ಸದೃಢವಾಗಿರುವ ದೇವಸ್ಥಾನಗಳಿಗೆ ಸೀಮಿತಗೊಳಿಸಿ ಆದೇಶಿಸಲಾಗಿದೆ.
ಪರ್ಜನ್ಯ ಜಪಕ್ಕೆ ಗರಿಷ್ಠ 10,001ರೂ ಖರ್ಚು ಮಾಡಬಹುದಾಗಿದೆ. ಮಳೆಗೆ ಆಗ್ರಹಿಸಿ ಪರ್ಜನ್ಯ ನಡೆಸುವುದು ಮೊದಲಿಂದಲೂ ಬಂದಿರುವ ರೂಢಿಯಾಗಿದೆ.
ಈ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಸೇರಿದ ಪ್ರಮುಖ ದೇವಾಲಯಗಳಲ್ಲಿ ಪರ್ಜನ್ಯ ಜಪ ಹಾಗೂ ವಿಶೇಷ ಪೂಜೆಗಳನ್ನು ನಡೆಸಲು ನಿರ್ದೇಶನ ನೀಡಲಾಗಿದೆ.
ಕರ್ನಾಟಕದಲ್ಲಿ ಮಳೆಯ ವಿಳಂಬದ ಅಭಾವದಿಂದ ಅತ್ಯಂತ ಬರ ಪರಿಸ್ಥಿತಿ ಇರುವ ಕಾರಣ ವರುಣ ದೇವನ ಕೃಪೆಗಾಗಿ ದೇವಾಲಯಗಳಲ್ಲಿ ಅಭಿಷೇಕ, ಪರ್ಜನ್ಯ ಜಪ, ಹೋಮದೊಂದಿಗೆ ಜೂನ್ 6ರಂದು ಬ್ರಾಹ್ಮೀ ಮುಹೂರ್ತದಲ್ಲಿ ಆರಂಭಿಸಲು ಸೂಚನೆ ನೀಡಲಾಗಿದೆ.
Comments
English summary
Government orders to perform Parjanya in Mujarayi temples across the state, to come out from drought and for praying rains.this order has been issued.