ಉತ್ತರ ಕರ್ನಾಟಕದಲ್ಲಿ ಮೋಡ ಬಿತ್ತನೆ, ಕೃತಕ ಮಳೆ?
ಬೆಂಗಳೂರು, ಜು.25: ಮುಂಗಾರು ಮಳೆ ಕೊರತೆ ಅನುಭವಿಸುತ್ತಿರುವ ಉತ್ತರ ಕರ್ನಾಟಕ ಭಾಗದಲ್ಲಿ ಮೋಡ ಬಿತ್ತನೆ ಮೂಲಕ ಕೃತಕ ಮಳೆ ತರಿಸುವ ಬಗ್ಗೆ ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ವಿಧಾನಸಭೆ ಕಲಾಪದ ಶೂನ್ಯವೇಳೆಯಲ್ಲಿ ಜೆಡಿಎಸ್ ಸದಸ್ಯ ಎನ್.ಎಚ್.ಕೋನರೆಡ್ಡಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಮೋಡ ಬಿತ್ತನೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿನ ಬರ, ಪ್ರವಾಹ ಪರಿಸ್ಥಿತಿ ಹಾಗೂ ಇತರೆ ನೈಸರ್ಗಿಕ ವಿಪತ್ತುಗಳಿಂದ ಉದ್ಭವಿಸಬಹುದಾದ ಪರಿಸ್ಥಿತಿಯನ್ನು ಪರಾಮರ್ಶಿಸಲು ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿಯು ಮುಂದಿನ ವಾರ ಸಭೆ ಸೇರಲಿದ್ದು, ಅಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ತಜ್ಞರ
ತಂಡ
ಬೇಕು:
ಮೋಡ
ಬಿತ್ತನೆ
ಮಾಡುವಂಥ
ಸಲಕರಣೆಗಳು
ನಮ್ಮ
ದೇಶದಲ್ಲಿ
ಇಲ್ಲ.
ಒಂದು
ವೇಳೆ
ಇಲ್ಲೆ
ಲಭ್ಯವಾದರೆ
ತ್ವರಿತವಾಗಿ
ಕ್ರಮ
ಕೈಗೊಳ್ಳಬಹುದು.
ವಿದೇಶದಲ್ಲಿದ್ದರೆ
ಸ್ವಲ್ಪ
ಕಾಲಾವಕಾಶ
ಬೇಕಾಗುತ್ತದೆ.
ಈ
ಸಂಬಂಧ
ಸಚಿವ
ಸಂಪುಟ
ಉಪ
ಸಮಿತಿಯಲ್ಲಿ
ಚರ್ಚೆ
ಮಾಡಲಾಗುವುದು
ಎಂದರು.
ರಾಜ್ಯದಲ್ಲಿ ಜೂ.1ರಿಂದ ಜು.23ರವರೆಗೆ ವಾಡಿಕೆ ಮಳೆ 405.10 ಮಿ.ಮೀ, ಪ್ರತಿಯಾಗಿ 315.61 ಮಿ.ಮೀ.ಯಷ್ಟಾಗಿದ್ದು, ಶೇ.22ರಷ್ಟು ಸಾಮಾನ್ಯಕ್ಕಿಂತ ಕಡಿಮೆ ಆಗಿದೆ. ಮುಖ್ಯವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣವು ಸಾಮಾನ್ಯಕ್ಕಿಂತ ಶೇ.41ರಷ್ಟು ಕಡಿಮೆಯಾಗಿದೆ ಎಂದು ಅವರು ಹೇಳಿದರು.
ಆಹಾರ ಸಂಸ್ಕರಣಾ ಘಟಕಗಳಿಗೆ ನೋಟಿಸ್: ರಾಜ್ಯದಲ್ಲಿ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಭೂಮಿ ಪಡೆದು ಅದನ್ನು ಅನ್ಯ ಉದ್ದೇಶಗಳಿಗಾಗಿ ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ನಾಲ್ಕು ಕಂಪೆನಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ಮಾಲೂರಿನಲ್ಲಿ 87 ಎಕರೆ ಪ್ರದೇಶದಲ್ಲಿರುವ ಇನೋವಾ ಅಗ್ರಿ ಪಾರ್ಕ್, ಹಿರಿಯೂರಿನಲ್ಲಿ- 106 ಎಕರೆ ಪ್ರದೇಶದಲ್ಲಿ ಅಕ್ಷಯ ಫುಡ್ ಪಾರ್ಕ್, ಬಾಗಲಕೋಟೆಯಲ್ಲಿ -100 ಎಕರೆಯಲ್ಲಿ ಗ್ರೀನ್ ಫುಡ್ ಪಾರ್ಕ್ ಹಾಗೂ ಜೇವರ್ಗಿ ಯಲ್ಲಿ-105 ಎಕರೆ ಜೇವರ್ಗಿ ಫುಡ್ ಪಾರ್ಕ್ ಗಳಿಗೆ ನೋಟಿಸ್ ಜಾರಿಯಾಗಿದೆ.
ರಾಜ್ಯದಲ್ಲಿ 22 ಕೃಷಿ ಹೊಂಡ ನಿರ್ಮಾಣದ ಗುರಿ ಹೊಂದಿ ದ್ದು, ಆ ಪೈಕಿ 14,796 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ. ಈ ಕಾರ್ಯಕ್ಕೆ 38.58 ಕೋಟಿ ರೂ.ಗಳ ನ್ನು ವೆಚ್ಚ ಮಾಡಲಾಗಿದೆ ಎಂದು ಜೆಡಿಎಸ್ ಚಲುವರಾಯ ಸ್ವಾಮಿ ಕೇಳಿದ ಪ್ರಶ್ನೆಗೆ ಕೃಷ್ಣ ಭೈರೇಗೌಡ ಉತ್ತರ ನೀಡಿದರು.