ದುಧನಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು, ಹಲವು ರೈಲು ಸಂಚಾರ ಬದಲಾವಣೆ
ಸೊಲ್ಲಾಪುರ, ಮೇ 01 : ನೈರುತ್ಯ ರೈಲ್ವೆ ಸೊಲ್ಲಾಪುರ ವಿಭಾಗದಲ್ಲಿ ದುಧನಿ-ಕುಳಲಿ ಗೂಡ್ಸ್ ರೈಲಿನ ಐದು ಬೋಗಿಗಳು ದುಧನಿ ನಿಲ್ದಾಣದಲ್ಲಿ ಭಾನುವಾರ ಮಧ್ಯರಾತ್ರಿ ಹಳಿ ತಪ್ಪಿದ್ದರಿಂದ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಇದರಿಂದ ಸುಮಾರು 12 ರೈಲುಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ವಿಜಯಪುರ-ಗುಂತಕಲ್ ಮತ್ತು ವಾಡಿ-ವಿಕಾರಬಾದ್-ಲಾತೂರ್-ಮನ್ಮಾಡ್ ಮಾರ್ಗವಾಗಿ ಸಂಚರಿಸಲಿವೆ.
ಜೈಪುರ ಯಶವಂತಪುರ ಸುವಿಧಾ ವಿಶೇಷ ರೈಲು (82654) ಹುಟಗಿ-ವಿಜಯಪುರ-ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ.
ಅದೇ ರೀತಿ, ರಾಜಕೋಟ್-ಕೊಯಿಮತ್ತೂರ ಎಕ್ಸ್ಪ್ರೆಸ್ ರೈಲು (16613), ಮುಂಬೈ-ಭುವನೇಶ್ವರ ಕೊನಾರ್ಕ್ ಎಕ್ಸ್ಪ್ರೆಸ್ (11019), ಹುಟಗಿ-ಗದಗ-ಗುಂತಕಲ್, ಗುಂಟೂರು -ವಿಜಯವಾಡ ಮಾರ್ಗದಲ್ಲಿ ಸಂಚರಿಸಲಿವೆ.
ಇನ್ನು ಮುಂಬೈ-ಕನ್ಯಾಕುಮಾರಿ ಎಕ್ಸ್ಪ್ರೆಸ್ (16381), ನವದೆಹಲಿ-ಬೆಂಗಳೂರು ಎಕ್ಸ್ಪ್ರೆಸ್ (12628), ಮುಂಬೈ-ಚೆನ್ನೈ ಎಕ್ಸ್ಪ್ರೆಸ್ (11041), ದಾದರ್-ಚೆನ್ನೈ ಎಕ್ಸ್ಪ್ರೆಸ್ (12163),ವಾರಾಣಸಿ-ಮೈಸೂರು ಎಕ್ಸ್ಪ್ರೆಸ್ (16230)ಹುಟಗಿ-ಗದಗ-ವಿಜಯಪುರ-ಗುಂತಕಲ್ ಮಾರ್ಗವಾಗಿ ಸಾಗಲಿವೆ.
ಬೆಂಗಳೂರು-ಅಹ್ಮದಾಬಾದ್ ಎಕ್ಸ್ಪ್ರೆಸ್ (16502), ಕೊಯಿಮತ್ತೂರು-ಲೋಕಮಾನ್ಯ ತಿಲಕ್ ಟರ್ಮಿನಲ್ ಎಕ್ಸ್ಪ್ರೆಸ್(11014), ಬೆಂಗಳೂರು - ನವದೆಹಲಿ ಎಕ್ಸ್ಪ್ರೆಸ್ (12627) ವಾಡಿ-ವಿಕಾರಬಾದ್-ಲಾತೂರ್-ಮನ್ಮಾಡ್ ಮಾರ್ಗವಾಗಿ ಸಂಚರಿಸಲಿವೆ.
ಸಹಾಯವಾಣಿ ಸಂಖ್ಯೆ - CST Mumbai - 22694040; LTT Mumbai - 25280005; Thane - 25334840; Kalyan - 0251 2311499.