ಟ್ವಿಟರ್ನಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ GoBack ಅಭಿಯಾನ
Recommended Video
ಬೆಂಗಳೂರು, ಮಾರ್ಚ್ 07 : ನಟ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಲೋಕಸಭಾ ಚುನಾವಣಾ ಕಣಕ್ಕಿಳಿಯಲು ಬಯಸಿದ್ದಾರೆ. ನಿಖಿಲ್ ಸ್ಪರ್ಧೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಟ್ವಿಟರ್ನಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ #GoBackNikhil_Kumaraswamy ಅಭಿಯಾನ ಆರಂಂಭವಾಗಿದೆ. ಈ ಹ್ಯಾಷ್ ಟ್ಯಾಗ್ ಬಳಸಿ ಹಲವು ಜನರು ಟ್ವೀಟ್ಗಳನ್ನು ಮಾಡಿದ್ದು, ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡಿದ್ದಾರೆ.
ಬಣ್ಣದವರ ಮಾತಿಗೆ ಮಂಡ್ಯದ ಜನ ಬೆರಗಾಗೋದು ಬೇಡ : ಡಿಸಿ ತಮ್ಮಣ್ಣ
ಚಿಕ್ಕಮಗಳೂರಿನಲ್ಲಿ ಈ ಅಭಿಯಾನದ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, 'ನಿಖಿಲ್ ಕುಮಾರಸ್ವಾಮಿಯವರು ಬರಬೇಕು ಅನ್ನೋರು ಇರ್ತಾರೆ. ಹೋಗ್ಬೇಕು ಅನ್ನೋರು ಇರ್ತಾರೆ. ಇದಕ್ಕೆಲ್ಲ ದೊಡ್ಡ ಮಹತ್ವ ಕೊಡಬೇಕಿಲ್ಲ' ಎಂದು ಹೇಳಿದರು.
ಸುಮಲತಾ ಮುಂದೆ 4 ಪ್ರಶ್ನೆಗಳಿಟ್ಟ ಅಂಬರೀಶ್ ಅಭಿಮಾನಿಗಳು
ಮಂಡ್ಯ ಕ್ಷೇತ್ರ ವಿವಿಧ ಕಾರಣಗಳಿಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆಯುತ್ತಿದೆ. ಜೆಡಿಎಸ್ನಿಂದ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯಲಿದ್ದಾರೆ? ಎಂಬುದು ಇನ್ನೂ ಖಚಿತವಾಗಿಲ್ಲ. ಜೆಡಿಎಸ್ ಅಭ್ಯರ್ಥಿಗೆ ಎದುರಾಳಿಯಾಗಿ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ...
ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ #ShobhaGoBack ಅಭಿಯಾನ
|
ಸ್ಥಳೀಯ ನಾಯಕತ್ವದಲ್ಲಿ ಕೊರತೆ ಇಲ್ಲ
ಸ್ವಾತಂತ್ರ್ಯಪೂರ್ವದಿಂದಲೂ ರಾಷ್ಟ್ರಮಟ್ಟದ ನಾಯಕರನ್ನು ನೀಡಿದ ಜಿಲ್ಲೆಯಿದು. ಇಂತಹ ಹೋರಾಟದ ಭೂಮಿಯಲ್ಲಿ ಸ್ಪರ್ಧಿಸಲು ಸ್ಥಳೀಯ ನಾಯಕತ್ವದಲ್ಲಿ ಕೊರತೆಯಿಲ್ಲ ಎಂದು ಟ್ವೀಟ್ ಮಾಡಲಾಗಿದೆ.
|
ಪಕ್ಷಕ್ಕಾಗಿ ದುಡಿದವರು
ಬಹುತೇಕ ಮಂಡ್ಯ ಜನತೆಯ ಅಭಿಪ್ರಾಯವಿದು. ಪಕ್ಷಕ್ಕಾಗಿ ದುಡಿದವರನ್ನು ಅದ್ಯಾವ ಕಸಾಯಿಖಾನೆಗೆ ಕಳುಹಿಸುತ್ತೀರಿ ಕುಮಾರಣ್ಣ? ಎಂದು ಪ್ರಶ್ನೆ ಮಾಡಲಾಗಿದೆ.
|
ಕುಟುಂಬದ ಮತ್ತೊಂದು ಕುಡಿ
ಮುಖ್ಯಮಂತ್ರಿಗಳೇ ಪ್ರಚಾರ ಕೊಟ್ಟರೂ ಸಿನಿಮಾಗಳು ಫ್ಲಾಪ್ ಆಗುತ್ತಿವೆ. ಈಗ ಒಕ್ಕಲಿಗ ಎಂಬ ಹೆಸರು ಬಳಸಿಕೊಂಡು ಕುಟುಂಬದ ಮತ್ತೊಂದು ಕುಡಿಯನ್ನು ರಾಜಕೀಯಕ್ಕೆ ತರಲು ಹೊರಟಿದ್ದೀರಿ.
|
ಸುಮಲತಾ ಅಮ್ಮನಿಗೆ ಬೆಂಬಲ
#GoBackNikhil_Kumaraswamy ನಾವು ರೆಬಲ್ ಸ್ಟಾರ್ ಪತ್ನಿ ಸುಮಲತಾ ಅಮ್ಮ ಅವರನ್ನು ಬೆಂಬಲಿಸುತ್ತೇವೆ ಎಂದು ಟ್ವೀಟ್ ಮಾಡಲಾಗಿದೆ.
|
ಮತ್ತೊಂದು ಫ್ಲಾಪ್ ಚಿತ್ರ ಕೊಡಿ
ಸ್ಯಾಂಡಲ್ವುಡ್ಗೆ ವಾಪಸ್ ಹೋಗಿ ಮತ್ತೊಂದು ಫ್ಲಾಪ್ ಚಿತ್ರವನ್ನು ಕೊಡಿ ಎಂದು ಟ್ವೀಟರ್ನಲ್ಲಿ ಟೀಕೆ ಮಾಡಲಾಗಿದೆ.