ಮಹದಾಯಿ ವಿವಾದ : ಕರ್ನಾಟಕ ವಿರುದ್ಧ ಗೋವಾದಿಂದ ದೂರು
ಬೆಂಗಳೂರು, ಜುಲೈ 24: ರಾಜ್ಯದಲ್ಲಿ ಹಲವೆಡೆ ಮಳೆ ಚೆನ್ನಾಗಿ ಸುರಿದಿದ್ದು, ಅಣೆಕಟ್ಟುಗಳು ತುಂಬಿ ತುಳುಕುತ್ತಿವೆ. ಕೃಷ್ಣರಾಜಸಾಗರ, ಮೆಟ್ಟೂರು ಅಣೆಕಟ್ಟುಗಳು ತುಂಬಿರುವುದರಿಂದ ಕರ್ನಾಟಕ -ತಮಿಳುನಾಡು ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿವಾದ ತಣ್ಣಗಾಗಿದೆ. ಆದರೆ, ಗೋವಾ ಮಾತ್ರ ತನ್ನ ಕ್ಯಾತೆ ಮುಂದುವರೆಸಿದೆ.
ಮಹಾದಾಯಿ ವಿಷಯದಲ್ಲಿ ಸುಳ್ಳಾಡಿದ ಮೋದಿ ವಿರುದ್ಧ ದೂರು!
ಕರ್ನಾಟಕ ಮತ್ತು ಗೋವಾ ನಡುವೆ ಮಹದಾಯಿ ನದಿ ನೀರು ಹಂಚಿಕೆ ಹಾಗೂ ಕಳಸಾ ಬಂಡೂರಿ ಯೋಜನೆ ವಿವಾದದ ಕಿಡಿ ಹೊತ್ತುಕೊಂಡಿದೆ.ಮಲಪ್ರಭಾ ಜಲಾನಯನ ಪ್ರದೇಶದ ಪರಿಶೀಲನೆ ನಡೆಸಿದ ಗೋವಾ ರಾಜ್ಯದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು, ಕರ್ನಾಟಕದ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ಕರ್ನಾಟಕ ರಾಜ್ಯವು ಅಕ್ರಮವಾಗಿ, ಮಹದಾಯಿ ನದಿ ನೀರನ್ನು ಮಲಪ್ರಭಾ ಜಲಾನಯನ ಪ್ರದೇಶಕ್ಕೆ ತಿರುಗಿಸಿದೆ. ಈ ಕುರಿತಂತೆ ಕಣಕುಂಬಿ ಗ್ರಾಮಕ್ಕೆ ಭೇಟಿ ನೀಡಿದ್ದ ನಮ್ಮ ಅಧಿಕಾರಿಗಳು ವರದಿ ನೀಡಿದ್ದಾರೆ.
ಕಳಸಾ-ಬಂಡೂರಿ
ಯೋಜನೆ
ಎಂದರೇನು?
ವರದಿ
ಪರಿಶೀಲಿಸಿ,
ಕರ್ನಾಟಕದ
ವಿರುದ್ಧ
ಮಹದಾಯಿ
ಜಲ
ವಿವಾದ
ನ್ಯಾಯಾಧೀಕರಣಕ್ಕೆ
ದೂರು
ನೀಡಲಾಗುವುದು
ಎಂದು
ಗೋವಾ
ಜಲಸಂಪನ್ಮೂಲ
ಸಚಿವ
ವಿನೋದ್
ಪಾಲೇಕರ್
ಹೇಳಿದ್ದಾರೆ.
ಮಹದಾಯಿ ನೀರು ಹಂಚಿಕೆ : ಅಂದಿನಿಂದ ಇಂದಿನವರೆಗೆ
ಕಳೆದ ವರ್ಷ ಸುಪ್ರೀಂಕೋರ್ಟ್ ಕರ್ನಾಟಕಕ್ಕೆ ಆದೇಶ ನೀಡಿ ಮಹದಾಯಿ ಉಪನದಿಯಿಂದ ಜಲದಿಕ್ಕು ಪರಿವರ್ತಿಸಲು ಉದ್ದೇಶ ಹೊಂದಿದ್ದ ಕಾಲುವೆಯೊಂದರ ನಿರ್ಮಾಣ ಕಾಮಗಾರಿಗೆ ತಡೆಯಾಜ್ಞೆ ನೀಡಿತ್ತು.
ವಿನೋದ್ ಪಾಲೇಕರ್ ಅವರಿಂದ ಆರೋಪ
ಆದರೆ, ಸುಪ್ರೀಂಕೋರ್ಟ್ ಆದೇಶವನ್ನು ಮೀರಿ ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ನೀರಿನ ದಿಕ್ಕನ್ನು ತಿರುಗಿಸುವ ಉದ್ದೇಶದಿಂದ 5 ಕಿಮೀ ಉದ್ದದ ಸುರಂಗವನ್ನು ಕರ್ನಾಟಕ ನಿರ್ಮಿಸಿದೆ. ಈ ಬಗ್ಗೆ ಉನ್ನತಾಧಿಕಾರಿಗಳ ತಂಡದ ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ ಎಂದು ವಿನೋದ್ ಪಾಲೇಕರ್ ಹೇಳಿದರು.
ಕರ್ನಾಟಕದ ಅಕ್ರಮ ಜಲದಿಕ್ಕು ಪರಿವರ್ತನೆ ಮಾಡಿರುವುದನ್ನು ವಿರೋಧಿಸಿ, ಜಲ ವಿವಾದ ನ್ಯಾಯಾಧೀಕರಣದ ಮುಂದೆ ಅರ್ಜಿ ಸಲ್ಲಿಸಲು ಉನ್ನತಾಧಿಕಾರಿಗಳ ತಂಡವನ್ನು ದೆಹಲಿಗೆ ಕಳುಹಿಸಲಾಗಿದೆ ಎಂದರು.
ರೈತರ ಪ್ರತಿಭಟನೆ, ಸಾರ್ವಜನಿಕರ ಅಸಹನೆ
ಸಮುದ್ರಕ್ಕೆ ವ್ಯರ್ಥವಾಗಿ ಸೇರುತ್ತಿರುವ 100 ಟಿಎಂಸಿಗೂ ಅಧಿಕ ನದಿ ನೀರಲ್ಲಿ 7.56 ಟಿಎಂಸಿ ಪಾಲು ಕೇಳಿದ ಕರ್ನಾಟಕಕ್ಕೆ ಮತ್ತೆ ಮತ್ತೆ ಮುಖಭಂಗವಾಗುತ್ತಿದೆ. ಜುಲೈ 27ರಂದು ಮಹಾದಾಯಿ ನ್ಯಾಯಾಧೀಕರಣ ಮಧ್ಯಂತರ ತೀರ್ಪು ಕೂಡಾ ಆಘಾತ ತಂದಿದೆ. ಕಾನೂನು ಹೋರಾಟ, ರೈತರ ಪ್ರತಿಭಟನೆ, ಸಾರ್ವಜನಿಕರ ಅಸಹನೆ ಮುಂದುವರೆದಿದೆ.
200 ಟಿಎಂಸಿ ನೀರು ವ್ಯರ್ಥವಾಗಿ ಅರಬ್ಬಿ ಸಮುದ್ರ ಸೇರುತ್ತಿದೆ
ಬೆಳಗಾವಿ ಜಿಲ್ಲೆ ಭೀಮ್ ಘಡ ದ ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಮಾಂಡೋವಿ (ಮಹದಾಯಿ) ನದಿ 77 ಕಿ.ಮೀ ಹರಿಯಲಿದ್ದು ಈ ಪೈಕಿ ಕರ್ನಾಟಕದಲ್ಲಿ 29 ಕಿ.ಮೀ ಹಾಗೂ 52 ಕಿ.ಮೀ ಗೋವಾದಲ್ಲಿ ಹರಿಯುತ್ತದೆ. ಆದರೆ, 200 ಟಿಎಂಸಿ ನೀರು ವ್ಯರ್ಥವಾಗಿ ಅರಬ್ಬಿ ಸಮುದ್ರ ಸೇರುತ್ತಿದೆ.
ಕುಡಿಯುವ ನೀರಿನ ಬೇಡಿಕೆ ಈಡೇರಿಸಲು ನಾವು ಸಿದ್ಧ, ಆದರೆ, ಕೃಷಿ ಚಟುವಟಿಕೆಗಳಿಗೆ ನೀರು ಬಳಸಲು ನೀಡುವುದಿಲ್ಲ, ಇದರಿಂದ ಗೋವಾದಲ್ಲಿ ಜಲಕ್ಷಾಮ ಎದುರಾಗಲಿದೆ ಎಂದು ಗೊವಾ ಸಿಎ ಮನೋಹರ್ ಪಾರಿಕ್ಕಾರ್ ಹೇಳಿದ್ದಾರೆ.
ನ್ಯಾಯಮಂಡಳಿಯು ಮುಂದಿನ ವಾರ ತನ್ನ ತೀರ್ಪು ನೀಡಲಿದೆ
ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿಯು ಮುಂದಿನ ವಾರ ತನ್ನ ತೀರ್ಪು ನೀಡಲಿದೆ. ಆದರೆ, ಇದಕ್ಕೆ ಮುನ್ನವೇ ಕರ್ನಾಟಕವು ಕೈಗೊಂಡಿರುವ ಈ ಅನಧಿಕೃತ ಕ್ರಮವು ನ್ಯಾಯಮಂಡಳಿ ನಿಂದನೆಗೆ ಎಡೆಮಾಡಿಕೊಡುತ್ತದೆ ಎಂದು ಪಾಲೇಕರ್ ಆರೋಪಿಸಿದ್ದಾರೆ.
ಕಳೆದ ವರ್ಷ ಸುಪ್ರೀಂಕೋರ್ಟ್ ಕರ್ನಾಟಕಕ್ಕೆ ಆದೇಶ ನೀಡಿ ಮಹದಾಯಿ ಉಪನದಿಯಿಂದ ಜಲದಿಕ್ಕು ಪರಿವರ್ತಿಸಲು ಉದ್ದೇಶ ಹೊಂದಿದ್ದ ಕಾಲುವೆಯೊಂದರ ನಿರ್ಮಾಣ ಕಾಮಗಾರಿಗೆ ತಡೆಯಾಜ್ಞೆ ನೀಡಿತ್ತು.