ಹಿಮಪ್ರವಾಹ; ಜನರ ಸುರಕ್ಷತೆಗೆ ಯಡಿಯೂರಪ್ಪ ಪ್ರಾರ್ಥನೆ
ಬೆಂಗಳೂರು, ಫೆಬ್ರವರಿ 7: ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಹಿಮಪ್ರವಾಹ ಉಂಟಾಗಿದೆ. ನೂರಾರು ಜನರು ಸಾವನ್ನಪ್ಪಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಘಟನೆ ಕುರಿತು ಟ್ವೀಟ್ ಮಾಡಿದ್ದಾರೆ. "ಹಿಮಪ್ರವಾಹದ ದೃಶ್ಯಗಳು ಮನಕಲಕುವಂತಿದೆ. ಹಲವಾರು ಜನರು ಸಾವನ್ನಪ್ಪಿರು, ಕಣ್ಮರೆಯಾಗಿರುವ ವರದಿಗಳಿವೆ" ಎಂದು ಹೇಳಿದ್ದಾರೆ.
ಉತ್ತರಾಖಂಡ್ ಹಿಮಪಾತ LIVE: 100ಕ್ಕೂ ಅಧಿಕ ಮಂದಿ ಸಾವಿನ ಶಂಕೆ?
"ಹಿಮಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗಾಗಿ ಪ್ರಾರ್ಥಿಸುತ್ತೇನೆ" ಎಂದು ಯಡಿಯೂರಪ್ಪ ತಮ್ಮ ಟ್ವಿಟರ್ ಖಾತೆ ಮೂಲಕ ಭಾನುವಾರ ಟ್ವೀಟ್ ಮಾಡಿದ್ದಾರೆ.
Disturbed to see the visuals of glacier burst in Chamoli district, Uttarakhand, and reports of destruction and several people missing. My thoughts and prayers are with those affected.
— B.S. Yediyurappa (@BSYBJP) February 7, 2021
ಉತ್ತರಾಖಂಡ ರಾಜ್ಯದ ತಪೋವನ್ ಪ್ರದೇಶದ ರೈನಿ ಗ್ರಾಮದಲ್ಲಿ ಹಿಮಪ್ರವಾದಹ ಕಾರಣ ನದಿ ಉಕ್ಕಿ ಹರಿದಿದೆ. ಋಷಿ ಗಂಗಾ ವಿದ್ಯುತ್ ಯೋಜನೆಗೆ ಹಾನಿ ಉಂಟಾಗಿದೆ.
ಉತ್ತರಾಖಂಡ್: ಜೋಶಿ ಮಠ ಭಾಗದಲ್ಲಿ ಭಾರಿ ಹಿಮಪಾತ, ಪ್ರವಾಹ ಭೀತಿ
ರಾಜ್ಯ ವಿಪತ್ತು ನಿರ್ವಹಣಾ ಪಡೆ, ಐಟಿಬಿಪಿ ಯೋಧರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಜಲವಿದ್ಯುತ್ ಯೋಜನೆ ಕಾಮಗಾರಿಯಲ್ಲಿ ತೊಡಗಿದ್ದ 100ಕ್ಕೂ ಹೆಚ್ಚು ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹಿಮಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗಾಗಿ ಉತ್ತರಾಖಂಡ ಸರ್ಕಾರ ಸಹಾಯವಾಣಿಯನ್ನು ಆರಂಭಿಸಿದೆ. ಜನರು ಅಗತ್ಯ ಸಹಾಯಕ್ಕಾಗಿ 1070 ಅಥವ 9557444486 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ರಕ್ಷಣಾ ಕಾರ್ಯಾಚರಣೆಗಾಗಿ ಭಾರತೀಯ ಸೇನೆ 600ಕ್ಕೂ ಅಧಿಕ ಯೋಧರನ್ನು ರಾಜ್ಯಕ್ಕೆ ಕಳುಹಿಸುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.