ಗೀತಾ ಸ್ಪರ್ಧೆ ಕುರಿತು ಶಿವಣ್ಣ ಹೇಳಿದ್ದೇನು?
ಬೆಂಗಳೂರು, ಮಾ.11 : ಶಿವಮೊಗ್ಗ ಕ್ಷೇತ್ರದ ಲೋಕಸಭೆ ಚುನಾವಣೆ ಕಣದ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗುತ್ತಿದೆ. ಪತ್ನಿ ಗೀತಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನನ್ನ ಬೆಂಬಲವಿದೆ ಎಂದು ಮಂಗಳವಾರ ಹೇಳಿದ್ದಾರೆ. ಇದರೊಂದಿಗೆ ಡಾ.ರಾಜ್ ಕುಟುಂಬದ ಸದಸ್ಯರೊಬ್ಬರು ಚುನಾವಣೆಗೆ ಸ್ಪರ್ಧಿಸುವುದು ಖಚಿತವಾದಂತಾಗಿದೆ.
ಬೆಂಗಳೂರಿನಲ್ಲಿ
ಮಂಗಳವಾರ
ಮಾತನಾಡಿದ
ನಟ
ಶಿವರಾಜ್
ಕುಮಾರ್,
ಗೀತಾ
ಸ್ಪರ್ಧೆಗೆ
ನಮ್ಮ
ಕುಟುಂಬದಲ್ಲಿ
ಯಾರ
ವಿರೋಧವೂ
ಇಲ್ಲ.
ಅವರಿಗೆ
ನನ್ನ
ಹಾಗೂ
ಕುಟುಂಬದ
ಸಂಪೂರ್ಣ
ಬೆಂಬಲವಿದೆ,
ಅಗತ್ಯ
ಬಿದ್ದರೆ
ತಾವು
ತಮ್ಮ
ಪತ್ನಿ
ಪರವಾಗಿ
ಚುನಾವಣಾ
ಪ್ರಚಾರ
ಮಾಡುತ್ತೇನೆ
ಎಂದು
ಹೇಳಿದರು.
[ಶಿವಮೊಗ್ಗದಿಂದ
ಗೀತಾ
ಶಿವರಾಜ್
ಕುಮಾರ್
ಸ್ಪರ್ಧೆ]
ಶಿವಮೊಗ್ಗ ಕ್ಷೇತ್ರದಿಂದ ಗೀತಾ ಅವರ ಸ್ಪರ್ಧೆಯ ಕುರಿತು ಮಾರ್ಚ್ 17ರಂದು ಪತ್ರಿಕಾಗೋಷ್ಠಿ ನಡೆಸಲಾಗುವುದು. ಅಂದು ಎಲ್ಲಾ ವಿಷಯಗಳನ್ನು ಮಾಧ್ಯಮಗಳಿಗೆ ತಿಳಿಸುತ್ತೇನೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. ಶಿವರಾಜ್ ಕುಮಾರ್ ಬೆಂಬಲ ವ್ಯಕ್ತಪಡಿಸಿರುವುದರಿಂದ ಗೀತಾ ಅವರು ಚುನಾವಣೆಗೆ ಸ್ಪರ್ಧಿಸುವುದು ಬಹುತೇಖ ಖಚಿತ ಎಂದು ಹೇಳಲಾಗುತ್ತಿದೆ. [ಮಧು ಸ್ಪರ್ಧಿಸೋಲ್ಲ : ಎಚ್ಡಿಕೆ ]
ಅಂದಹಾಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಇನ್ನೂ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಆಮ್ ಆದ್ಮಿ ಪಕ್ಷದಿಂದ ಶ್ರೀಧರ್ ಕಲ್ಲಹಳ್ಳಿ ಸ್ಪರ್ಧಿಸುತ್ತಿದ್ದು, ದಿ. ಎಸ್.ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. [ಚುನಾವಣಾ ವೇಳಾಪಟ್ಟಿ]
ಜೆಡಿಎಸ್ ಪಕ್ಷ ಸೋಮವಾರ 12 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಗೀತಾ ಶಿವರಾಜ್ ಕುಮಾರ್ ಮತ್ತು ಸೊರಬ ಶಾಸಕ ಮಧು ಬಂಗಾರಪ್ಪ ಹೆಸರನ್ನು ಅಂತಿಮಗೊಳಿಸಲಾಗಿದೆ. ಇವರಲ್ಲಿ ಯಾರು ಸ್ಪರ್ಧಿಸಲಿದ್ದಾರೆ ಎಂಬ ಪ್ರಶ್ನೆಗೆ ಮಾ.17ರಂದು ಶಿವರಾಜ್ ಕುಮಾರ್ ಕರೆದಿರುವ ಪತ್ರಿಕಾಗೋಷ್ಠಿಯಲ್ಲಿ ಉತ್ತರ ದೊರೆಯುವ ಸಾಧ್ಯತೆ ಇದೆ. [ಇಲ್ಲಿದೆ ನೋಡಿ ಜೆಡಿಎಸ್ ಮೊದಲ ಪಟ್ಟಿ]
ಶಿವಮೊಗ್ಗ ಕ್ಷೇತ್ರದ ಈ ಬಾರಿಯ ಚುನಾವಣೆ ಎರಡು ಕುಟುಂಬಗಳ ನಡುವಿನ ಪ್ರತಿಷ್ಠೆಯ ಪ್ರಶ್ನೆಯಾಗಿದೆ. 2008ರ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿದ್ದ ಬಂಗಾರಪ್ಪ ಸೋಲು ಅನುಭವಿಸಿದ್ದರು. ನಂತರ 2009ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ವಿರುದ್ಧ ಸ್ಪರ್ಧಿಸಿ ಬಂಗಾರಪ್ಪ ಸೋಲು ಅನುಭವಿಸಿದ್ದರು.
ಆದ್ದರಿಂದ, ಈ ಬಾರಿ ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಕುಮಾರ್ ಕ್ಷೇತ್ರದಿಂದ ಸ್ಪರ್ಧಿಸಿದರೆ ಕ್ಷೇತ್ರದ ಚುನಾವಣೆ ಕಣ ಮತ್ತೊಮ್ಮೆ ಬಂಗಾರಪ್ಪ ಯಡಿಯೂರಪ್ಪ ಕುಟುಂಬದ ನಡುವಿನ ಹೋರಾಟವಾಗಲಿದೆ. ಈ ಬಾರಿ ಪುತ್ರನ ಬದಲು ಯಡಿಯೂರಪ್ಪ ಸ್ವತಃ ಕಣಕ್ಕೆ ಇಳಿದಿರುವುದು ಉಳಿದ ಪಕ್ಷಗಳ ಚಿಂತೆಗೆ ಕಾರಣವಾಗಿರುವುದು ಗುಟ್ಟಾಗಿ ಉಳಿದಿಲ್ಲ.