ಮಾಲಾಧಾರಿ ಭಕ್ತರ ಮೇಲೆ ಲಾಠಿ ಚಾರ್ಜ್, ಗಂಗಾವತಿ ಉದ್ವಿಗ್ನ
ಕೊಪ್ಪಳ ಡಿಸೆಂಬರ್ 12: ಗಂಗಾವತಿಯಲ್ಲಿ ಚಿಕ್ಕದಾಗಿ ಪ್ರಾರಂಭವಾದ ಗಲಾಟೆ ಈಗ ದೊಡ್ಡ ಪರಿಣಾಮ ಬೀರಿದೆ. ಎರಡು ಧರ್ಮಗಳ ನಡುವೆ ದೊಡ್ಡ ಅವಾಂತರ ಸೃಷ್ಟಿಸಿದ್ದು 144 ಸೆಕ್ಷನ್ ಜಾರಿ ನಡುವೆ ಹನುಮಮಾಲಾ ಮತ್ತು ಅಯ್ಯಪ್ಪ ಮಾಲಾ ಧಾರಿಗಳ ಮೇಲೆ ಪೊಲೀಸ್ ಲಾಠಿ ಚಾರ್ಚ್ ಮಾಡಿದ್ದಾರೆ.
ಕೊಪ್ಪಳದ ಗಂಗಾವತಿ ನಗರದಲ್ಲಿ ಭಾನುವಾರ ಮಧ್ಯಾಹ್ನದಿಂದ ಬೆಂಕಿ ಹೊತ್ತಿ ಉರಿಯುತ್ತಿದೆ. ಹನುಮಮಾಲಾ ಧಾರಾಣ ಯಾತ್ರೆ ಹಾಗೂ ಈದ್ ಮಿಲಾದ್ ಆಚರಣೆಯ ಮೆರವಣಿಗೆಯ ಧ್ವಜ ಕಟ್ಟುವ ಸಂಬಂಧ ಕಿಡಿ ಹೊತ್ತಿದೆ. ಎರಡು ಕೋಮುಗಳ ಕೆಲ ಯುವಕರ ನಡುವಿನ ಈ ಗಲಾಟೆ ಇಡೀ ಊರಿನ ನೆಮ್ಮದಿಯನ್ನು ಹಾಳು ಮಾಡಿದ್ದು, ಹನುಮಮಾಲಾ ಧಾರಣಯಾತ್ರೆ ಭಕ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಹನುಮ ಮಾಲಾಧಾರಿಗಳು ಮತ್ತು ಈದ್ ಮಿಲಾದ್ ಆಚರಣೆಯ ಯಾತ್ರೆ ಒಂದೇ ಬೀದಿಯಲ್ಲಿ ಸಾಗುವ ಕಾರಣ ಈ ಪರಿಸ್ಥಿತಿ ಎದುರಾಗಿದೆ.[ಬೆಂಗಳೂರಿನಲ್ಲಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ]
ಆಚರಣೆಗೆ ಮುನ್ನವೇ ಪೊಲೀಸರು ಶಾಂತಿಯುತವಾಗಿ ತಮ್ಮ ತಮ್ಮ ಹಬ್ಬಗಳನ್ನು ಆಚರಿಸಿ ಎಂದು ಹೇಳಿದ್ದರು. ಅಲ್ಲದೆ ಯಾತ್ರೆಗಳಿಗೆ ಅವಕಾಶ ನೀಡಿರಲಿಲ್ಲ ಆದರೆ ಮಾಲಾಧಾರಿಗಳು ಯಾತ್ರೆಯನ್ನು ಪ್ರಾರಂಭಿಸಿದ್ದು, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಯುವಕರು ಕೆಲ ಮನೆಗಳ ಮೇಲೆ ದೌರ್ಜನ್ಯದಿಂದ ಧ್ವಜ ಕಟ್ಟಿದ್ದಾರೆ. ಇದರ ವಿರುದ್ಧ ಮುಸ್ಮೀಮರ ವಿರೋಧ ವ್ಯಕ್ತವಾದ ಹಿನ್ನೆಲೆ ಯುವಕರು ಕಲ್ಲು ತೂರಾಟ, ದೇವಾಲಯ ಮತ್ತು ಅಂಗಡಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಇದರಿಂದ ಮತ್ತೊಂದು ಕೋಮಿನವರು ಪ್ರತಿಭಟಿಸಿದ್ದು ಗಂಗಾವತಿಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ.
ಭಕ್ತರ
ಮೇಲೆ
ಲಾಠಿ
ಪ್ರಹಾರ
ಹಿಂದೂ-
ಮುಸ್ಲಿಂ
ಕೋಮಿಗಳ
ನಡುವೆ
ಉಂಟಾದ
ಘರ್ಷಣೆಯನ್ನು
ಪೊಲೀಸರು
ಹತ್ತಿಕ್ಕಲು
ಹನುಮಮಾಲಾ
ಹಾಗೂ
ಅಯ್ಯಪ್ಪಮಾಲಾ
ಭಕ್ತರ
ಮೇಲೆ
ಲಾಠಿ
ಚಾರ್ಜ್
ನಡೆಸಿದರು.
ಇದರಿಂದ
ಗಂಗಾವತಿ
ನಗರದಲ್ಲಿ
ಪಂಪಾ
ಸರ್ಕಲ್
ಬಳಿ
ಅಂಗಡಿ
ಹಾಗೂ
ಬೈಕಿಗೆ
ಕಿಡಿಗೇಡಿಗಳು
ಬೆಂಕಿ
ಹಚ್ಚಿದರು.
ಖಾಸಗಿ
ನರ್ಸಿಂಗ್
ಹೋಂನ
ಗಾಜುಗಳನ್ನ
ಪುಡಿ
ಪುಡಿ
ಮಾಡಿದರು.
ಅಂಗಡಿಗಳ
ಸಾಮಾನುಗಳನ್ನ
ಚೇಲ್ಲಾಪಿಲ್ಲಿಯಾಗಿ
ಕೆಡವಲಾಯಿತು.
ಪೊಲೀಸರು
ಬೆಂಕಿ
ನಂದಿಸಿದರು.
ಅದರೆ
ಸೋಮವಾರವು
ಭಕ್ತರ
ಯಾತ್ರೆ
ಪಾರಂಭವಾಗಿದ್ದು
144
ಸೆಕ್ಷನ್
ಜಾರಿ
ನಂತರವೂ
ನಡೆದ
ಯಾತ್ರೆಗೆ
ಪೊಲೀಸರು
ಉತ್ತರ
ನೀಡಿದ್ದಾರೆ.[ಸೆ.25ರ
ತನಕ
ಬೆಂಗಳೂರಲ್ಲಿ
ನಿಷೇಧಾಜ್ಞೆ
ಮುಂದುವರಿಕೆ]
144
ಸೆಕ್ಷನ್
ಜಾರಿ
ಸದ್ಯ
ಗಂಗಾವತಿ
ನಗರದಲ್ಲಿ
144
ಸೆಕ್ಷೆನ್
ಜಾರಿಗೊಳಿಸಲಾಗಿದೆ.
ಸೋಮವಾರ
ನಗರದಲ್ಲಿ
ಹನುಮ
ಮಾಲಾ
ಧಾರಿಗಳು
ಶೋಭಾ
ಯಾತ್ರೆ
ನಡೆಸುತ್ತಿದ್ದ
ಸಂದರ್ಭದಲ್ಲಿ
ಮತ್ತೆ
ಅಶಾಂತಿ
ಉಂಟಾಗಿದ್ದು
ಮಾಲಾ
ಧಾರಿಗಳ
ಮೇಲೆ
ಲಾಠಿ
ಪ್ರಹಾರ
ಮಾಡಿದ್ದಾರೆ.
ಇದಕ್ಕೆ
ಶ್ರೀರಾಮ
ಸೇನಾ
ಅಧ್ಯಕ್ಷ
ಪ್ರಮೋದ್
ಮುತಾಲಿಕ್
ಆಕ್ರೋಶ
ವ್ಯಕ್ತಪಡಿಸಿದ್ದಾರೆ.
ಪೊಲೀಸರು ಸೋಮವಾರ ಹನುಮಾ ಮಾಲಾದಾರಿಗಳು ಮೊದಲು ತಮ್ಮ ಯಾತ್ರೆ ನಡೆಸಿ ನಂತರ ಈದ್ ಮಿಲಾದ್ ಗೆ ಅವಕಾಶ ಮಾಡಿಕೊಡಿ ಎಂದು ಪರಸ್ಪರ ಕೋಮಿನ ಮುಖಂಡರಲ್ಲಿ ಚರ್ಚೆ ನಡೆಸಿದ್ದರು.