ಸ್ವಾತಂತ್ರ್ಯ ಹೋರಾಟಗಾರ ಫಕೀರಪ್ಪ ರೆಡ್ಡಿ ಗದ್ದಿಕೇರಿ ನಿಧನ
ಕೊಪ್ಪಳ, ಆಗಸ್ಟ್ 18: ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯ ನೇತಾರ ಫಕೀರಪ್ಪ ರೆಡ್ಡಿ ಗದ್ದಿಕೇರಿ ಇಂದು ಮುಂಜಾನೆ ಅಸುನೀಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ಹಿರಿಯ ರಂಗಕರ್ಮಿ ನಾಡೋಜ ಏಣಗಿ ಬಾಳಪ್ಪ ವಿಧಿವಶ
ವಯೋಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಫಕೀರಪ್ಪ ರೆಡ್ಡಿ ಗದ್ದಿಕೇರಿ ಗದಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶುಕ್ರವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಫಕೀರಪ್ಪರೆಡ್ಡಿ ಕೊನೆಯುಸಿರೆಳೆದಿದ್ದಾರೆ.
ರಾಜ್ಯೋತ್ಸವ
ಪ್ರಶಸ್ತಿ
ಸಹಿತ
ಹಲವು
ಪ್ರಶಸ್ತಿ,
ಗೌರವಗಳಿಗೆ
ಪಾತ್ರರಾಗಿದ್ದ
ಫಕೀರಪ್ಪ
ರೆಡ್ಡಿ
ಹೈದರಾಬಾದ್
ಕರ್ನಾಟಕ
ವಿಮೋಚನಾ
ಚಳವಳಿಯ
ನೇತೃತ್ವ
ವಹಿಸಿ
ಹೋರಾಟ
ನಡೆಸಿದ್ದರು.
ಹೈದರಾಬಾದ್
ಕರ್ನಾಟಕವನ್ನು
ನಿಜಾಮರ
ಆಡಳಿತದಿಂದ
ಮುಕ್ತಗೊಳಿಸುವಲ್ಲಿ
ಫಕೀರಪ್ಪ
ರೆಡ್ಡಿ
ಪ್ರಮುಖ
ಪಾತ್ರ
ವಹಿಸಿದ್ದರು.
ಫಕೀರಪ್ಪ ರೆಡ್ಡಿಯವರ ಕೊನೆಯ ಇಚ್ಛೆಯಂತೆ ಅವರ ಪಾರ್ಥಿವ ಶರೀರವನ್ನು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಆಯುರ್ವೇದಿಕ್ ಕಾಲೇಜ್ಗೆ ದಾನ ನೀಡುವುದಾಗಿ ಕುಟುಂಬದವರು ಮಾಹಿತಿ ನೀಡಿದ್ದಾರೆ.