ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೆ ಓಕೆ ಎಂದ ಡಿಕೆ ಶಿವಕುಮಾರ್
ಬೆಂಗಳೂರು, ಅ. 18: ಸೊರಬ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಕಳೆದ ಆರು ತಿಂಗಳಿನಿಂದ ಹರಿದಾಡಿರುವ ಸುದ್ದಿ. ಈ ಸುದ್ದಿ ಬಗ್ಗೆ ಎಂಎಲ್ಸಿ ಆರ್ ಪ್ರಸನ್ನಕುಮಾರ್ ಅವರು ಅಪ್ಡೇಟ್ ಕೊಟ್ಟಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಸೋತ ಬಳಿಕ ಮಧು ಬಂಗಾರಪ್ಪ ಅವರು ಜೆಡಿಎಸ್ ಪಕ್ಷದಿಂದ ದೂರವೇ ಉಳಿದಿದ್ದಾರೆ. ಮಧು ಬಂಗಾರಪ್ಪ ಅವರನ್ನು ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಭೇಟಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಮಾತುಕತೆ ನಡೆಸಿದ್ದು ನೆನಪಿರಬಹುದು. ಆದರೆ, ಈ ಬಗ್ಗೆ ಮಧು ಇನ್ನೂ ನಿರ್ಧರಿಸಿರಲಿಲ್ಲ.
ಮಧು ಬಂಗಾರಪ್ಪ ಜೆಡಿಎಸ್ ಬಿಟ್ಟರೆ ಅಭ್ಯಂತರವಿಲ್ಲ ಎಂದ ಎಚ್ಡಿಕೆ
''ನಾನು ಕಾರ್ಯಾಧ್ಯಕ್ಷನಾಗಿರಲಿ ಅಥವಾ ಸಾಮಾನ್ಯ ಕಾರ್ಯಕರ್ತ ಆಗಿರಲಿ, ನನ್ನೊಂದಿಗೆ ಇರುವ ಬಂಗಾರಪ್ಪ ಅನ್ನುವ ಹಸರೇ ದೊಡ್ಡ ಹುದ್ದೆ, ಪಕ್ಷ ಬಿಡುವಾಗ ಹೇಳಿಯೇ ಹೋಗುತ್ತೇನೆ'' ಎಂದು ಮಧು ಬಂಗಾರಪ್ಪ ಹೇಳಿದ್ದರು. ಜೊತೆಗೆ ''ಜೆಡಿಎಸ್ ಪಕ್ಷ ನಾಯಕರನ್ನು ಸೃಷ್ಟಿ ಮಾಡುತ್ತಿದೆ, ಆದರೆ ಆ ನಾಯಕರನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುವುದಿಲ್ಲ'' ಎಂದು ಮಧು ಬಂಗಾರಪ್ಪ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ರಮೇಶ್ ಬಾಬು ಅವರು ಜೆಡಿಎಸ್ ತೊರೆಯಲು ಮುಂದಾಗಿದ್ದಾಗ ಈ ರೀತಿ ಪ್ರತಿಕ್ರಿಯಿಸಿದ್ದರು. ಈಗ ರಮೇಶ್ ಬಾಬು ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ.
ಸಮ್ಮತಿ
ನೀಡಿದ
ಕೆಪಿಸಿಸಿ
ಅಧ್ಯಕ್ಷ
ಕೆಪಿಸಿಸಿ
ಅಧ್ಯಕ್ಷ
ಡಿ.ಕೆ
ಶಿವಕುಮಾರ್
ಅವರು
ಮಧು
ಬಂಗಾರಪ್ಪ
ಅವರ
ಸೇರ್ಪಡೆ
ಬಗ್ಗೆ
ಸಮ್ಮತಿ
ಸೂಚಿಸಿ,
ಪಕ್ಷದ
ಸಿದ್ಧಾಂತವನ್ನು
ಒಪ್ಪಿ
ಯಾರೇ
ಬಂದರೂ
ಸ್ವಾಗತಿಸುವುದಾಗಿ
ಹೇಳಿದ್ದಾರೆ
ಎಂಬ
ಮಾಹಿತಿಯನ್ನು
ಎಂಎಲ್ಸಿ
ಪ್ರಸನ್ನ
ಕುಮಾರ್
ನೀಡಿದ್ದಾರೆ.
ಶೀಘ್ರವೇ
ಮಧು
ಅವರು
ಕಾಂಗ್ರೆಸ್
ಸೇರಲಿದ್ದಾರೆ.
ಉಪ
ಚುನಾವಣೆ
ವೇಳೆಯಲ್ಲಿ
ಪಕ್ಷ
ಸಂಘಟನೆಗೆ
ಹೆಚ್ಚಿನ
ಬಲ
ಸಿಗಲಿದೆ
ಎಂದು
ಹೇಳಿದರು.
ಎಚ್
ಡಿ
ಕುಮಾರಸ್ವಾಮಿ
ಪ್ರತಿಕ್ರಿಯೆ:
''ಬಂದು
ಹೋಗುವವರ
ಬಗ್ಗೆ
ನಾನು
ತಲೆ
ಕೆಡಿಸಿಕೊಳ್ಳುವುದಿಲ್ಲ
ಈಗಾಗಲೇ
ಹಲವಾರು
ಬಾರಿ
ಇಬ್ಬರನ್ನೂ(ಮಧು,
ರಮೇಶ್
ಬಾಬು)
ಕರೆದು
ಮಾತನಾಡಿದ್ದೇನೆ.
ಇನ್ನೂ
ನಾನು
ಎಷ್ಟು
ಬಾರಿ
ಕರೆದು
ಮಾತನಾಡಲಿ?
ದೊಡ್ಡ
ಪಕ್ಷಕ್ಕೆ
ಸೇರಿ
ಏನೋ
ಸಾಧನೆ
ಮಾಡುತ್ತೇನೆಂಬ
ಭ್ರಮೆ
ಅವರಲ್ಲಿದೆ.
ನಮ್ಮ
ಪಕ್ಷ
ಅವರನ್ನು
ಚೆನ್ನಾಗಿ
ನೋಡಿಕೊಂಡಿತ್ತು.
ಪಕ್ಷ
ಬಿಟ್ಟು
ಹೋಗುವುದಾದರೆ
ಹೋಗಲಿ
ಎಂದು
ಕುಮಾರಸ್ವಾಮಿ
ಈ
ಹಿಂದೆ
ಹೇಳಿದ್ದರು.