ಕಾಂಗ್ರೆಸ್ ತೊರೆದ ಮುಮ್ತಾಜ್ ಅಲಿಖಾನ್
ಬೆಂಗಳೂರು, ಫೆ. 24 : ಮಾಜಿ ಸಚಿವ ಮುಮ್ತಾಜ್ ಅಲಿಖಾನ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಪ್ರಯೋಜಕನಾಗಿ ಉಳಿಯುವುದಕ್ಕಿಂತ ಸಮಾಜ ಸೇವೆ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
'ಬಿಜೆಪಿಯಲ್ಲಿ
ನನಗೆ
ಅನ್ಯಾಯವಾಗಿದೆ.
ಅದರಲ್ಲೂ
ಕೆ.ಎಸ್.ಈಶ್ವರಪ್ಪ
ಅವರಿಂದ
ನನಗೆ
ಬಹಳ
ಅನ್ಯಾಯವಾಗಿದೆ.
ಆದ್ದರಿಂದ
ಪಕ್ಷ
ಬಿಡುತ್ತಿದ್ದೇನೆ'
ಎಂದು
2013ರಲ್ಲಿ
ವಿಧಾನಪರಿಷತ್
ಸದಸ್ಯ
ಸ್ಥಾನಕ್ಕೆ
ರಾಜೀನಾಮೆ
ನೀಡಿ
ಅಲಿಖಾನ್
ಕಾಂಗ್ರೆಸ್
ಸೇರಿದ್ದರು.
[ಬಿಜೆಪಿಗೆ
ಮುಮ್ತಾಜ್
ಅಲಿಖಾನ್
ಗುಡ್
ಬೈ]
ಸದ್ಯ, ಕಾಂಗ್ರೆಸ್ ಪಕ್ಷ ತೊರೆದಿರುವ ಮುಮ್ತಾಜ್ ಅಲಿಖಾನ್ ಸಮಾಜ ಸೇವೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನುಡಿದಂತೆ ನಡೆಯುತ್ತಿಲ್ಲ, ಅಲ್ಪ ಸಂಖ್ಯಾತ ಸಮುದಾಯಕ್ಕೆ ಯಾವುದೇ ಕೊಡುಗೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. [ಹುಟ್ಟುಹಬ್ಬದಂದು ಮನಬಿಚ್ಚಿ ಮಾತನಾಡಿದ ಪರಮೇಶ್ವರ್]
ಪರಮೇಶ್ವರ್ ಪರ ಬ್ಯಾಟಿಂಗ್ : ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಮಾಡಿಲ್ಲ. ಕಾಂಗ್ರೆಸ್ ಪಕ್ಷ ಸೇರಿ ವರ್ಷಗಳು ಕಳೆದರೂ ಯಾವುದೇ ಸ್ಥಾನ-ಮಾನ ನೀಡಿಲ್ಲ ಎಂದು ದೂರಿರುವ ಅಲಿಖಾನ್ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹಜ್ ಘರ್ ನಿರ್ಮಾಣಕ್ಕಾಗಿ ರಚನೆಯಾಗಿದ್ದ ಹೈಪರ್ ಕಮಿಟಿಯಿಂದ ಮೂಲ ಸೌಕರ್ಯ ಸಚಿವ ರೋಷನ್ ಬೇಗ್ ತಮ್ಮನ್ನು ಹೊರಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಸಹ ರೋಷನ್ ಬೇಗ್ ಅವರ ಮಾತು ಕೇಳುತ್ತಿದ್ದಾರೆ. ಇಂತಹ ಪಕ್ಷದ ಚಟುವಟಿಕೆಗಳಿಂದ ಮನನೊಂದು ರಾಜೀನಾಮೆ ನೀಡುತ್ತಿದ್ದೇನೆ ಎಂದು ಅಲಿಖಾನ್ ಹೇಳಿದ್ದಾರೆ.