ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೀತಂ ಗೌಡ ಮನೆ ಮೇಲೆ ದಾಳಿ: ಸಿದ್ದರಾಮಯ್ಯ ಖಂಡನೆ

|
Google Oneindia Kannada News

Recommended Video

ಹಾಸನ ಬಿಜೆಪಿ ಶಾಸಕನ ಮನೆ ಜೆಡಿಎಸ್ ಕಾರ್ಯಕರ್ತರಿಂದ ದಾಳಿಯಾದ ಬಗ್ಗೆ ಸಿದ್ದು ಗರಂ | Oneindia Kannada

ಬೆಂಗಳೂರು, ಫೆಬ್ರವರಿ 13: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಕುರಿತು ಕೀಳಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಹಾಸನ ಶಾಸಕ ಪ್ರೀತಂ ಗೌಡ ಅವರ ಮನೆಯ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಿದ ಘಟನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ.

ಕಾರ್ಯಕರ್ತರು ಸಂಯಮದಿಂದ ವರ್ತಿಸಬೇಕು ಮತ್ತು ಈ ಘಟನೆ ವಿಚಾರದಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ದೇವೇಗೌಡ ಬಗ್ಗೆ ಆಕ್ಷೇಪಾರ್ಹ ಮಾತು: ಬಿಜೆಪಿ ಶಾಸಕನ ಮನೆ ಮುಂದೆ ಪ್ರತಿಭಟನೆ ದೇವೇಗೌಡ ಬಗ್ಗೆ ಆಕ್ಷೇಪಾರ್ಹ ಮಾತು: ಬಿಜೆಪಿ ಶಾಸಕನ ಮನೆ ಮುಂದೆ ಪ್ರತಿಭಟನೆ

ಹಾಗೆಯೇ, ದೇವೇಗೌಡರ ಸಾವಿನ ಕುರಿತು ಪ್ರೀತಂ ಗೌಡ ನೀಡಿದ ಹೇಳಿಕೆಯನ್ನು ಸಹ ಅವರು ಖಂಡಿಸಿದ್ದಾರೆ. ಈ ಬಗ್ಗೆ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

Array

ಹಿಂಸಾನಂದ ಮನಸ್ಥಿತಿ

ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹೊಂದುವುದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಹಜ. ಆದರೆ, ವಿರೋಧ ಪಕ್ಷದ ನಾಯಕರಿಗೆ ಅವರ ವೈಯಕ್ತಿಕ ಬದುಕಿನಲ್ಲಿ ಕೆಡುಕನ್ನು ಬಯಸುವುದು ಹಿಂಸಾನಂದ ಮನಸ್ಥಿತಿಯುಳ್ಳ ಜನರಿಂದ ಮಾತ್ರ ಸಾಧ್ಯ. ಈ ಹಿಂದೆ ಈ ಪದಗಳನ್ನು ಜನಾರ್ದನ ರೆಡ್ಡಿ ಅವರ ಬಾಯಿಯಿಂದ ಕೇಳಿದ್ದೆವು.

ಎಚ್‌ಡಿಕೆ-ರೇವಣ್ಣ ವಿರುದ್ಧ ಕೊಲೆ ಸಂಚಿನ ಆರೋಪ ಹೊರಿಸಿದ ಬಿಜೆಪಿ ಶಾಸಕ ಪ್ರೀತಂಗೌಡ ಎಚ್‌ಡಿಕೆ-ರೇವಣ್ಣ ವಿರುದ್ಧ ಕೊಲೆ ಸಂಚಿನ ಆರೋಪ ಹೊರಿಸಿದ ಬಿಜೆಪಿ ಶಾಸಕ ಪ್ರೀತಂಗೌಡ

Array

ಪಾರ್ಥೇನಿಯಂ ಕಿತ್ತುಹಾಕಬೇಕಿದೆ

ಈಗ ಬಿಜೆಪಿಯ ವಿದೂಷಕನ ಮಾತುಗಳು. ಅದು ಯಾರೇ ಇರಲಿ ವೈಯಕ್ತಿಕ ದ್ವೇಷವನ್ನು ಪ್ರಕಟಿಸುವುದು ಬಿಜೆಪಿಯ ಡಿಎನ್‌ಎದಲ್ಲಿಯೇ ಇದೆ ಎನ್ನುವುದು ಸ್ಪಷ್ಟವಾದ ಸಂಗತಿ. ಈ ಪಾರ್ಥೇನಿಯಂ ಕಳೆಯನ್ನು ಕಿತ್ತುಹಾಕುವ ಅಗತ್ಯವಿದೆ. ಈ ಹಿಂದೆ ಮಹಾತ್ಮಾ ಗಾಂಧೀಜಿ ಮತ್ತು ಈಗ ವಿರೋಧ ಪಕ್ಷಗಳ ನಾಯಕರು.

ಬಿಜೆಪಿ ಶಾಸಕ ಪ್ರೀತಂ ಹಾಗೂ ಟ್ವೀಟ್ ವಿರುದ್ಧ ಪ್ರಜ್ವಲ್ ಫ್ಯಾನ್ಸ್ ಗರಂ ಬಿಜೆಪಿ ಶಾಸಕ ಪ್ರೀತಂ ಹಾಗೂ ಟ್ವೀಟ್ ವಿರುದ್ಧ ಪ್ರಜ್ವಲ್ ಫ್ಯಾನ್ಸ್ ಗರಂ

Array

ಆಗ ಜನಾರ್ದನ ರೆಡ್ಡಿ, ಈಗ...

ವಿರೋಧಿಗಳ ಸಾವು ಬಯಸುವಷ್ಟು ರಾಜಕಾರಣಿಗಳು ಅಧೋಗತಿಗೆ ಇಳಿಯಬಾರದು. ಈದುರ್ಬುದ್ದಿ ಬಿಜೆಪಿ ರಕ್ತದಲ್ಲಿದೆ. ಹಿಂದೆ ಜನಾರ್ದನ ರೆಡ್ಡಿ ನನ್ನ ಕುಟುಂಬದ ಬಗ್ಗೆ ಹೇಳಿದ್ದ ಮಾತನ್ನೇ ಈಗ ಬಿಜೆಪಿ ನಾಯಕರು ದೇವೇಗೌಡ ಕುಟುಂಬದ ಬಗ್ಗೆ ಹೇಳಿದ್ದಾರೆ. ಖಂಡನೀಯ ನಡವಳಿಕೆ ಎಂದಿರುವ ಸಿದ್ದರಾಮಯ್ಯ, ಮಾತಾಡು ಬಿಜೆಪಿ ಮಾತಾಡು ಎಂಬ ಹ್ಯಾಷ್ ಟ್ಯಾಗ್ ಬಳಸಿದ್ದಾರೆ.

'ಯಾರದೋ ಟ್ಯಾಕ್ಸ್ ದುಡ್ಡು, ದೇವೇಗೌಡ್ರ ಮೊಮ್ಮಕ್ಕಳ ಮೋಜು': ಬಿಜೆಪಿ 'ಯಾರದೋ ಟ್ಯಾಕ್ಸ್ ದುಡ್ಡು, ದೇವೇಗೌಡ್ರ ಮೊಮ್ಮಕ್ಕಳ ಮೋಜು': ಬಿಜೆಪಿ

ಘಟನೆ ಖಂಡನೀಯ

ಹಾಸನದ ಶಾಸಕರ ಮನೆ ಮುಂದೆ ನಡೆದಿರುವ ಘಟನೆ ಖಂಡನೀಯ. ಇಂತಹ ಸಂದರ್ಭಗಳನ್ನು ದುಷ್ಕರ್ಮಿಗಳು ದುರ್ಬಳಕೆ ಮಾಡಲು ಪೋಲಿಸರು ಅವಕಾಶ ನೀಡಬಾರದು. ಘಟನೆ ಬಗ್ಗೆ ಪೋಲಿಸರು ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಸಂಯಮದಿಂದ ವರ್ತಿಸಬೇಕು ಎಂದು ಅವರು ಪ್ರೀತಂ ಗೌಡ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿರುವುದನ್ನು ಖಂಡಿಸಿದ್ದಾರೆ.

English summary
Former Chief Minister Siddaramaiah condemn the attack on Hassan MLA preetham gowda's home. He called for impartial investigation. He also condemned the speach by Pretham Gowda on Deve Gowda. ಪ್ರೀತಂ ಗೌಡ ಮನೆ ಮೇಲೆ ದಾಳಿ: ಸಿದ್ದರಾಮಯ್ಯ ಖಂಡನೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X